ಕ್ರೈಂ ನ್ಯೂಸ್ಜಿಲ್ಲೆ

ಪಟ್ಟಣದ ಪೊಲೀಸ್ ಠಾಣೆಯಲ್ಲಿ ಆರೋಪಿ ಪರಾರಿ ಕೇಸ್ ನಲ್ಲಿ :ಇಬ್ಬರು ಪೊಲೀಸರು ಅಮಾನತು

ಪಟ್ಟಣದ ಪೊಲೀಸ್ ಠಾಣೆಯಲ್ಲಿ ಆರೋಪಿ ಪರಾರಿ ಕೇಸ್ ನಲ್ಲಿ :ಇಬ್ಬರು ಪೊಲೀಸರು ಅಮಾನತು

(KOLARA): ಬಂಗಾರಪೇಟೆ: ಪೊಲೀಸ್ ಠಾಣೆಯಿಂದ ಆರೋಪಿ ಪರಾರಿ ಕೇಸ್ ನಲ್ಲಿ ಇಬ್ಬರು ಪೊಲೀಸರನ್ನು ಪೊಲೀಸ್‌ ಇಲಾಖೆಯಿಂದ ಅಮಾನತ್ತು ಮಾಡಲಾಗಿದೆ.

ಪೊಲೀಸ್‌ ಠಾಣೆಯಿಂದ ಆರೋಪಿ ಪರಾರಿ ಕೇಸ್ ನಲ್ಲಿ ಕರ್ತವ್ಯ ಲೋಪ ಹಿನ್ನಲೆ ಇಬ್ಬರು ಪೊಲೀಸರಾದ ಮಂಜುನಾಥಾಚಾರಿ, ಶ್ರೀನಿವಾಸ್ ಸಸ್ಪೆಂಡ್ ಆಗಿದ್ದಾರೆ.

ಬಂಗಾರಪೇಟೆ ಪೊಲೀಸ್‌ ಠಾಣೆಯಲ್ಲಿ ಕಳೆದ ಗುರುವಾರ ನಡೆದಿದ್ದ ಘಟನೆಯಂತೆ ರಾಬರಿ ಪ್ರಕರಣದ ಆರೋಪಿ ಚಂದನ್ ಕುಮಾ‌ರ್ ಪರಾರಿಯಾಗಿದ್ದ ಆರೋಪಿ.

ಬ್ಯಾಡಬೆಲೆ ಗ್ರಾಮದ ಬಳಿ ಸುರೇಶ್ ಎಂಬುವರ ಮನೆ ರಾಬರಿ ಕೇಸ್ ನ ಆರೋಪಿ ಮುಳಬಾಗಿಲು ಮೂಲದ ಚಂದನ್ ಕುಮಾ‌ರ್ ಎಂಬ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸುವ ಮೊದಲೇ ಠಾಣೆಯಿಂದ ಪರಾರಿಯಾಗಿದ್ದ.

ಈ ಬಗ್ಗೆ ಇಲಾಖೆ ತನಿಖೆ ಆಧರಿಸಿ ಇಬ್ಬರು ಪೊಲೀಸರನ್ನ ಅಮಾನತು ಗೊಳಿಸಿ ಕೆಜಿಎಫ್ ಎಸ್ಪಿ ಶಾಂತರಾಜು ಆದೇಶ ಮಾಡಿದ್ದಾರೆಂದು ತಿಳಿದು ಬಂದಿರುತ್ತದೆ.

ವರದಿ: ವಿಷ್ಣು ಕೋಲಾರ

Leave a Reply

Your email address will not be published. Required fields are marked *

Scan the code