ನ್ಯೂಸ್ಶಿವಮೊಗ್ಗ

ನಾನು ಪಕ್ಷದ ವಿರುದ್ದ ಅಲ್ಲಾ ಪಕ್ಷಾಂತರಿಯ ವಿರುದ್ಧ ಎಸ್.ಪಿ.ದಿನೇಶ್.

ನಾನು ಪಕ್ಷದ ವಿರುದ್ದ ಅಲ್ಲಾ ಪಕ್ಷಾಂತರಿಯ ವಿರುದ್ಧ ಎಸ್.ಪಿ.ದಿನೇಶ್.

(SHIVAMOGA): ನಾನು ಪಕ್ಷದ ವಿರುದ್ಧವಾಗಿ ಕಣಕ್ಕಿಳಿದಿಲ್ಲ. ಬದಲಾಗಿ ಪಕ್ಷಾಂತರಿಗಳ ವಿರುದ್ಧ ಹೋರಾಡಲು ನಿಂತಿದ್ದೇನೆ ಎಂದು ನೈಋತ್ಯ ಪದವೀಧರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಎಸ್.ಪಿ. ದಿನೇಶ್ ಹೇಳಿದರು.
ಪಟ್ಟಣದ ಖಾಸಗಿ ಹೋಟೆಲ್‌ನಲ್ಲಿ ಸೋಮವಾರ ನಡೆಸಿ ಮಾತನಾಡಿದ ಅವರು, ಈಗಾಗಲೇ ಎರಡು ಬಾರಿ ಕಾಂಗ್ರೆಸ್‌ನಿಂದ ಪರಿಷತ್ ಚುನಾವಣೆಗೆ ನಿಂತು ಅಲ್ಪ ಮತದಿಂದ ಸೋಲನುಭವಿಸಿದ್ದೆ. ಇಲ್ಲಿಯವರೆಗೂ ಪಕ್ಷದ ವಿರುದ್ಧ ಹೆಜ್ಜೆ ಇಟ್ಟಿರಲಿಲ್ಲ. ಆದರೆ ಈ ಬಾರಿ 10 ತಿಂಗಳ ಮೊದಲೇ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ರವರು ಹೇಳಿದ್ದರಿಂದಲೇ ಕ್ಷೇತ್ರಾದ್ಯಂತ ಸಂಚರಿಸಿ ಕೆಲಸ ಮಾಡಿದ್ದೆ. ಆದರೆ ಅಂತಿಮವಾಗಿ ಹೈಕಮಾಂಡ್ ಪಕ್ಷಾಂತರಿಗಳಿಗೆ ಮಣೆ ಹಾಕಿದೆ. ಇದನ್ನು ವಿರೋಧಿಸಿ, ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದೇನೆ ಎಂದರು.

ಇದು ಪಕ್ಷದ ವಿರುದ್ಧದ ಸ್ಪರ್ಧೆಯಲ್ಲ, ಪಕ್ಷಾಂತರಿಯ ವಿರುದ್ಧ. ಹಣ ಬಲವೋ, ಜನ ಬಲವೊ ಎನ್ನುವುದನ್ನು ನಿರ್ಧರಿಸುವ ಚುನಾವಣೆ ಇದು. ಜತೆಯಲ್ಲಿ ನನ್ನಲ್ಲಿ ಋಣಾತ್ಮಕ ಅಂಶಗಳು ಇಲ್ಲದಿರುವುದೂ ಟಿಕೆಟ್ ತಪ್ಪಿಸಲು ಕಾರಣವಾಯಿತೇನೋ? ಎಂದ ಅವರು, ಹಾಲಿ ಕಾಂಗ್ರೆಸ್ ಅಭ್ಯರ್ಥಿ ಆಯನೂರು ಮಂಜುನಾಥ್ ಯಾವೆಲ್ಲ ಪಕ್ಷದಲ್ಲಿ ಎಷ್ಟೆಷ್ಟು ದಿನ ಇದ್ದರೆನ್ನುವುದು ಮತದಾರರು, ಪಕ್ಷದ ಮುಖಂಡರಿಗೂ ಗೊತ್ತಿದೆ. ಆದರೂ ಅವರಿಗೇ ಮಣೆ ಹಾಕಿರುವುದನ್ನು ವಿರೋಧಿಸಿದ್ದೆನೆ. ಇದಕ್ಕೆ ಪಕ್ಷದ ಹಲವು ಮುಖಂಡರು ಆಂತರಿಕವಾಗಿ ಬೆಂಬಲ ಸೂಚಿಸಿದ್ದಾರೆ. ಕ್ಷೇತ್ರದ ಎಲ್ಲ ಪದವೀಧರರ ಧ್ವನಿಯಾಗಿ, ಸೇವಾಕಾಂಕ್ಷಿಯಾಗಿ ಕಣಕ್ಕಿಳಿದಿದ್ದೇನೆ. ನಿರುದ್ಯೋಗಿ ಪದವೀಧರರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು.


ಬಳಿಕ ಪಟ್ಟಣದ ಎಲ್‌ಬಿ ಕಾಲೇಜು, ಇಂದಿರಾಗಾಂಧಿ ಮಹಿಳಾ ಕಾಲೇಜು, ನ್ಯಾಯಾಲಯದ ಆವರಣದಲ್ಲಿ ಪ್ರಚಾರ ನಡೆಸಿದರು. ಈ ಸಂದರ್ಭದಲ್ಲಿ ಪ್ರೊ. ಸುಧಾಕರ್, ಸಚಿನ್, ಡಾ. ಉಮೇಶ್ ಅಂಗಡಿ ಸಿದ್ಧಾರ್ಥ್.ಹಾಜರಿದ್ದರು.

ವರದಿ‌: ರಾಘವೇಂದ್ರ ತಾಳಗುಪ್ಪ

Leave a Reply

Your email address will not be published. Required fields are marked *

Scan the code