ಪರಿಶಿಷ್ಟ ಜಾತಿ ಮತ್ತು ಪಂಗಡ ಮತ್ತು ಎಲ್ಲಾ ಸಮುದಾಯಗಳ ಗುರುಗಳನ್ನು ಗುರುತಿಸಿ.
(KOLARA): ಬಂಗಾರಪೇಟೆ: ಶ್ರೀ ಸಿದ್ದರಾಮೇಶ್ವರ ಜಯಂತಿ ಪುರಾತನ ಶರಣ ಪರಂಪರೆಯ ಸಂಕೇತವಾಗಿದ್ದು, ಶ್ರೀ ಸಿದ್ದರಾಮೇಶ್ವರನ ತತ್ವಜ್ಞಾನ ಹಾಗೂ ಶರಣ ಸಂಪ್ರದಾಯದ ಮಹತ್ವವನ್ನು ಸ್ಮರಿಸುವ ಮಹತ್ವದ ದಿನವಾಗಿದೆ ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹೇಳಿದರು.
ಪಟ್ಟಣದ ಪುರಸಭೆ ಆವರಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ಭೋವಿ ಸಮುದಾಯದ ವತಿಯಿಂದ ಆಯೋಜಿಸಿದ್ದ ಶ್ರೀ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮವನ್ನು ಉದ್ದೇಶಿಸಿದ ಮಾತನಾಡಿದ ಅವರು, ಭೋವಿ ಸಮುದಾಯ ಒಳಗೊಂಡಂತೆ ಪರಿಶಿಷ್ಟ ಜಾತಿ ಮತ್ತು ಪಂಗಡ ಮತ್ತು ಎಲ್ಲಾ ಸಮುದಾಯಗಳ ಗುರುಗಳನ್ನು ಗುರ್ತಿಸಿ, ಎಲ್ಲರೊಟ್ಟಿಗೆ ಸೇರಿ ಸಂಭ್ರಮಾಚರಣೆ ಮಾಡಲಾಗುತ್ತಿದ್ದು, ಈಗ ಭೋವಿ ಸಮುದಾಯದ ಒತ್ತಾಯದ ಮೇರೆಗೆ ದಿನಾಂಕವನ್ನು ಗುರ್ತಿಸಿ ಅದ್ದೂರಿಯಾಗಿ ಸಿದ್ದರಾಮೇಶ್ವರ ಜಯಂತಿ ಅತ್ಯಂತ ವಿಜೃಂಭಣೆಯಿಂದ ಹಮ್ಮಿಕೊಂಡಿದ್ದೇವೆ. ವಿಶೇಷವಾಗಿ ಸಂಸದ ಎಂ.ಮಲ್ಲೇಶ್ಬಾಬು ಅವರು ಎಲ್ಲವನ್ನು ಸಮಚಿತ್ತದಂತೆ ಸ್ವೀಕರಿಸುವಂತಹ ಮನೋಭಾವವುಳ್ಳ ಸಂಸದರೊಟ್ಟಿಗೆ ಒಟ್ಟಾಗಿ ಸೇರಿ ಕೆಲಸ ಮಾಡುವ ಅವಕಾಶ ದೊರೆಯುವಂತಾಗಿದೆ. ಬಂಗಾರಪೇಟೆ ತಾಲ್ಲೂಕುನ್ನು ಮಾದರಿ ಕ್ಷೇತ್ರವನ್ನಾಗಿ ಮಾಡಲು ಸಹಕಾರ ನೀಡಬೇಕೆಂದರು.
