ನ್ಯೂಸ್ಶಿವಮೊಗ್ಗ

ಸಾಗರದ ಹೊಸಂತೆ ಗ್ರಾಮದಲ್ಲಿ ಮಾಹಿತಿ ಕಾರ್ಯಕ್ರಮ.

ಸಾಗರದ ಹೊಸಂತೆ ಗ್ರಾಮದಲ್ಲಿ ಮಾಹಿತಿ ಕಾರ್ಯಕ್ರಮ.

(SHIVAMOGA): ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿಯಲ್ಲಿ ಇಂದು ಜ್ಞಾನ ವಿಕಾಸ ಕಾರ್ಯಕ್ರಮದದಿಯಲ್ಲಿ ಹೊಸಂತೆ ಕಾರ್ಯಕ್ಷೇತ್ರದ ಪೃಥ್ವಿ ಜ್ಞಾನವಿಕಾಸ ಕೇಂದ್ರದಲ್ಲಿ ಮಾಹಿತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಕಾರ್ಯಕ್ರಮದಲ್ಲಿ ಕುಮಾರಿ ಶ್ರಾವ್ಯ ಅವರು ಮಾತಾನಾಡಿ  ಮಹಿಳೆಯರ ಆರೋಗ್ಯದಲ್ಲಿ ಸಾಮಾನ್ಯವಾಗಿ ಕಾಡುವಂತಹ ಖಿನ್ನತೆ ಕುರಿತು  ಮತ್ತು ಮಹಿಳೆಯರು ಯಾವುದರಲ್ಲು ಕಮ್ಮಿ ಇಲ್ಲ ಎಲ್ಲಾ ಕ್ಷೇತ್ರದಲ್ಲಿ ಇದ್ದು ನಾವು ಎಲ್ಲರಂತೆ ಎಂದರು  ಮಹಿಳೆಯರು ಮನೆಯ ಜವಾಬ್ದಾರಿ ಹೇಗೆ ನಿಭಾಯಿಸುತ್ತಾರೂ ಅದೆ ರೀತಿಯಲ್ಲಿ ಸಂಘದಲ್ಲಿ ತಮಗೆ ನೀಡಿದ ಜವಾಬ್ದಾರಿ ಯಶಸ್ವಿಯಾಗಿ ನಡೆಸಿಕೊಂಡು ಬರ್ತಾಯಿದಾರೆ  ಹಾಗೂ ಮಾನಸಿಕ ಮತ್ತು ದೈಹಿಕವಾಗಿ ಮಹಿಳೆಯರು ಸದೃಢ ಆಗಿರಬೇಕು ಎನ್ನುವುದರ ಕುರಿತು  ಸೆರಿದ್ದ ಮಹಿಳೆಯರಿಗೆ ಮಾಹಿತಿ ನೀಡಿದರು.


ತಾಲ್ಲೂಕು  ಸಮನ್ವಯ ಅಧಿಕಾರಿ ಗೌರಮ್ಮ  ಮಾತಾನಾಡಿ ಪೂಜ್ಯ ಖಾವಂದರ ಆಶಯದಂತೆ ಪ್ರತಿ ಹಳ್ಳಿಯಲ್ಲಿ ನಮ್ಮ ಸಂಘದ ವತಿಯಿಂದ ಮಹಿಳೆಯರಿಗೆ ಸ್ವಾವಲಂಬಿ ಜೀವನ ನಡೆಸಲು ಅನೇಕ ಯೋಜನೆಯನ್ನು ಖಾವಂದರು ನೀಡಿದ್ದು ಅದರಿಂದ ಮಹಿಳೆಯರು ಸ್ವ ಉದ್ಯೋಗ ಮಾಡಿ ಜೀವನ ನಡೆಸುತ್ತಾ ಬಂದಿರುವುದು ಹೆಮ್ಮೆಯ ಸಂಗತಿ ಎಂದರು 
ಈ ಕಾರ್ಯಕ್ರಮದಲ್ಲಿ  ಒಕ್ಕೂಟ ಅಧ್ಯಕ್ಷರು ಹಾಗೂ ಸದಸ್ಯರು ಗ್ರಾಮದ ಮಹಿಳೆಯರು ಪಾಲ್ಗೊಂಡಿದ್ದರು.

ವರದಿ.ರಾಘವೇಂದ್ರ ತಾಳಗುಪ್ಪ

Leave a Reply

Your email address will not be published. Required fields are marked *

Scan the code