ಮಗನ ಸಾವಿಗೆ ಕಾರಣವಾದವರ ವಿರುದ್ಧ ಕ್ರಮ ಕೈಗೊಳ್ಳಿ ಇಲ್ಲವೆಂದರೆ ಮೆಸ್ಕಾಂ ಕಚೇರಿ ಮುಂದೆ ಧರಣಿಕುರುತೇವೆ.
(CHIKKAMAGALURU): ಚಿಕ್ಕಮಗಳೂರು ಜಿಲ್ಲೆ ನರಸಿಂಹರಾಜಪುರ ತಾಲೂಕು ಬಾಳೆಹೊನ್ನೂರು ಮೆಸ್ಕಾಂ ಲೈನ್ ಮ್ಯಾನ್ ಸಿಬ್ಬಂದಿ ವಿದ್ಯುತ್ ತಗುಲಿ ಸ್ಥಳದಲ್ಲೇ ಮೃತಪಟ್ಟ ಘಟನೆ ದಿನಾಂಕ 23.04.2024ರಂದು ಮಂಗಳವಾರದಂದು ನಡೆದಿತ್ತು.
ಈ ಘಟನೆಗೆ ಸಂಬಂಧಪಟ್ಟಂತೆ ಮಹದೇವ್ ಅವರ ತಂದೆ ಟಿಪಿ ಸೋಮಶೇಖರ್ ಅವರು ದೂರು ನೀಡಿದ್ದು ಮರಣೋತ್ತರ ಪರೀಕ್ಷೆಯ ನಂತರ ಮೆಸ್ಕಾಂ ಉನ್ನತ ಅಧಿಕಾರಿಗಳಾದ ಎಂ ಲೋಕೇಶ್ ಮತ್ತು ಶೃಂಗೇರಿ ಕ್ಷೇತ್ರದ ಎಂಎಲ್ಎ ಆದ ಟಿ ಡಿ ರಾಜೇಗೌಡ ಅವರ ಸಮ್ಮುಖದಲ್ಲಿರುವ ಎಲ್ಲಾ A1 ಇಂದ A6 ವರೆಗಿನ ಆರೋಪಿಗಳ ವಿರುದ್ಧ 24 ಗಂಟೆಯೊಳಗೆ ಕ್ರಮ ತೆಗೆದುಕೊಳ್ಳುವುದಾಗಿ ಆಶ್ವಾಸನೆ ನೀಡಿರುತ್ತಾರೆ ಆದರೆ ಘಟನೆ ನಡೆದು ಒಂದು ವಾರ ಕಳೆದರೂ ಯಾವುದೇ ರೀತಿಯಾದ ಕ್ರಮ ಕೈಗೊಂಡಿರುವುದಿಲ್ಲ ಇದೇ ರೀತಿ ಮುಂದುವರೆದರೆ ಇನ್ನಷ್ಟು ಜನ ಲೈನ್ ಮೆನ್ಗಳು ಬಲಿಯಾಗಬಹುದು.
ಆದ್ದರಿಂದ ನನ್ನ ವಿನಂತಿ ಏನೆಂದರೆ ಕೂಡಲೇ ಸಂಬಂಧಪಟ್ಟ ಮೇಲಾಧಿಕಾರಿಗಳು ಯಾವುದೇ ದಾಕ್ಷಿಣ್ಯ ತೋರಿಸದೆ ಕೂಡಲೇ ಕಾರಣಕರ್ತರಾದ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಿ ಮುಂದೆ ನಡೆಯುವಬಹುದಾದಂತಹ ಅನಾಹುತಗಳು ತಪ್ಪಿಸಲು ವಿನಂತಿಸುತ್ತೇನೆ. ತಪ್ಪಿದಲ್ಲಿ ಎಸ್ ಸಿ ಆಫೀಸ್ ಮೆಸ್ಕಾಂ ಚಿಕ್ಕಮಂಗಳೂರು ತಳದಲ್ಲಿ ಧರಣಿ ಕೂರುತ್ತೇವೆ ಎಂದು ಮೃತಪಟ್ಟ ಮಹದೇವ್ ಅವರ ತಂದೆ ಪತ್ರಕ್ಕೆ ಗೋಷ್ಠಿಯನ್ನು ಕರೆದು ತಮಗೆ ನ್ಯಾಯ ಒದಗಿಸಿ ಕೊಡುವಂತೆ ಕೋರಿದ್ದಾರೆ.