ಕ್ರೈಂ ನ್ಯೂಸ್ಚಿಕ್ಕಮಗಳೂರು

ಮೋದಿ, ಬಜರಂಗದಳ ವಿರುದ್ಧ ಫೇಸ್‌ಬುಕ್‌ನಲ್ಲಿ ಅವಹೇಳನ.. ಆರೋಪಿಯ ಬಂಧನ..!

ಮೋದಿ, ಬಜರಂಗದಳ ವಿರುದ್ಧ ಫೇಸ್‌ಬುಕ್‌ನಲ್ಲಿ ಅವಹೇಳನ.. ಆರೋಪಿಯ ಬಂಧನ..!

(CHIKKAMAGALURU): ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಅಸ್ಗರ್ ಎಂಬಾತನಿಗೆ ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿದೆ.
ಈತನು ತನ್ನ ಫೇಸ್‌ಬುಕ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಜರಂಗದಳದ ವಿರುದ್ಧ ಕೆಟ್ಟದ್ದಾಗಿ ಪೋಸ್ಟ್ ಹಾಕಿದ್ದಲ್ಲದೇ ಪಾಕಿಸ್ತಾನ ಪೋಸ್ಟರ್ ಹಾಕಿದ್ದಾನೆ.

ಈ ವಿಷಯವಾಗಿ ವಿಚಾರಣೆ ನಡೆಸಿ ಅಸ್ಗರ್ ಕೊಪ್ಪ ಈತನಿಗೆ ಎನ್.ಆರ್.ಪುರ ನ್ಯಾಯಾಲಯವು ಜೂನ್ 6 ರವರೆಗೆ ನ್ಯಾಯಾಂಗ ಬಂಧನಕ್ಕೆ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಹಿಂದೂ ಸಂಘಟನೆ ಮುಖಂಡ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರೊಂದಿಗೆ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ಪೊಲೀಸರು ಸುಮೊಟೊ ಕೇಸ್ ದಾಖಲಿಸಿಕೊಂಡು ಅಸ್ಗರ್ ನನ್ನು ಬಂಧಿಸಿದ್ದರು.

ಅಸ್ಗರ್ ಕೊಪ್ಪ ಎಂಬ ಫೇಸ್ಟುಕ್ ಅಕೌಂಟ್ನಲ್ಲಿ ನಲ್ಲಿ ಪಾಕಿಸ್ತಾನ ಜಿಂದಾಬಾದ್, ಮೋದಿ, ಕೊಪ್ಪ ಭಜರಂಗದಳದ ವಿರುದ್ಧ ಸಹಾ ಅವಹೇಳನಕಾರಿ ಆಗಿ ಪೋಸ್ಟ್ ಹಾಕಿದ್ದು, ಈ ವಿರುದ್ದ ಆಕ್ರೋಶ ವ್ಯಕ್ತವಾಗಿದೆ. ಇದಾದ ಬಳಿಕ ಅಸ್ಗರ್ ಫೇಸ್‌ಬುಕ್‌ ಆಕೌಂಟನ್ನೇ ಡಿಲೀಟ್ ಮಾಡಿದನು. ಆದರೂ ಸಹ ಅಸ್ಗರ್ ವಿರುದ್ಧ ಹಿಂದೂ ಸಂಘಟನೆಗಳು ಈತನ ಮೇಲೆ ತೀವ್ರ ಆಕ್ರೋಷ ವ್ಯಕ್ತ ಪಡಸಿದ್ದಾರೆ. ಆರೋಪಿಯನ್ನು ಸಾರ್ವಜನಿಕರಿಗೆ ಒಪ್ಪಿಸುವಂತೆ ಒತ್ತಾಯ ಸಹಾ ಕೇಳಿ ಬಂದಿತ್ತು.

Leave a Reply

Your email address will not be published. Required fields are marked *

Scan the code