ಕೋಲಾರನ್ಯೂಸ್

ಕಳೆದೊಂದು ವಾರದಿಂದ ಮಳೆ, ಭೂಮಿ ಹದಗೊಳಿಸಲು ಭರದ ಸಿದ್ಧತೆ, ಕೃಷಿ ಚಟುವಟಿಕೆ ಚುರುಕು.

ಕಳೆದೊಂದು ವಾರದಿಂದ ಮಳೆ, ಭೂಮಿ ಹದಗೊಳಿಸಲು ಭರದ ಸಿದ್ಧತೆ, ಕೃಷಿ ಚಟುವಟಿಕೆ ಚುರುಕು.

(KOLARA): ಬಂಗಾರಪೇಟೆ: ತಾಲ್ಲೂಕಿನ ಕಳೆದೊಂದು ವಾರದಿಂದ ಆಗಾಗ್ಗೆ ಮಳೆಯಾಗುತ್ತಿರುವ ಹಿನ್ನೆಲೆ ವಿವಿಧೆಡೆ ಕೃಷಿ ಚಟುವಟಿಕೆಗಳು ಗರಿಗೆದರಿದ್ದು, ರೈತರು ಭೂಮಿ ಹದಗೊಳಿಸಲು ಭರದ ಸಿದ್ಧತೆ ನಡೆಸಿದ್ದಾರೆ.

ಬರಗಾಲದಿಂದ ತತ್ತರಿಸಿದ್ದ ರೈತರ ಮುಖದಲ್ಲಿ ಮಂದಹಾಸ

ಸದ್ಯ ಪೂರ್ವ ಮುಂಗಾರು ಇರುವುದರಿಂದ ಕೃಷಿ ಚಟುವಟಿಕೆ ಕೈಗೊಳ್ಳಲು ಪೂರಕ ವಾತಾವರಣ ನಿರ್ಮಾಣವಾಗಿದೆ. ರೈತರು ತಮ್ಮ ಜಮೀನುಗಳಲ್ಲಿ ರಂಟೆ (ನೇಗಿಲು) ಹೊಡೆಯುವುದು, ಕುಂಟೆ ಹೊಡೆಯುವುದು, ಕಸ ಕೀಳುವುದು, ತ್ಯಾಜ್ಯ ಆರಿಸುವುದು, ಸಾವಯವ (ಸಗಣಿ) ಕೊಟ್ಟಿಗೆ ಗೊಬ್ಬರ ಹರಡುವುದು ಸೇರಿದಂತೆ ಇನ್ನಿತರ ಕೃಷಿ ಕಾರ್ಯಗಳು ಭರದಿಂದ ಸಾಗಿವೆ.

ರೈತರು ತಮ್ಮ ಎತ್ತುಗಳೊಂದಿಗೆ ಭೂಮಿ ಹದ ಗೊಳಿಸುತ್ತಿದ್ದಾರೆ. ಎತ್ತುಗಳಿಲ್ಲದ ರೈತರು ಟ್ರ್ಯಾಕ್ಟರ್ ಗಳ ಮೊರೆ ಹೋಗಿದ್ದಾರೆ. ಆದರೆ ಟ್ಯಾಕ್ಟರ್‌ಗಳ ಬಾಡಿಗೆ ದುಬಾರಿಯಾಗಿದ್ದು, ರೈತರನ್ನು ಕೊಂಚ ಆತಂಕಕ್ಕೀಡಾಗುವಂತೆ ಮಾಡಿದೆ.

ಪಲ್ಟಿ ರಂಟಿ ರೇಟು ಗಗನಕುಸುಮ: ಟ್ಯಾಕ್ಟರ್ ಯಂತ್ರೋಪಕರಣಗಳ ಬಾಡಿಗೆ ಹೆಚ್ಚಳವಾಗಿದೆ. ಪಲ್ಟಿ ರಂಟೆಯ ಬಾಡಿಗೆಯನ್ನು ಟ್ರ್ಯಾಕ್ಟರ್‌ಗಳ ಮಾಲೀಕರು ಪ್ರತಿ ಎಕರೆಗೆ 2800 ರೂ. ನಿಗದಿ ಮಾಡಿಕೊಂಡಿದ್ದಾರೆ. ಸಾದಾ (ಜೋಡಿ) ರಂಟೆಯ ಬಾಡಿಗೆ ಎಕರೆಗೆ 2000 ರೂ., ಕುಂಟೆ ಹೊಡೆಯುವುದು 1800 ರೂ., ಕಂಟಿಮೀಟರ್



ಕೃಷಿ ಯಂತ್ರಧಾರೆಗೆ ಬೇಡಿಕೆ

ರೈತರ ಕೃಷಿ ಕಾರ್ಯಗಳಿಗೆ ಅನುಕೂಲವಾಗಲು ಕೆಲ ಸಂಘಸಂಸ್ಥೆಗಳು ಕೃಷಿ ಯಂತ್ರಧಾರೆ ಯೋಜನೆಯಡಿ ಕೃಷಿ ಯಂತ್ರೋಪಕರಣಗಳನ್ನು ಕಡಿಮೆ ಬಾಡಿಗೆ ದರದಲ್ಲಿ ರೈತರಿಗೆ ಪೂರೈಸುತ್ತಿದ್ದವು. ಇದರಿಂದ ಬಡ, ಮಧ್ಯಮ ವರ್ಗದ ರೈತರಿಗೆ ಅನುಕೂಲವಾಗುತ್ತಿತ್ತು. ಆದರೆ ಇತ್ತೀಚೆಗೆ ಈ ಯೋಜನೆ ಸ್ಥಗಿತಗೊಂಡಿರುವ ಕಾರಣಕ್ಕೆ ಖಾಸಗಿ ಟ್ರ್ಯಾಕ್ಟರ್ ಗಳ ಮೊರೆ ಹೋಗುವುದು ಅನಿವಾರ್ಯವಾಗಿದೆ.

