ಮಣ್ಣು ಪರೀಕ್ಷೆ ಮತ್ತು ಸಮಗ್ರ ಪೋಷಕಾಂಶ ನಿರ್ವಹಣೆ: ರೈತರಿಗಾಗಿ ಡಾ. ನಿರಂಜನ್ ಸಲಹೆ.
(SHIVAMOGA): ಪ್ರತಿ ಎರಡ್ಮೂರು ವರ್ಷಕ್ಕೊಮ್ಮೆ ತಮ್ಮ ಕೃಷಿ ಜಮೀನಿನ ಮಣ್ಣು ಪರೀಕ್ಷೀಸಿ ಅದರ ವರದಿ ಆಧರಿಸಿ ಸಮಗ್ರ ಪೋಷಕಾಂಶ ನಿರ್ವಹಣೆಯ ಮೂಲಕ ಕೃಷಿಯ ಸಮೃದ್ಧಿಗೆ ಕೃಷಿಕರು ನಿರಂತರ ಗಮನಹರಿಸಬೇಕು ಎಂದು ಕೆವಿಕೆ ಮಣ್ಣು ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ನಿರಂಜನ್ ಸಲಹೆ ನೀಡಿದರು.
ಶಿಕಾರಿಪುರ ತಾಲ್ಲೂಕಿನ ಹಳೇಮುಗಳಗೆರೆ ಗ್ರಾಮದಲ್ಲಿ ಸಮಗ್ರ ಪೋಷಕಾಂಶಗಳ ನಿರ್ವಹಣೆ ವಿಷಯದ ಕುರಿತು ಗುಂಪು ಚರ್ಚೆಯಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡು ಮಾತನಾಡಿದರು.
ಹಸಿರೆಲೆ ಗೊಬ್ಬರ, ಜೈವಿಕ ಗೊಬ್ಬರ, ಪೀಡೆನಾಶಕ ಬಳಸಿ ಮಿಶ್ರಬೆಳೆಯ ಸುಸ್ಥಿರ ಕೃಷಿ ಪದ್ಧತಿ ಅನುಸರಿಸಬೇಕು.ಸಮಗ್ರ ಪೋಷಕಾಂಶಗಳ ನಿರ್ವಹಣೆಯ ಮೂಲಕ, ರೈತರು ಮಣ್ಣಿನ ಫಲವತ್ತತೆಯ ರಕ್ಷಣೆ, ಪರಿಸರ ಮಾಲಿನ್ಯವನ್ನು ನಿಯಂತ್ರಣ, ಆರೋಗ್ಯಕರ ಆಹಾರ ಸಾಧ್ಯ ಎಂದರು.
ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಇರುವಕ್ಕಿ. ಕೃಷಿ ವಿಜ್ಞಾನಗಳ ಮಹಾವಿದ್ಯಾಲಯದ ಅಂತಿಮ ವರ್ಷದ ವಿದ್ಯಾರ್ಥಿಗಳ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದಲ್ಲಿ ಶಿಬಿರಾರ್ಥಿಗಳ ಜೊತೆಗೆ ಗ್ರಾಮಸ್ಥರು, ಅನೇಕ ರೈತರು ಪಾಲ್ಗೊಂಡು ಮಣ್ಣು ರಕ್ಷಣೆಯ ಕುರಿತು ಸಂವಾದ ನಡೆಸಿದರು.
ವರದಿ: ಮಧು ರಾಮ್ ಸೊರಬ