ಕರ್ನಾಟಕ ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡ ಅತಿ ಜನಸಂಖ್ಯೆಯನ್ನು ಹೊಂದಿದೆ. ಜನಸಂಖ್ಯೆ ಆಧಾರದ ಮೇಲೆ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ನಾವೆಲ್ಲರೂ ಒಂದಾಗಬೇಕು. ನಾನು ಶಾಸಕನಾದ ಮೇಲೆ ಎಲ್ಲಾ ಸಮುದಾಯದವರನ್ನು ಗುರ್ತಿಸಿ ಅದರಲ್ಲೂ ಭೋವಿ ಸಮುದಾಯದ ಪುರಸಭೆ ಅಧ್ಯಕ್ಷ ಸ್ಥಾನ ಕೊಟ್ಟಿದ್ದೇನೆ. ಜಿಲ್ಲಾ ಪಂಚಾಯಿತಿ ಸದಸ್ಯರನ್ನು, 2 ಚುನಾವಣೆಗಳಲ್ಲಿ ಗ್ರಾ.ಪಂ ಅಧ್ಯಕ್ಷರನ್ನು, ಸದಸ್ಯರನ್ನಾಗಿ ಮಾಡಲು ಸಹಕಾರಿಯಾಗಿ ನಿಂತು ಅವರ ಪರವಾಗಿ ಕೆಲಸಗಳನ್ನು ಮಾಡಿದ್ದೇನೆಂದರು. ಇದರೊಟ್ಟಿಗೆ ಪಂಪ್-ಮೋಟಾರ್, ಸಾರಥಿ ಯೋಜನೆ, ಸಾಲ, ಭೋವಿ ಸಮಾಜ ವಾಸಮಾಡುವ ಎಲ್ಲಾ ಗ್ರಾಮಗಳಲ್ಲಿ ಸಿಸಿರಸ್ತೆ, ಕುಡಿಯುವ ನೀರಿಗೆ ಅನುಕೂಲ ಮಾಡಿಕೊಟ್ಟಿದ್ದೇನೆ, ಅಷ್ಟೆಅಲ್ಲದೆ ತೊಪ್ಪನಹಳ್ಳಿ ಭಾಗದಲ್ಲಿ ಸುಮಾರು 50 ಕೋಟಿ ವೆಚ್ಚದಲ್ಲಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದರು.
ಬಿಇಎಂಎಲ್ ಕಾರ್ಖಾನೆ ಉಳಿವಿಗೆ ಹಾಗೂ ರೈಲ್ವೆ ಸೇತುವೆಗಾಗಿ ಮನವಿ:
ಸಂಸದ ಎಂ.ಮಲ್ಲೇಶ್ಬಾಬು ಅವರು ಬೃಹತ್ ಕೈಗಾರಿಕಾ ಮಂತ್ರಿಗಳಾಗಿರುವ ಹೆಚ್.ಡಿ.ಕುಮಾರಸ್ವಾಮಿಯವರೊಂದಿಗೆ ಮಾತನಾಡಿ ತಾಲ್ಲೂಕಿನ ಬಿಇಎಂಎಲ್ನ್ನು ಖಾಸಗಿಕರಣವನ್ನು ತಡೆದು ಯಥಾಸ್ಥಿತಿಯಲ್ಲಿ ಉಳಿಸಬೇಕು, ಕೋಲಾರ ಜಿಲ್ಲೆಯ ಜೀವನಾಡಿ ಬಿಇಎಂಎಲ್ನ್ನು ಎಂ.ವಿ.ಕೃಷ್ಣಪ್ಪ ಅವರು ಪ್ರಾರಂಭಿಸಿ ಸಾವಿರಾರು ಮಂದಿಗೆ ಉದ್ಯೋಗವನ್ನು ನೀಡಿದರು, ಇಂತಹ ಬಿಇಎಂಎಲ್ನ್ನು ಖಾಸಗೀಕರಣ ಮಾಡಿದ್ದಾರೆ, ದಯವಿಟ್ಟು ಇದನ್ನು ಶತಾಯಗತಾಯವಾಗಿ ಉಳಿಸಿಕೊಡಬೇಕು, ಹಾಗೂ ರೈಲ್ವೆ ಕ್ರಾಸಿಂಗ್ ಮತ್ತು ಸೇತುವೆಗಳ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕೆಂದು ಸಂಸದ ಎಂ.ಮಲ್ಲೇಶ್ಬಾಬು ಅವರಲ್ಲಿ ಮನವಿ ಮಾಡಿದರು.
