ಚಿಕ್ಕಮಗಳೂರುನ್ಯೂಸ್ಮಲೆನಾಡು

ದಲಿತ ರೈತರಿಗೆ ಅನ್ಯಾಯ..! ನಮ್ಮ ಬೇಡಿಕೆ ಈಡೇರಿಸದಿದ್ದರೆ, ಪಂಚಾಯಿತಿಗೆ ಬೀಗ ಹಾಕಿ ಹೋರಾಟಕ್ಕೆ ಕೂರುತ್ತೇವೆ.

ದಲಿತ ರೈತರಿಗೆ ಅನ್ಯಾಯ..! ನಮ್ಮ ಬೇಡಿಕೆ ಈಡೇರಿಸದಿದ್ದರೆ, ಪಂಚಾಯಿತಿಗೆ ಬೀಗ ಹಾಕಿ ಹೋರಾಟಕ್ಕೆ ಕೂರುತ್ತೇವೆ.

(CHIKKAMAGALURU): ದಲಿತ ರೈತರ ಜಮಿನಿಗೆ ಬಾಕ್ಸ್ ಚರಂಡಿ ಮಂಜೂರಾಗಿರುವುದು ಸರಿಯಷ್ಟೆ ! ಆದರೆ ನಿರ್ಮಾಣಗೊಂಡಿಲ್ಲ ಜೊತೆಗೆ ,ಕಾಲೋನಿಗೆ ಸುಮಾರು 2-3 ವರ್ಷದ ಹಿಂದೆ ಡಾ: ಬಿ.ಆರ್ ಅಂಬೇಡ್ಕರ್ ಭವನ ಮಂಜೂರಾಗಿದ್ದು ಪೂರ್ಣಗೊಂಡಿಲ್ಲ. ಇದರಿಂದ ಬೇಸರಗೊಂಡ ದಲಿತ ರೈತರು..

ನರಸಿಂಹರಾಜಪುರ ತಾಲ್ಲೂಕು, ಬಾಳೆಹೊನ್ನೂರು ಹೋಬಳಿ, ಬಿ.ಕಣಬೂರು ಗ್ರಾಮದ ಸೋಮೇಶ್ವರ ನಗರ (ರಂಭಾಪುರಿ ಮಠ) ಕಾಲೋನಿಯಲ್ಲಿ ಅಧಿಕಾರಿಗಳು ಸದರಿ ಅನುದಾನದಲ್ಲಿ ದಲಿತರ ಕಾಲೋನಿ ರಸ್ತೆಗೆ ಬಾಕ್ಸ ಚರಂಡಿ ನಿರ್ಮಿಸುವ ಬದಲು ಸಾಮಾನ್ಯ ವರ್ಗದವರು ವಾಸಿಸುತ್ತಿರುವ ಭಾಗದಲ್ಲಿ ನಿರ್ಮಾಣ ಮಾಡಲು ಮುಂದಾಗಿರುತ್ತಾರೆ. ಈ ಭಾಗದಲ್ಲಿ ಯಾವುದೇ ದಲಿತ ಕುಟುಂಬಗಳು ಹಾಗೂ ದಲಿತ ರೈತರ ಜಮೀನುಇಲ್ಲದಿರುವುದರಿಂದ ಇದಕ್ಕೆ ದಲಿತ ರೈತರ ಆಕ್ಷೇಪಣೆ ಇರುತ್ತದೆ.

ಸುಮಾರು 50 ದಲಿತ ಕುಟುಂಬಗಳು ವಾಸ ಮಾಡುತ್ತಿರುವ ದಲಿತರ ಕಾಲೋನಿಯಲ್ಲಿ ಬಾಕ್ಸ್ ಚರಂಡಿ ಇಲ್ಲದಿರುವುದರಿಂದ ರಸ್ತೆ ಮೇಲೆ ಹಾಗೂ ಮನೆಗಳ ಅಕ್ಕ ಪಕ್ಕದಲ್ಲಿ ನೀರು ಹರಿದು ತೊಂದರೆ ಆಗುತ್ತಿದೆ, ದಲಿತ ಕಾಲೋನಿಯಲ್ಲಿ ಬಾಕ್ಸ್ ಚರಂಡಿ ನಿರ್ಮಿಸುವುದರಿಂದ ಚರಂಡಿ ಒಳಗೆ ನೀರು ಹರಿದು ರೈತರ ಜಮೀನಿಗೆ ಸೇರಿ ಕೃಷಿ ಜಮೀನಿಗೆ ನೀರಿನ ವ್ಯವಸ್ಥೆಯಾಗುತ್ತದೆ ಯೆಂಬುದು ದಲಿತರ ಅಪೇಕ್ಷೆ ಆಗಿದೆ .ಆದ್ದರಿಂದ ಇದರ ಬಗ್ಗೆ ಕಾನೂನು ಕ್ರಮ ತೆಗೆದುಕೊಂಡು ಕಾಲೋನಿಗೆ ಮಂಜೂರಾಗಿರುವ ಸದರಿ ಬಾಕ್ಸ್ ಚರಂಡಿ ಕಾಮಗಾರಿಯನ್ನು ಕಾಲೋನಿಯಲ್ಲಿಯೇ ನಿರ್ಮಿಸುವಂತೆ ಮನವಿ ಸಲ್ಲಿಸಿದ್ದಾರೆ. ಹಾಗೂ ದಲಿತ ಕಾಲೋನಿಗೆ ಸುಮಾರು 2-3 ವರ್ಷದ ಹಿಂದೆ ಡಾ: ಬಿ.ಆರ್ ಅಂಬೇಡ್ಕರ್ ಭವನ ಮಂಜೂರಾಗಿದ್ದು ಆದರೆ ಇದುವರೆಗೂ ಕಾಮಗಾರಿ ಪೂರ್ಣಗೊಂಡಿರುವುದಿಲ್ಲ. ಕೇವಲ ಪೌಂಡೇಷನ್ (ತಳಪಾಯ) ನಿರ್ಮಿಸಿ ಪಿಲ್ಲರ್ ಕಾಮಗಾರಿಯನ್ನು ಸ್ಥಗಿತಗೊಳಿಸಿರುವುದರಿಂದ ಇದರ ಬಗ್ಗೆ ಗಮನಹರಿಸಿ ಹಾಗು ಅಪೂರ್ಣಗೊಂಡಿರುವ ಡಾ: ಬಿ.ಆರ್. ಅಂಬೇಡ್ಕರ್ ಭವನ ಕಟ್ಟಡವನ್ನು ಪೂರ್ಣಗೊಳಿಸುವ ಬಗ್ಗೆ ಕ್ರಮ ತೆಗೆದುಕೊಳ್ಳಬೇಕಾಗಿ ಸರ್ಕಾರಕ್ಕೆ ವಿನಂತಿ ಮಾಡಿಕೊಂಡಿದ್ದು. ಒಂದು ತಿಂಗಳೊಳಗೆ ಬೇಡಿಕೆಗಳನ್ನು ಕಾರ್ಯಗತಗೊಳಿಸದಿದ್ದರೆ ಬಾಳೆಹೊನ್ನೂರು ಬಿ. ಕಣಬುರೂ ಗ್ರಾಮ ಪಂಚಾಯಿತಿಗೆ ಬೀಗ ಹಾಕಿ ಹೋರಾಟ ಮಾಡುವುದಾಗಿ ದಲಿತ ಸಂಘದ ಮುಖ್ಯಸ್ಥರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

Scan the code