ಸೀತಿಯಲ್ಲಿ ರೈತರಿಗಾಗಿ ಗೋಧಾಮ ಮಳಿಗೆ ಉದ್ಘಾಟನೆ
(KOLARA): ಕೋಲಾರ : ರಾಜ್ಯದಲ್ಲಿ ಸಹಕಾರ ಸಂಘಗಳ ಉಳಿವಿಗೆ ಮತ್ತು ಅಭಿವೃದ್ಧಿಗೆ ಪಣ ತೊಟ್ಟಿದ್ದೆ ಸನ್ಮಾನ್ಯ ಸಿದ್ದರಾಮಯ್ಯನವರು ಅವರು ಕಳೆದ ಬಾರಿ ಮುಖ್ಯಮಂತ್ರಿಯಾಗಿದ್ದಾಗ ಸಹಕಾರ ಸಂಘಗಳಲ್ಲಿ ಮಹಿಳೆಯರಿಗೆ ಮತ್ತು ರೈತರಿಗೆ ಬಡ್ಡಿ ರಹಿತ ಸಾಲ ನೀಡಿ ಹಾರ್ಥಿಕತೆಯಲ್ಲಿ ಅಭಿವೃದ್ಧಿ ಹೊಂದಲು ಕಾರಣ ಕರ್ತರಾಗಿದ್ದಾರೆ ಅದೇ ರೀತಿ ಸಹಕಾರ ಸಂಘಗಳು ಸಹ ಅಭಿವೃದ್ಧಿ ಹೊಂದಿ ಸಾವಿರಾರು ಬಡ ಮತ್ತು ಕೂಲಿ ಕಾರ್ಮಿಕರಿಗೆ ಸಾಲ ನೀಡುತ್ತಿರುವುದು ಹೆಮ್ಮೆಯ ವಿಷಯ ಎಂದು ಎಂಎಲ್ಸಿ ಅನಿಲ್ ಕುಮಾರ್ ರವರು ಹೇಳಿದರು,
ತಾಲೂಕಿನ ವೇಮಗಲ್ ಹೋಬಳಿಯ ಮದ್ದೇರಿ ವಿ ವಿ ದುದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ 2023-2024 ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದ ಸಂಘದ ಅಧ್ಯಕ್ಷರಾದ ಜಂಬಾಪುರ ಎಂ ವೆಂಕಟರಾವ್ ಮಾತನಾಡಿ ರೈತರು ಸಾವಲಂಬೆಗಳಾಗಿ ಬದುಕು ಕಟ್ಟಿಕೊಳ್ಳಲು ಸಹಕಾರಿ ಸಂಘಗಳು ಸಹಕಾರಿಯಾಗಿದ್ದು ರೈತರು ಹೆಚ್ಚಿನ ಠೇವಣಿ ಇಟ್ಟರೆ ಡಿಸಿಸಿ ಬ್ಯಾಂಕ್ನಿಂದ ಹೆಚ್ಚಿನ ಸಾಲ ನೀಡಲು ಸಾಧ್ಯವಾಗುತ್ತದೆ. ಸಾಲ ಪಡೆಯಲು ಡಿಸಿಸಿ ಬ್ಯಾಂಕಿಗೆ ಬರುವುದು ಠೇವಣಿ ಮಾತ್ರ ಬೇರೆ ಬ್ಯಾಂಕುಗಳಲ್ಲಿ ಇಡುವುದನ್ನು ನಮ್ಮ ರೈತರು ಬಿಡಬೇಕು ಸಹಕಾರಿ ಸಂಘದಲ್ಲಿ ಠೇವಣಿ ಇರುವುದರಿಂದ ನಿಮಗೂ ಮತ್ತು ಬೇರೆಯವರು ಸಹ ಸಹಕಾರಿ ಆಗುತ್ತದೆ ಎಂದು ತಿಳಿಸಿದರು,
ವೇಮಗಲ್ ಹೋಬಳಿಯ ಮದ್ದೇರಿ ರೇಷ್ಮೆ ಬೆಳೆಗಾರರ ಸಹಕಾರ ಸಂಘದಲ್ಲಿ ಅವ್ಯವಹಾರಗಳು ನಡೆಯುತ್ತವೆ ಎಂಬ ಅನುಮಾನ ಸಾರ್ವಜನಿಕರಲ್ಲಿ ಮೂಡುತ್ತಿದೆ ಸಂಘದ ಅಧ್ಯಕ್ಷರಾಗಲಿ ನಿರ್ದೇಶಕರಾಗಲಿ ಕಾರ್ಯನಿರ್ವಹಣಾಧಿಕಾರಿ ಸಾರ್ವಜನಿಕರಿಗೆ ಸರಿಯಾದ ಮಾಹಿತಿ ನೀಡುತ್ತಿಲ್ಲ ಇವರಿಗೆ ಇಷ್ಟ ಬಂದಾಗ ಕೆಲವರಿಗೆ ಮಾತ್ರ ಮಾಹಿತಿ ನೀಡಿ ಸಭೆ ನಡೆಸಿ ಅಂಕಿ ಅಂಶಗಳನ್ನು ತಿಳಿಸದೆ ಎಂ ಎಲ್ ಸಿ ಅನಿಲ್ ಕುಮಾರ್ ರವರ ಭಾಷಣ ಮುಗಿದ ಕೂಡಲೇ ಸಂಘದ ಶೇರುದಾರರಿಗೆ ಯಾವುದೇ ಮಾಹಿತಿ ನೀಡದೆ ಅವಮಾನಿಸಿದ್ದಾರೆ ಇದರ ಮಾಹಿತಿ ಕೇಳಿದರೆ ಕುಂಟು ನೆಪ ಹೇಳುತ್ತಿದ್ದಾರೆ ಮತ್ತು ತಮಗೆ ಅನುಕೂಲವಾಗುವ ರೀತಿಯಲ್ಲಿ ಇಲ್ಲಿನ ಆಡಳಿತ ಮಂಡಳಿ ನಡೆದುಕೊಳ್ಳುತ್ತಿದೆ ಎಂದು ಬಿಜೆಪಿ ಮುಖಂಡ ಮದ್ದೇರಿ ಕೋಟೆ ಮುರಳಿ ಗೌಡ ಆರೋಪಿಸಿದ್ದಾರೆ.
