ಮೇಸ್ತ್ರಿ ಕಿಟ್ಟು ಬಂದು 3 ರಿಂದ 4 ತಿಂಗಳಾದರೂ ಕಿಟ್ ಕೊಡದೆ ಇರುವುದು ಅನ್ಯಾಯ
(SHIVAMOGA): ಸಾಗರ ಪ್ರವಾಸಿ ಮಂದಿರದಲ್ಲಿ ನಡೆದ ಜನಶಕ್ತಿ ಕಟ್ಟಡ ನಿರ್ಮಾಣ ಮತ್ತು ಕಾಮಗಾರಿ ಕಾರ್ಮಿಕರ ಸಂಘ( ರಿ). ಸಾಗರ. ಸಂಘದ ಅಧ್ಯಕ್ಷರಾದ ರಮೇಶ್ ಬಂಡಗದ್ದೆ ಇವರ ಅಧ್ಯಕ್ಷತೆಯಲ್ಲಿ ಪದಾಧಿಕಾರಿಗಳ ಸಭೆ ನಡೆಸಲಾಯಿತು.
ಈ ಸಭೆಯಲ್ಲಿ ಹಲವು ವಿಚಾರಗಳ ಬಗ್ಗೆ ಚರ್ಚಿಸಲಾಯಿತು ಹಾಗೂ ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಂಘಟನೆ ರಚನೆ ಮಾಡಬೇಕೆಂದು ಕೆಲ ಪದಾಧಿಕಾರಿಗಳಿಗೆ ಜವಾಬ್ದಾರಿಯನ್ನು ನೀಡಲಾಯಿತು. ಕಾರ್ಮಿಕ ಇಲಾಖೆಯಲ್ಲಿ ಮಕ್ಕಳಿಗೆ ಸ್ಕಾಲರ್ಶಿಪ್ ಬರುತ್ತಿಲ್ಲವೆಂದು ಪದಾಧಿಕಾರಿಗಳು ದೂರಿದರು ಕಾರ್ಮಿಕ ಇಲಾಖೆಯಲ್ಲಿ ಮೇಸ್ತ್ರಿ ಕಿಟ್ಟು ಬಂದು 3 ರಿಂದ 4 ತಿಂಗಳಾದರೂ ಕಿಟ್ ಕೊಡದೆ ಇರುವುದನ್ನು ಖಂಡಿಸಿ ಕಾರ್ಮಿಕ ಇಲಾಖೆ ನಿಜವಾದ ಕಾರ್ಮಿಕರಿಗೆ ಅನ್ಯಾಯ ಮಾಡುತ್ತ ಬಂದಿದೆ ತಾಲೂಕಿನ ಶಾಸಕರು ಸಾಗರ ತಾಲೂಕಿನ ಕಾರ್ಮಿಕರ ಕಡಗಣನೆ ಮಾಡುತ್ತಿದ್ದಾರೆಂದು ಮೇಲ್ನೋಟಕ್ಕೆ ಕಾಣಿಸುತ್ತಿದೆ ಇಲಾಖೆಗೆ ಕಿಟ್ಟು ಬಂದು ಮೂರು ತಿಂಗಳಾದರೂ ಮೇಸ್ತ್ರಿ ಕೆಲಸ ಮಾಡುವವರಿಂದ ಅರ್ಜಿ ತಗೊಂಡು ಒಂದು ತಿಂಗಳಾದರೂ ಕಿಟ್ ಕೊಡದೆ ಇರುವುದು ದುರದಷ್ಟಕರವಾಗಿದೆ.
ನಮ್ಮ ತಾಲೂಕಿನಲ್ಲಿ ಕಾರ್ಮಿಕರಿಗೆ ದೇವರು ಕೊಟ್ಟರು ಪೂಜಾರಿ ಕೊಡದಂತಾಗಿದೆ ತಾಲೂಕಿನ ಶಾಸಕರು ತಕ್ಷಣ ಕಿಟ್ ಕೊಡುವ ಬಗ್ಗೆ ಗಮನಹರಿಸಿ ಮೇಸ್ತ್ರಿ ಕಿಟ್ಟನ್ನು ಮೇಸ್ತ್ರಿಯವರಿಗೆ ತಕ್ಷಣ ಕೊಡಿಸಬೇಕು ಹಾಗೂ ಸರ್ಕಾರ ದಿಂದ ಬರುವ ಇಲ್ಲಾ ಸೌಲಭ್ಯ ಒದಗಿಸಬೇಕು ಎಂದು ಶಾಸಕರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ರಮೇಶ್ ಬಂದಗದ್ದೆ. ಗೌರವ ಅಧ್ಯಕ್ಷರಾದ ಆನಂದ್ ಮೇಸ್ತ್ರಿ. ಪ್ರಧಾನ ಕಾರ್ಯದರ್ಶಿಯಾದ ಗಣಪತಿ ತಾಳಗುಪ್ಪ. ಪ್ರಧಾನ ಕಾರ್ಯದರ್ಶಿಯಾದ ಅಶೋಕ್ ಪಡಗೋಡು. ಉಪಾಧ್ಯಕ್ಷರಾದ ಮಂಜು ಪಡಗೋಡು ಉಪಾಧ್ಯಕ್ಷರಾದ ರಾಮಚಂದ್ರ ಚಿಕ್ನಲ್ಲೂರು ಇನ್ನಿತರ ಪದಾಧಿಕಾರಿಗಳು ಹಾಜರಿದ್ದರು.
ವರದಿ : ರಾಘವೇಂದ್ರ ತಾಳಗುಪ್ಪ.