ಚಾರ್ಮಾಡಿ ಘಾಟ್ ನಲ್ಲಿ ಹೆಚ್ಚುತ್ತಿರುವ ಕಾಡಾನೆ ಹಾವಳಿ…ಯಾವುದೇ ಕ್ರಮ ಕೈಗೊಳ್ಳದೆ ಇರುವ ಅರಣ್ಯ ಇಲಾಖೆ..!
(CHIKKAMAGALURU): ಚಿಕ್ಕಮಗಳೂರು ಜಿಲ್ಲೆಯ ಕೊಟ್ಟಿಗೆಹಾರ ಚಾರ್ಮಾಡಿ ಘಾಟ್ 2ನೇ ತಿರುವಿನಲ್ಲಿ ಮತ್ತೆ ಕಾಣಸಿಕೊಂಡ ಕಾಡಾನೆ. ಚಿಕ್ಕಮಗಳೂರಿನ ಚಾರ್ಮಾಡಿ ಘಾಟ್ ನಲ್ಲಿ ರಾತ್ರಿ 8 ಗಂಟೆ ಹೊತ್ತಿಗೇ 2ನೇ ತಿರುವಿನ ಸ್ವಲ್ಪ ಮೇಲ್ಬಾಗದ ರಸ್ತೆಯಲ್ಲಿ ಕಾಡಾನೆ ನಿಂತದ್ದು ಕಂಡುಬಂದಿದೆ, ಆನೆಯನ್ನೂ ಕಂಡ ವಾಹನ ಸವಾರರು ಹೆದರಿ ತಮ್ಮ ವಾಹನವನ್ನು ಹಿಂದಿರುಗಿಸುವ ವೇಳೆಯಲ್ಲಿ ಚಾಲಕ ಗಾಬರಿಗೊಂಡಿದರಿಂದ ಪಿಕಪ್ ವಾಹನ ರಸ್ತೆ ಬದಿಯಲ್ಲಿದ್ದ ಚರಂಡಿಗೆ ಜಾರಿದೆ.
ಚಾರ್ಮಾಡಿ ಮತ್ತು ಕೊಟ್ಟಿಗೆಹಾರದಲ್ಲಿ ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ವಾಹನ ತಪಾಸಣಾ ಗೇಟ್ ಇದ್ದರೂ ರಸ್ತೆಯಲ್ಲಿ ಸಾಗುವ ವಾಹನಗಳಿಗೆ ಕಾಡಾನೆಯಿರುವ ಬಗ್ಗೆ ಮಾಹಿತಿ ನೀಡುತ್ತಿಲ್ಲ ಎನ್ನಲಾಗಿದೆ. ಈ ವಿಷಯಕ್ಕೆ ಸಂಬಂದಿಸಿದಂತೆ ಬೆಳ್ತಂಗಡಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಹಾಗೂ ಪೊಲೀಸರಿಗೆ ಮಹಿತಿ ನೀಡಲಾಗಿದೆ.
ಈ ಕಾಡನೆಯು ಕಳೆದ ಒಂದು ವಾರದಿಂದ ರಸ್ತೆ ಬದಿಯಲ್ಲಿಯೆ ಇದೆ. ಈ ವಿಷಯದ ಬಗ್ಗೆ ಮಾಹಿತಿ ತಿಳಿದರು ಕೂಡ ಬೆಳ್ತಂಗಡಿ ಅರಣ್ಯ ಇಲಾಖೆ ಅಧಿಕಾರಿಗಳು ಆನೆಯನ್ನು ರಸ್ತೆಯಿಂದ ಕಾಡಿಗೆ ಅಟ್ಟಲು ಯಾವುದೇ ಸೂಕ್ತಕ್ರಮ ಕೈಗೊಂಡಿಲ್ಲ ಎನ್ನುವ ಆರೋಪ ತಿಳಿದುಬಂದಿದೆ.