ನಗರ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಬೈಕ್ ವೀಲಿಂಗ್ ಹಾವಳಿ..!
(HASSANA): ಹಾಸನ ಜಿಲ್ಲೆಯ ವಿವಿಧ ತಾಲೂಕಿನಲ್ಲಿ ಅಪ್ರಾಪ್ತರು ಸೇರಿ ಯುವಕರು ಸರ್ವಜನಿಕ ರಸ್ತೆಗಳಲ್ಲಿ ಬೈಕ್ ವೀಲಿಂಗ್ ಶೋಕಿ ಮಾಡುತಿದ್ದಾರೆ. ಇದರಿಂದ ಬಹುಳಷ್ಟು ಜನರ ಪ್ರಾಣಹಾನಿ ಮತ್ತೆ ತೀವ್ರ ಗಾಯಗಳಾಗಿರುವುದು ಕಂಡು ಬಂದಿದೆ.
ಪೋಲೀಸ್ ಇಲಾಖೆಯ ಬಯ ಇಲ್ಲದಿರುವುದು ಕಂಡು ಬಂದಿದೇ ಹಾಗು ಯೇಷ್ಟೆ ಎಚ್ಚರಿಕೆ ಕೊಟ್ಟರು ಪದೇ ಪದೇ ಈ ಘಟನೆ ಸಂಭವಿಸುತ್ತಿದೆ. ಜೊತೆಗೇ ಬೈಪಾಸ್ ನಲ್ಲಿ ಅತಿ ಹೆಚ್ಚು ಯುವಕರು ಬೈಕ್ ವೀಲಿಂಗ್ ಮಾಡುವುದು ಕಂಡು ಬಂದಿದೆ. ಅದರಲ್ಲು ಅಪ್ರಾಪ್ತರು ಹೆಚ್ಚು ಬೈಕ್ ವೀಲಿಂಗ್ ಮಾಡುವುದು ಯೆಂಬ ಮಾಹಿತಿ ಬಂದಿದೆ . ಆದರಿಂದ ಪಾಲಿಸರು ಒಂದು ಕಠಿಣ ಪ್ರಕಟನೆಯನ್ನ ಹೊರಡಿಸಿ ವಿಶೇಷ ಕ್ರಮದಡಿಯಲ್ಲಿ ಅಂತವರಿಗೆ ಯೆಚ್ಚರಿಕೆ ಕೊಡಬೇಕಾಗಿದೆ. ಬೈಕ್ ವೀಲಿಂಗ್ ಇಂದಾಗಿ ಬಹುಳಷ್ಟು ಮಹಿಳೆ , ಯುವತಿಯರಿಗೆ, ಸಾರ್ವಜನಿಕರಿಗೆ ವಯೋವೃದ್ದರಿಗೆ ಗಾಯಗಳಾಗಿವೆ.
ಅದುದರಿಂದ ಇದಕ್ಕೆ ಪೋಲೀಸರು ಕಠಿಣ ಕ್ರಮ ವಹಿಸಬೇಕು ಹಾಗು ಬೈಕ್ ವೀಲಿಂಗ್ ನಿರ್ಮೂಲನೆ ಮಾಡಬೇಕು ಎಂದು ಆಗ್ರಹಿ ಅಖಿಲ ಭಾರತ ಕಾಂಗ್ರೆಸ್ ಸಮಿತಿ ಮಾನವ ಹಕ್ಕು ಜಿಲ್ಲಾ ಜನತೆಯ ಪರವಾಗಿ ಮಾನವಿ ಮಾಡಿಕೊಂಡಿದ್ದಾರೆ ಹಾಗು ತಾಲೂಕಿನಲ್ಲಿ ಚನ್ನರಾಯಪಟ್ಟಣ ,ತಾಲೂಕು ಅರಸೀಕೆರೆ ,ಆಲೂರು ,ಬೇಲೂರು ,ಸಕಲೇಶಪುರ ,ಅರಕಲಗೋಡು ,ಹೊಳೆನರಸಿಪುರ ,ಹಾಸನ ಗಳಲ್ಲಿ ಸಂಬಂಧ ಪಟ್ಟ ಪೋಲಿಸ್ ವರಿಷ್ಠಾಧಿಕಾರಿಗಳು ಸಂಬಂಧ ಪಟ್ಟ ತಾಲೂಕುಗಳಿಗೆ ಮಾಹಿತಿ ಯನ್ನು ರವಾನಿಸಬೇಕೆಂದು 8 ತಾಲೂಕುಗಳ ಪರವಾಗಿ ಪೋಲಿಸ್ ವರಿಷ್ಠಾದಿಕಾರಿ ಹಾಸನ ಜಿಲ್ಲೆ ಇವರಿಗೇ ವರುಣ್ ಚಕ್ರವರ್ತಿ ಮನವಿ ಸಲ್ಲಿಸಿದ್ದಾರೆ.