ದುರ್ಗಾದೇವಿ ನವರಾತ್ರಿ ಪೂಜಾ ಸಮಿತಿಯಿಂದ ಜಿ.ರಾಜಗೋಪಾಲ ಜೋಷಿ ಅವರಿಗೆ ಆಹ್ವಾನ.
(CHIKKAMAGALURU): ಬಾಳೆಹೊನ್ನೂರಿನ ದುರ್ಗಾದೇವಿ ನವರಾತ್ರಿ ಪೂಜಾ ಸಮಿತಿಯ ಹದಿನೈದನೇ ವರ್ಷದ ನವರಾತ್ರಿ ಉತ್ಸವ ಉದ್ಘಾಟನೆಗೆ ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯದ ಟ್ರಸ್ಟಿ ಜಿ.ರಾಜಗೋಪಾಲ ಜೋಷಿ ಅವರಿಗೆ ಆಹ್ವಾನ ನೀಡಲಾಯಿತು. ಸಮಿತಿಯ ಕಾರ್ಯಾಧ್ಯಕ್ಷ ಬಿ.ಚನ್ನಕೇಶವ, ಪ್ರಧಾನ ಕಾರ್ಯದರ್ಶಿ ಆರ್.ಡಿ.ಮಹೇಂದ್ರ, ಜಂಟಿ ಕಾರ್ಯದರ್ಶಿ ಪ್ರಭಾಕರ್ ಪ್ರಣಸ್ವಿ, ಕೋಶಾಧಿಕಾರಿ ಭಾಸ್ಕರ್ ವೆನಿಲ್ಲಾ, ಪದಾಧಿಕಾರಿಗಳಾದ ಡಿ.ಎನ್.ಸುಧಾಕರ್, ಈಶ್ವರ್ ಇಟ್ಟಿಗೆ, ರೆನ್ನಿ ದೇವಯ್ಯ, ಗಿರೀಶ್, ಸತೀಶ್ ಕೇಶವತ್ತಿ, ಬಿ.ಜಗದೀಶ್ಚಂದ್ರ, ದಿನೇಶ್ ತುಪ್ಪೂರು ಇದ್ದರು.