ನ್ಯೂಸ್ಶಿವಮೊಗ್ಗ

ಸಸ್ಯ ರೋಗಗಳ ನಿರ್ವಹಣೆಯಲ್ಲಿ ಜೈವಿಕ ನಿಯಂತ್ರಕಗಳ ಮಹತ್ವ

ಸಸ್ಯ ರೋಗಗಳ ನಿರ್ವಹಣೆಯಲ್ಲಿ ಜೈವಿಕ ನಿಯಂತ್ರಕಗಳ ಮಹತ್ವ

(SHIVAMOGA): ರಾಸಾಯನಿಕ ಗೊಬ್ಬರ ಬಳಕೆ ಇಂದ ಮಣ್ಣು ತನ್ನ ಫಲವತ್ತತೆ ಕಳೆದುಕೊಳ್ಳುತ್ತಿದೆ,  ಮಣ್ಣಲ್ಲಿನ ಸೂಕ್ಷ್ಮಾಣು ಜೀವಿಗಳು ಸಾಯುತ್ತವೆ ಆದ್ದರಿಂದ ಜೈವಿಕ ನಿಯಂತ್ರಕಗಳ ಬಳಕೆ ಬಹುಮುಖ್ಯ ಎಂದು ಸಸ್ಯ ರೋಗಶಾಸ್ತ್ರದ ಸಹಾಯಕ ಪ್ರಾಧ್ಯಾಪಕರಾದ ಡಾ. ಎಚ್ ಬಿ ನರಸಿಂಹಮೂರ್ತಿ ಹೇಳಿದರು.

ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಇರುವಕ್ಕಿ ಕೃಷಿ ವಿಜ್ಞಾನಗಳ ಮಹಾವಿದ್ಯಾಲಯದ  ಅಂತಿಮ ವರ್ಷದ ವಿದ್ಯಾರ್ಥಿಗಳ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮ ಶಿಕಾರಿಪುರ ತಾಲ್ಲೂಕಿನ ಹಳೇಮುಗಳಗೆರೆ ಗ್ರಾಮದಲ್ಲಿ ನಡೆಯುತ್ತಿದ್ದು ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡ ಅವರು.ಸಸ್ಯ ರೋಗ ನಿರ್ವಹಣೆಯಲ್ಲಿ ಜೈವಿಕ ನಿಯಂತ್ರಕಗಳ ಮಹತ್ವದ  ಕುರಿತು ಗುಂಪು ಚರ್ಚೆ ನಡೆಸಿದರು.

ಜೈವಿಕ ನಿಯಂತ್ರಕಗಳು ರೋಗಗಳನ್ನು ತಡೆಗಟ್ಟುವುದು ಮಾತ್ರವಲ್ಲದೆ ಸಸ್ಯಗಳ ಬೆಳವಣಿಗೆಯನ್ನು ಉತ್ತೇಜಿಸುತ್ತದೆ, ಪೋಷಕಾಂಶಗಳ ಬಳಕೆಯ ದಕ್ಷತೆಯನ್ನು ಸುಧಾರಿಸುತ್ತದೆ, ಸಸ್ಯದ ಪ್ರತಿರೋಧವನ್ನು ಹೆಚ್ಚಿಸುತ್ತದೆ ಮತ್ತು ಕೃಷಿ ರಾಸಾಯನಿಕ ಮಾಲಿನ್ಯದ ವಾತಾವರಣವನ್ನು ಸುಧಾರಿಸುತ್ತದೆ ಎಂದರು.

ಜೈವಿಕ ನಿಯಂತ್ರಕಗಳಾದ ಟ್ರೈಕೋಡರ್ಮ, ಸ್ಯೂಡೋಮೊನಾಸ್, ಬ್ಯಾಸಿಲಸ್ ಬೆಲೆ ಕೂಡ ಕಡಿಮೆ ಇದೆ. ನಮ್ಮ ವಿಶ್ವವಿದ್ಯಾಲಯದಲ್ಲಿ ಕೂಡ ಇದರ ಲಭ್ಯವಿದೆ. ಜೈವಿಕ ನಿಯಂತ್ರಣವನ್ನು ಮುಖ್ಯವಾಗಿ ಸಸ್ಯ ರೋಗಗಳನ್ನು ನಿಯಂತ್ರಿಸಲು ಮತ್ತು ರಾಸಾಯನಿಕ ಗೊಬ್ಬರಗಳು ಮತ್ತು ಕೀಟನಾಶಕಗಳ ಬಳಕೆಯನ್ನು ಪರಿಣಾಮಕಾರಿಯಾಗಿ ಕಡಿಮೆ ಮಾಡಲು ಪ್ರಯೋಜನಕಾರಿ ಮತ್ತು ಅವುಗಳ ಉತ್ಪನ್ನಗಳ ಮೂಲಕ ಸಸ್ಯಗಳಲ್ಲಿನ ಹಾನಿಕಾರಕ ಜೀವಿಗಳನ್ನು ನಿಯಂತ್ರಿಸಲು ಬಳಸಲಾಗುತ್ತದೆ ಎಂದು ತಿಳಿಸಿದರು.

ಇದೇ ವೇಳೆ ಗ್ರಾಮದ ಕೃಷಿಕರೊಂದಿಗೆ ಅಡಕೆ ಮತ್ತು ಭತ್ತದ ಸಮಗ್ರ ರೋಗ ನಿರ್ವಹಣೆ ಕುರಿತು ಚರ್ಚಿಸಲಾಯಿತು.

ವರದಿ: ಮಧು ರಾಮ್ ಸೊರಬ

Leave a Reply

Your email address will not be published. Required fields are marked *

Scan the code