ಹಂಟರ್ಸ್ ಕಪ್ 2024 : ಲೀಗ್ ಮಾದರಿಯ ಟೀನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ.
(CHIKKAMAGALURU): ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲ್ಲೂಕಿನ ಬಾಳೆಹೊನ್ನೂರು ಗ್ರಾಮದ ಅಕ್ಷರ ನಗರದಲ್ಲಿ ಎರೆಡು ದಿನದ ಕ್ರೀಡಾ ಹಬ್ಬ, ಲೀಗ್ ಮಾದರಿಯ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ.
ಮಲೆನಾಡು ಭಾಗಗಳಲ್ಲಿ ಕ್ರೀಡಾಪಟುಗಳು ಹಾಗೂ ಪ್ರತಿಭಾವಂತ ಕಲಾವಿದರು ಇರುವ ಯುವಕರು ಇದ್ದಾರೆ ಅವರನ್ನು ಬೆಳಕಿಗೆ ತರುವಲ್ಲಿ ಮುಖ್ಯ ಪಾತ್ರ ವಹಿಸಬೇಕಾಗಿದೆ. ಅಕ್ಷರ ನಗರ ಎಂಬ ಊರು ತುಂಬಾ ಉರುಪ್ಪಿನಿಂದ ಇರುವ ಯುವಕರನ್ನು ಒಗ್ಗೂಡಿಸಿ ಎಲ್ಲಾ ಪ್ರತಿಭೆ ಹಾಗೂ ಸಮಾಜದ ಎಲ್ಲರೀತಿಯ ಕಲೆಗಳಿಗೆ ಶಕ್ಷಿ ಯಾದ ಊರಾಗಿದೆ. ಕ್ರೀಡೆಗಳು ಹಾಗೂ ಕಲೆ, ಸಾಂಸ್ಕೃತಿಕವಾಗಿ ಎಲ್ಲ ರೀತಿಯಲ್ಲಿ ಬಾಗವಹಿಸಿ ಎಲ್ಲಾ ಧರ್ಮಗಳ ಯುವಕರು ಒಂದುಗೂಡಿ ಆಟವಾಡುವುದು ಮುಖ್ಯ ಇದೆ ರೀತಿಯಲ್ಲಿ ಮುಂದುವರೆಯಲಿ ಎಂದರು ಆರ್ ಡಿ ಮಹೇಂದ್ರ.
ವಾರ್ಡ್ ನಲ್ಲಿ ಕ್ರೀಡಾಂಗವನ್ನು ಊರಿನ ಯುವಕರೇ ಒಂದುಗೂಡಿ ಕ್ರೀಡಾಂಗಣವನ್ನು ನಿರ್ಮಿಸಿ ಇಂದು ಕ್ರೀಡೆಯನ್ನು ಏರ್ಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಶರತ್, ಸಂದೀಪ್ ಶೆಟ್ಟಿ, ಆರ್ ಡಿ ಮಹೇಂದ್ರ, ಸಮೇಶ್, ಸುಜಿತ್, ರವಿ, ಕುಮಾರ್, ಅಭಿ ನವೀನ್, ಅಶೋಕ್ ಹಾಗೂ ಕ್ರೀಡಾಪಟುಗಳು ಕ್ರೀಡಾ ಅಭಿಮಾನಿಗಳು ಸಹ ಇದ್ದರು.