SC-ST ಸಮುದಾಯಕ್ಕೆ ಅನ್ಯಾಯ. ಗದ್ದೆಗೆ ನೀರು ಹರಿಸುವ ಚರಂಡಿ ಕಾಮಗಾರಿ ನಿರ್ಮಾಣ ತಡೆದು, ದಲಿತ ಸಂಘಟನೆಯಿಂದ ಪ್ರತಿಭಟನೆ.
(CHIKKAMAGALURU): ಚಿಕ್ಕಮಗಳೂರು ಜಿಲ್ಲೆ ನರಸಿಹರಾಜಪೂರ ತಾಲೂಕು ಬಿ ಕಣಬುರು ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಸೋಮೇಶ್ವರ ನಗರ ( ಮಠ ಕಾಲೊನಿ ) ದಲ್ಲಿ ಇಂದು ಗದ್ದೆಗೆ ನೀರು ಹರಿಸುವ ಬಾಕ್ಸ್ ಚರಂಡಿ ನಿರ್ಮಾಣ ಕಾಮಗಾರಿಯನ್ನು ತಡೆದು ಪ್ರತಿಭಟನೆ ನೆಡೆಸಿದರು. SC-ST ಸಮುದಾಯಕ್ಕೆ ಅನ್ಯಾಯವಾಗುತ್ತಿದೆ. ನಮಗೆ ಬಂದ ಸೌಭ್ಯಗಳು ಜನರಲ್ ಕಾಲೋನಿಗಳಿಗೆ ದೊರಕುವಂತೆ ಮಾಡುತಿದ್ದಾರೆ. ವಾರ್ಡ್ ಮೆಂಬರ್ ಮಹೇಶ್ ಆಚಾರ್ ನಮ್ಮ ದಲಿತರನ್ನು ತುಳಿಯುವ ಕೆಲಸ ನಡೆಸುತಿದ್ದಾರೆ,ಅಲ್ಲದೆ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಅಡ್ಡಿ ಮಾಡಿದ್ದು ಗ್ರಾಮ ಪಂಚಾಯಿತಿಯಿಂದ ಬರುವ ಯಾವುದೇ ಸೌಲಭ್ಯಗಳು ನಮಗೆ ದೊರಕದಂತೆ ಮಾಡುತಿದ್ದಾರೆ ಎಂದು ಆರೋಪ ಮಾಡಿ ಭೀಮ್ ಆರ್ಮಿ, ದಲಿತ ಮುಖಂಡರು ಮತ್ತು ಊರಿನ ಮುಖ್ಯಸ್ಥರು ಸೇರಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಬಾಳೆಹೊನ್ನೂರು ಠಾಣ ಅಧಿಕಾರಿ ದಿಲೀಪ್ ಕುಮಾರ್ ಅವರು ಮಧ್ಯಪ್ರವೇಶಿಸಿ ನಿಮಗೆ ಅನ್ಯಾಯವಾಗದತೆ ಹಾಗೂ ನಮ್ಮ ಇಲಾಖೆಯ ವತಿಯಿಂದ ಕಾನೂನು ರೂಪದಲ್ಲಿ ನಿಮ್ಮ ಕಾಲೋನಿಗೆ ಆಗುತ್ತಿರುವ ಅನ್ಯಾಯ ವನ್ನು ತಿಳಿಸುವ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು. ನಾಲ್ಕು ದಿನಗಳಲ್ಲಿ ಮನವಿಯನ್ನು ಸಂಭಂದಪಟ್ಟ ಅಧಿಕಾರಿಗೆ ತಲುಪಿಸುವ ಹೊಣೆ ನನ್ನದಾಗಿದೆ ಎಂಬ ಭರವಸೆ ನೀಡಿದರು ಹಾಗೂ ಠಾಣೆಗೆ ಮನವಿ ಪತ್ರ ಸಲ್ಲಿಸುವಂತೆ ಸಂಘಟನೆಯ ಕಾರ್ಯಕರ್ತರಿಗೆ ತಿಳಿಸಿದರು. ಅಧ್ಯಕ್ಷರು ಗ್ರಾಮ ಪಂಚಾಯತಿ ಸದಸ್ಯರು ಸಹ ಪ್ರತಿಭಟನಾಕಾರರ ಮನವೊಲಿಸುವ ಪ್ರಯತ್ನ ಮಾಡಿ ಅಡ್ಡಿಗೊಳಿಸಿದ್ದ ಕಾಮಗಾರಿಯನ್ನು ಪ್ರಾರಂಭಿಸಿದರು.