ಗೋಧಾಮು ಉದ್ಘಾಟಿಸಿ ಮಾತನಾಡಿದ ಮಾಜಿ ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷರಾದ ಚಂಜಿ ಮಲೆ ಬಿ ರಮೇಶ್ ಸೀತಿ ಗ್ರಾಮ ಪಂಚಾಯಿತಿ ರೈತರಿಗಾಗಿ ಮದ್ದೇರಿ ರೇಷ್ಮೆ ಬೆಳೆಗಾರ ಸಹಕಾರ ಸಂಘದ ವತಿಯಿಂದ ನಬಾರ್ಡ್ ಯೋಜನೆ ಅಡಿಯಲ್ಲಿ ಗೋದಮು ನಿರ್ಮಿಸಿ ಸುಮಾರು ವರ್ಷಗಳಿಂದ ರಸ ಗೊಬ್ಬರಗಳನ್ನು ತರಲು ವೇಮಗಲ್ ಮತ್ತು ಕ್ಯಾಲನೂರು ಗ್ರಾಮಗಳಿಗೆ ಹೋಗಿ ತರಬೇಕಾದಂತಹ ಪರಿಸ್ಥಿತಿ ಈ ಭಾಗದ ರೈತರಿಗೆ ಇತ್ತು ಈ ಪರಿಸ್ಥಿತಿಯನ್ನು ತಪ್ಪಿಸಲು ಈಗ ಇಲ್ಲಿ ಗೋಧಾಮು ನಿರ್ಮಿಸಿ ಎಲ್ಲಾ ರೀತಿಯ ರಸಗೊಬ್ಬರಗಳು ಇಲ್ಲೇ ದೊರೆಯುವಂತೆ ಮಾಡಿದ್ದೇವೆ ರೈತರು ಇದರ ಸದುಪಯೋಗ ಪಡಿಸಿಕೊಂಡು ಆರ್ಥಿಕತೆಯಲ್ಲಿ ಮುಂದೆ ಬರಬೇಕು ಮತ್ತೆ ಸಂಘವನ್ನು ಅಭಿವೃದ್ಧಿಪಡಿಸಲು ರೈತರು ಸಂಘದೊಂದಿಗೆ ಕೈಜೋಡಿಸಬೇಕು ಎಂದು ತಿಳಿಸಿದರು,
ಈ ಸಂದರ್ಭದಲ್ಲಿ ಸೀತಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಕವಿತಾ ಮುನಿರಾಜು, ಮದ್ದೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಡಿ ಎನ್ ಬಾಬು, ಮದ್ದೇರಿ ರೇಷ್ಮೆ ಬೆಳೆಗಾರ ಸಹಕಾರ ಸಂಘದ ಉಪಾಧ್ಯಕ್ಷರಾದ ನಾರಾಯಣಪ್ಪ, ನಿರ್ದೇಶಕರಾದ ವೆಂಕಟಸ್ವಾಮಿ, ಶ್ರೀನಿವಾಸಲು, ಕೃಷ್ಣಪ್ಪ, ಮಲ್ಲೇಗೌಡ, ನಾರಾಯಣಸ್ವಾಮಿ, ಮುನಿ ರಾಮಕ್ಕ, ಈರಮ್ಮ, ನಾರಾಯಣಮ್ಮ, ಮದ್ದೇರಿ ರೇಷ್ಮೆ ಬೆಳೆಗಾರ ಸಹಕಾರ ಸಂಘದ ಮಾಜಿ ಅಧ್ಯಕ್ಷರಾದ ಎಂ ಆರ್ ಶ್ರೀನಿವಾಸ್ ಗೌಡ, ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕರಾದ ಅಂಬರೀಶ್, ಸೀತಿ ಗ್ರಾಮ ಪಂಚಾಯಿತಿ ಸದಸ್ಯರಾದ ಮುನಿರಾಜು, ಉಪಾಧ್ಯಕ್ಷರಾದ ಅನಿತಾ, ಮುಖಂಡರಾದ ಡಿಸಿಸಿ ಬ್ಯಾಂಕ್ ನಿರ್ದೇಶಕರಾದ, ಕಡೆಗಟ್ಟೂರು ದಯಾನಂದ, ನಾಗನಾಳ ಸೋಮಣ್ಣ, ಸಿಸಂದ್ರ ಗೋಪಾಲ್, ಅಂಕತಟ್ಟಿ ಬಾಬು, ಪಿಎಲ್ಡಿ ಬ್ಯಾಂಕ್ ನಿರ್ದೇಶಕ ಮಂಜುನಾಥ್, ಈ ಭೈರಪ್ಪ, ಗೋಪಾಲಕೃಷ್ಣ, ಕೋಟೆ ಮುರುಳಿ ಗೌಡ, ಸೀತಿ ಹೊಸೂರು ನಾಗೇಶ್, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆರ್ ಭಾಸ್ಕರ, ಹಾಗೂ ಉಪಸ್ಥಿತರಿದ್ದರು.
ವರದಿ: ವಿಷ್ಣು ಕೋಲಾರ