ನ್ಯೂಸ್ಶಿವಮೊಗ್ಗ

ಅಂತರ್ ಜಿಲ್ಲಾ ಮಟ್ಟದ ಭಾಷಣ ಮತ್ತು ಚರ್ಚಾಸ್ಪರ್ಧೆ

ಅಂತರ್ ಜಿಲ್ಲಾ ಮಟ್ಟದ ಭಾಷಣ ಮತ್ತು ಚರ್ಚಾಸ್ಪರ್ಧೆ

(SHIVAMOGA): ಸೊರಬ: ಕಾಂತಾರಯಜ್ಞ-ಕೊಪ್ಪಲು (ಕೆರೆಕೊಪ್ಪ), ಭಾರತಿಸಂಪದ ವಡ್ಡಿನಗದ್ದೆ-ಸಿದ್ದಾಪುರ ಮತ್ತು ಪರಿಸರ ಜಾಗೃತಿ ಟ್ರಸ್ಟ್ (ರಿ) ಸೊರಬ ಇವುಗಳ ಸಂಯುಕ್ತಾಶ್ರಯದಲ್ಲಿ 2024 ರ ಜನವರಿ 13 ರಂದು ಸೊರಬ ಪಟ್ಟಣದ ಮುರುಘಾಮಠದಲ್ಲಿ ಅಂತರ್ಜಿಲ್ಲಾಮಟ್ಟದ (ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಗೆ ಸಂಬಂಧಿಸಿದಂತೆ ಮಾತ್ರ) ಭಾಷಣ ಮತ್ತು ಚರ್ಚಾ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.


ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಪದವಿಪೂರ್ವ ಹಾಗೂ ಕಲಾ, ವಾಣಿಜ್ಯ ಮತ್ತು ವಿಜ್ಞಾನ-ವೈದ್ಯಕೀಯ ಮತ್ತು ತಾಂತ್ರಿಕ ಸೇರಿ ಎಲ್ಲಾ ರೀತಿಯ ಪದವಿಗಳಲ್ಲಿ (ಸ್ನಾತಕೋತ್ತರ ಪದವಿ ಹೊರತುಪಡಿಸಿ) ಅಧ್ಯಯನ ನಡೆಸುತ್ತಿರುವ ವಿದ್ಯಾರ್ಥಿಗಳಿಗಾಗಿ ನಡೆಯಲಿರುವ ಸ್ಪರ್ಧೆಯಲ್ಲಿ “ಪ್ರತಿಯೊಂದು ಜೀವಿಗೂ ಜೀವಿಸುವ ಹಕ್ಕಿದೆ” ವಿಷಯದ ಕುರಿತು ಭಾಷಣ ಹಾಗೂ “ಜೀವವೈವಿಧ್ಯತೆಯ ಸಂರಕ್ಷಣೆಗೆ ಪ್ರಸ್ತುತ ಜಾರಿಯಲ್ಲಿರುವ ಕಾನೂನುಗಳು ಸಮರ್ಥವಾಗಿವೆ (ಪರವಾಗಿ)/ಸಮರ್ಥವಾಗಿಲ್ಲ (ವಿರೋಧವಾಗಿ) ಕುರಿತು ಚರ್ಚಾಸ್ಪರ್ಧೆ ನಡೆಯಲಿದ್ದು, ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ನಂ.9353822569, 9480136368, 9481903722 ಕ್ಕೆ ಸಂಪರ್ಕಿಸುವಂತೆ ಕಾಂತಾರಯಜ್ಞ ಮುಖ್ಯಸ್ಥ ಶ್ರೀಧರ ಸೀತಾರಾಮ ಹೆಗಡೆ ಕೊಳಗಿ ಕೋರಿದ್ದಾರೆ.

ವರದಿ: ಸಂದೀಪ ಯು.ಎಲ್. ಸೊರಬ

Leave a Reply

Your email address will not be published. Required fields are marked *

Scan the code