1 ಸಾವಿರ ರೂ., ಬಡ್ಡಿಕುಂಟಿ ಅಥವಾ ದಿಂಡಿನಕುಂಟೆ 1000 ರೂ. ಹಾಗೂ ರೂಟರ್ ವೇಟರ್‌ಗೆ 1500 ರೂ., ಬಲರಾಮ ರಂಟಿ 1500 ರೂ. ನಿಗದಿ ಮಾಡಿಕೊಂಡಿದ್ದಾರೆ.

ತಾಲ್ಲೂಕಿನಲ್ಲಿ ಕಳೆದೊಂದು ವಾರದಿಂದ ಆಗಾಗ್ಗೆ ಮಳೆ ಸುರಿಯುತ್ತಿದೆಯಾದರೂ ಇನ್ನೂ ಹಲವು ಕಡೆಗಳಲ್ಲಿ ಸರಿಯಾಗಿ ಮಳೆಯಾಗುತ್ತಿಲ್ಲ. ಕೆಲವೆಡೆ ಒಳ್ಳೆಯ ಮಳೆಯಾಗಿದ್ದು, ಬರಗಾಲದಿಂದ

ತತ್ತರಿಸಿದ್ದ ರೈತರ ಮುಖದಲ್ಲಿ ನಗುವಿನ ಮುಂದಹಾಸ ಬೀರಲಾರಂಭಿಸಿದೆ. ಬೇಸಿಗೆಯಲ್ಲಿ ರಂಟೆ ಹೊಡೆಸಿರುವ ಕೆಲ ರೈತರು ಪದಭರಿತ ಮಳೆಗಾಗಿ ಕಾಯುತ್ತಿದ್ದಾರೆ. ಜಮೀನಿನಲ್ಲಿ ಒಣಗಿರುವ ಹೆಂಡೆಗಳೇ ಇದ್ದು ಮಳೆ ಬಂದರೆ ಕರಗುವ ಸಾಧ್ಯತೆ ಇದ್ದು, ಜಮೀನು ಹಸನುಗೊಳಿಸಿದರೆ ಸರಿಯಾಗುವ ಭರವಸೆ ರೈತರಲ್ಲಿದೆ.

ಡಿಸೇಲ್ ಬೆಲೆ ದುಬಾರಿಯಾಗಿರುವುದರಿಂದ ಟ್ರ್ಯಾಕ್ಟರ್‌ಗಳ ಬಾಡಿಗೆ ಹೆಚ್ಚಳ ಮಾಡಬೇಕಾಗಿದೆ. ರೈತರೊಂದಿಗೆ ಚೌಕಾಸಿ ಮಾಡಿ ರೇಟು ಹೊಂದಿಸಿಕೊಂಡು ಟ್ರ್ಯಾಕ್ಟರ್ ರಂಟೆ ಹೊಡೆಯುತ್ತೇವೆ. ಶ್ರೀನಾಥ ಟ್ರ್ಯಾಕ್ಟರ್ ಮಾಲೀಕರು

ಕಳೆದೊಂದು ವಾರದಿಂದ ಒಳ್ಳೆಯ ಮಳೆಯಾಗುತ್ತಿದ್ದು, ಹೊಲ ರಂಟೆ ಹೊಡಿಸಬೇಕಾಗಿದೆ. ಆದರೆ ಟ್ಯಾಕ್ಟರ್ ಮಾಲೀಕರು ಬಾಡಿಗೆ ದುಬಾರಿ ಮಾಡಿದ್ದಾರೆ. ಬರ ಇದ್ದಿದ್ದಕ್ಕೆ ಹಣ ಇಲ್ಲ. ಮೊನ್ನೆ ಬಂದ ಅಲ್ಪಸ್ವಲ್ಪ ಬರ ಪರಿಹಾರದಲ್ಲಿಯೇ ರಂಟಿ ಹೊಡಿಸಬೇಕಾಗಿದೆ. ಬಸವರಾಜ ಎಸ್

ಈ ಮೊದಲು ಬಡ ರೈತರಿಗೆ ಕೃಷಿ ಯಂತ್ರಧಾರೆ ಯೋಜನೆಯಡಿ ಕೃಷಿ ಯಂತ್ರೋಪಕರಣಗಳನ್ನು ಕಡಿಮೆ ಬಾಡಿಗೆ ದರದಲ್ಲಿ ಪೂರೈಸುತ್ತಿದ್ದರಿಂದ ರೈತರಿಗೆ ಅನುಕೂಲವಾಗಿತ್ತು. ಆದರೆ ಯೋಜನೆ ಸ್ಥಗಿತಗೊಂಡಿದೆ. ಸರಕಾರ ಮರು ಜಾರಿಗೊಳಿಸಿದ್ದಲ್ಲಿ ಬಡ ರೈತರಿಗೆ ಸಹಾಯವಾಗಲಿದೆ. ಶಂಕರ ವಿ  ಅಧ್ಯಕ್ಷರು ಕಾಮಸಮುದ್ರ , ರೈತ ಸಂಘ

ವರದಿ: ವಿಷ್ಣು ಕೋಲಾರ

Leave a Reply

Your email address will not be published. Required fields are marked *

Scan the code