ಸಂಸದ ಎಂ.ಮಲ್ಲೇಶ್ಬಾಬು ಮಾತನಾಡಿ,ಕಳೆದ ವರ್ಷ ಜಯಂತಿಯಲ್ಲಿ ನಮ್ಮ ಸಮುದಾಯದ ಸ್ವಾಮಿಜಿಗಳು ಒಂದು ಮಾತು ಹೇಳಿದ್ದರು ಶಾಸಕರಿಗೆ ನೀವು ಅಧಿಕಾರದಲ್ಲಿ ಇರಬೇಕು ನಮ್ಮ ಜನಾಂಗದ ಮಲ್ಲೇಶ್ಬಾಬು ಅಧಿಕಾರದಲ್ಲಿರಬೇಕು ಎಂದಿದ್ದರು. ಅವರ ಭವಿಷ್ಯದಂತೆ ಇವತ್ತು ನಾವಿಬ್ಬರು ಅಧಿಕಾರದಲ್ಲಿದ್ದೇವೆ.ನಾನು ಸಂಸದನಾದ ಮೇಲೆ ಬೂದಿಕೋಟೆಯ ಒಂದು ಕಾರ್ಯಕ್ರಮದಲ್ಲಿ ಶಾಸಕರಿಗೆ ಹೇಳಿದ್ದೆ ಬಂಗಾರಪೇಟೆ ತಾಲೂಕನ್ನು ಇನ್ನಷ್ಟು ಅಭಿವೃದ್ಧಿ ಮಾಡೋಣ ಎಂದು ಅದಕ್ಕೆ ಶಾಸಕರು ಸಹ ನಿನ್ನೊಂದಿಗೆ ಅಭಿವೃದ್ಧಿ ಕಾರ್ಯದಲ್ಲಿ ಸದಾ ಇರುತ್ತೇನೆ ಎಂದು ತಿಳಿಸಿದ್ದಾರೆ. ನಾವಿಬ್ಬರೂ ಒಟ್ಟಾಗಿದ್ದು ತಾಲೂಕನ್ನು ಅಭಿವೃದ್ಧಿ ಮಾಡಲು ಶ್ರಮಿಸುತ್ತೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಎಂ.ನಾರಾಯಣಸ್ವಾಮಿ, ಪುರಸಭೆ ಅಧ್ಯಕ್ಷ ಎಂ. ಗೋವಿಂದ, ಉಪಾಧ್ಯಕ್ಷೆ ಚಂದ್ರವೇಣಿ ಮಂಜುನಾಥ್, ಸಿದ್ದರಾಮೇಶ್ವರ ಭೋವಿ ಸಂಘದ ಅಧ್ಯಕ್ಷ ಎಸ್.ನಾರಾಯಣ್,ಇಓ ರವಿಕುಮಾರ್, ಗ್ರೇಡ್-2 ತಹಸೀಲ್ದಾರ್ ಗಾಯಿತ್ರಿ, ಶಿಕ್ಷಣಾಧಿಕಾರಿ ಗುರುಮೂರ್ತಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಿ.ವಿ.ಕೃಷ್ಣ, ಕಾಮಸಮುದ್ರ ಗ್ರಾ.ಪಂ ಅಧ್ಯಕ್ಷ ಆದಿನಾರಾಯಣಕುಟ್ಟಿ, ಬೋವಿ ಸಂಘದ ಜಿಲ್ಲಾ ಗೌರವಾಧ್ಯಕ್ಷ ರಾಮಚಂದ್ರಪ್ಪ ಬೋವಿ ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಸಂಜೀವಪ್ಪ, ಪುರಸಭೆ ಸದಸ್ಯರಾದ ಸುನಿಲ್ ಕುಮಾರ್, ನಾರಾಯಣಪ್ಪ,ಮಂಜುನಾಥ್,ವೆಂಕಟೇಶಪ್ಪ, ಪೊಲೀಸ್ ಕೃಷ್ಣಮೂರ್ತಿ, ಚಂದ್ರಮೌಳಿ,ಲಕ್ಷ್ಮಣ್,ಮುರುಳಿ ಎಮ್.ಮಂಜುನಾಥ್,ಶಿಕ್ಷಕರು ವೆಂಕಟೇಶಪ್ಪ,ಕೆ ಜಿ ಶ್ರೀನಿವಾಸ್, ನಾಯಕರಹಳ್ಳಿ ವೆಂಕಟೇಶಪ್ಪ,ಚಂದ್ರಮೋಹನ್ ಕೆ ಎಸ್ ಆರ್ ಟಿ ಸಿ,ಮುರಳಿ,,ಆನಂದ್,ಶ್ರೀನಿವಾಸ್,ಚಲಪತಿ, ಗಾಜಗ ಕೃಷ್ಣಪ್ಪ, ಹಾಗೂ ಮೊದಲಾದವರು ಇದ್ದರು.
ವರದಿ: ಮಧು ರಾಮ್ ಸೊರಬ