LatestNews & Updatesಚಿಕ್ಕಮಗಳೂರು

ಮೂರನೆ ಹೆಂಡತಿಯನ್ನು ಬರ್ಬರವಾಗಿ ಕೊಂದು ಪೊಲೀಸ್ ಠಾಣೆಗೆ ಬಂದ ಗಂಡ

ಮೂರನೆ ಹೆಂಡತಿಯನ್ನು ಬರ್ಬರವಾಗಿ ಕೊಂದು ಪೊಲೀಸ್ ಠಾಣೆಗೆ ಬಂದ ಗಂಡ

( ಚಿಕ್ಕಮಗಳೂರು- ಸೆ – 06 ) ಚಿಕ್ಕಮಗಳೂರು ನಗರದಲ್ಲಿ ಗಂಡ ಹೆಂಡತಿಯನ್ನು ಕೊಂದು ಹಾಕಿ ನಂತರ ಪೋಲಿಸ್ ಸ್ಟೇಷನ್ ಗೆ ಬಂದು ಶರಣಾದ ಘಟನೆ ನಡೆದಿದೆ.
ಹೆಂಡತಿ ಶಮಾಭಾನು (34) ಇವರನ್ನು ಮಂಗಳವಾರ ರಾತ್ರಿ ಚಿಕ್ಕಮಗಳೂರು ನಗರದ ಕ್ರಿಶ್ಚಿಯನ್ ಕಾಲೋನಿಯಲ್ಲಿ ಕೊಂದು ಹಾಕಿದ್ದ ( ಶಬ್ಬಿರ್ ಅಹ್ಮದ್) ಗಂಡ ನಂತರ ನಗರದ ಪೊಲೀಸ್ ಠಾಣೆಗೆ ತಾನೇ ಹೋಗಿ ಶರಣಾಗಿದ್ದಾನೆ.

ಪೊಲೀಸರಿಗೆ ಶರಣಾದ ಆರೋಪಿ , ಗಂಡ ಹೆಂಡತಿಯರ ಮಧ್ಯೆ ಜಗಳ ಉಂಟಾಗಿ ಹೆಂಡತಿ ತಲೆದಿಂಬಿನಿಂದ ನನ್ನನ್ನು ಕೊಲ್ಲಲು ಬಂದಳು ಎಂದು ನಂತರ ನಾನು ಸುತ್ತಿಗೆ ತೆಗೆದು ಅವಳ ತಲೆಗೆ ಹೊಡೆದು ಕೊಂದು ಹಾಕಿದೆ ಎಂದು ಗಂಡ ಶಬೀರ್ ಅಹ್ಮದ್ ಮಾಹಿತಿ ನೀಡಿದ್ದಾನೆ.
ಆರೋಪಿ ಶಬಿರ್ ಅಹ್ಮದ್ ಗೆ ಶಮಾಭಾನು ಮೂರನೆ ಹೆಂಡತಿಯಾಗಿದ್ದು, ಮೊದಲ ಹೆಂಡತಿ ಮತ್ತು ಎರಡನೇ ಹೆಂಡತಿ ಇಬ್ಬರೂ ಮರಣ ಹೊಂದಿದ್ದು. ಮೂರನೆ ಹೆಂಡತಿಯನ್ನು ಚಿಕ್ಕಮಗಳೂರು ನಗರದಲ್ಲಿ ಕೊಲೆ ಮಾಡಿ ಪೋಲಿಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ.

Leave a Reply

Your email address will not be published. Required fields are marked *

Scan the code