Entertainmentಮನರಂಜನೆ

ಪ್ರೇಕ್ಷಕರ ಮನಗೆದ್ದ ಜೈ ಶ್ರೀರಾಮ್ ನಾಟಕ, ನಗೆಯ ಅಲೆಯ ನಾಟಕ.

ಪ್ರೇಕ್ಷಕರ ಮನಗೆದ್ದ ಜೈ ಶ್ರೀರಾಮ್ ನಾಟಕ, ನಗೆಯ ಅಲೆಯ ನಾಟಕ.

(CHIKKAMAGALURU): ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ಪಟ್ಟಣದ ದುರ್ಗಾದೇವಿ ನವರಾತ್ರಿ ಪೂಜಾ ಸಮಿತಿಯ ಶರನ್ನವರಾತ್ರಿ ಮಹೋತ್ಸವದಲ್ಲಿ ರಾಷ್ಟ್ರಪ್ರಶಸ್ತಿ ವಿಜೇತ ರೇಣುಕನಗರದ ವಿಘ್ನೇಶ್ವರ ಕಲಾಬಳಗದ ಹವ್ಯಾಸಿ ಕಲಾವಿದರು ಪ್ರದರ್ಶಿಸಿದ ಜೈ ಶ್ರೀರಾಮ್ ನಾಟಕವು ಪ್ರೇಕ್ಷಕರ ಮನಗೆದ್ದಿತು.
ನಿರ್ದೇಶಕ ಬಿ.ಜಗದೀಶ್ಚಂದ್ರ ನಿರ್ದೇಶನದಲ್ಲಿ ಸತ್ಯಕಥೆ ಆಧಾರಿತವಾಗಿ ರಚನೆಗೊಂಡ ಜೈ ಶ್ರೀರಾಮ್ ನಾಟಕದಲ್ಲಿ ವಿವಿಧ ದೃಶ್ಯಗಳನ್ನು ನೋಡುಗರ ಮನಮುಟ್ಟುವಂತೆ ಪ್ರದರ್ಶಿಸಲಾಯಿತು.


ಪ್ರಮುಖವಾಗಿ ಮಲೆನಾಡಿನ ಪಟೇಲರು ಹಾಗೂ ಅವರ ಶಿಷ್ಯ ಸಿದ್ದನ ಪಾತ್ರವು ನಾಟಕದಲ್ಲಿ ಪ್ರೇಕ್ಷಕರ ಗಮನ ಸೆಳೆದಿದ್ದು, ಮಲೆನಾಡಿನಲ್ಲಿ ದೀಪಾವಳಿ ಸಂದರ್ಭದಲ್ಲಿ ನಡೆಯುವ ವಿವಿಧ ಆಚರಣೆಗಳನ್ನು ಜನರ ಮನಸ್ಸಿಗೆ ತಲುಪುವಂತೆ ವಿವಿಧ ದೃಶ್ಯಗಳಲ್ಲಿ ತೋರಿಸಲಾಯಿತು. ದೀಪಾವಳಿ ಹಬ್ಬದಲ್ಲಿ ನಡೆಯುವ ಹುಲಿ ಕುಣಿತ, ಕೊರಗ ನೃತ್ಯ, ಜಾನಪದ ಹಾಡುಗಳನ್ನು ನೈಜವಾಗಿ ಪ್ರದರ್ಶಿಸಲಾಯಿತು.
ಇತ್ತೀಚಿನ ದಿನಗಳಲ್ಲಿ ಯುವಜನರು ತಮ್ಮ ಪೋಷಕರು ವೃದ್ಧಾಪ್ಯಕ್ಕೆ ತಲುಪಿದಾಗ ಹೇಗೆ ನೋಡಿಕೊಳ್ಳುತ್ತಾರೆ, ಅವರ ವರ್ತನೆ ಹೇಗಿರುತ್ತದೆ ಎಂಬುದನ್ನು ಸಹ ಮನಸ್ಸಿಗೆ ನಾಟುವಂತೆ ಕಲಾವಿದರು ಅಭಿನಯಿಸಿ ತೋರಿಸಿದರು.
ಇದರೊಂದಿಗೆ ಅಯೋಧ್ಯೆಯ ಶ್ರೀರಾಮ ಮಂದಿರದ ರಾಮಲಲ್ಲಾ ಮೂರ್ತಿಗೆ ಕರ್ನಾಟಕದಿಂದ ತೆಗೆದುಕೊಂಡು ಹೋದ ಕಲ್ಲು ಮೂರ್ತಿ ರೂಪ ಪಡೆದ ಬಗ್ಗೆ ವಿಶೇಷವಾಗಿ ಪ್ರಸ್ತುತಪಡಿಸಲಾಯಿತು. ಅಂತಿಮವಾಗಿ ಮಲೆನಾಡಿನ ಪಟೇಲರು ತಮ್ಮ ಕುಟುಂಬಸ್ಥರು, ಗ್ರಾಮಸ್ಥರೊಂದಿಗೆ ಅಯೋಧ್ಯೆಯ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆಗೆ ರೈಲಿನ ಮೂಲಕ ತೆರಳುವುದನ್ನು ನೈಜರೂಪದಲ್ಲಿ ಬರುವಂತೆ ಅಭಿನಯಿಸಿದರು. ಎಲ್ ಸಿ ಡಿ ಸ್ಕ್ರೀನ್ ನಾಟಕದ ಪರದೆ ರೂಪದಲ್ಲಿ ಬಳಸಲಾಯಿತು.

ಕಡೆಯ ದೃಶ್ಯದಲ್ಲಿ ಅಯೋಧ್ಯೆಯ ಮಾದರಿಯಲ್ಲಿ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆಗೊಳ್ಳುವುದನ್ನು ವಿಶೇಷ ಮಾದರಿಯಲ್ಲಿ ಪ್ರದರ್ಶಿಸಲಾಯಿತು. ಇದರೊಂದಿಗೆ ಹಿಂದೂಗಳ ಮುಂದಿನ ಹೋರಾಟದ ಭಾಗವಾಗಿ ಶ್ರೀಕೃಷ್ಣ ಜನ್ಮಭೂಮಿ ಮಥುರಾದ ಬಗ್ಗೆಯೂ ತೋರಿಸಲಾಯಿತು.
ನಾಟಕದಲ್ಲಿ ಆರ್.ಡಿ.ಮಹೇಂದ್ರ, ಬಿ.ಜಗದೀಶ್ಚಂದ್ರ, ಸಿ.ಎಸ್.ಮಹೇಶ್ಚಂದ್ರ, ರವೀಂದ್ರ ಆಚಾರ್ಯ, ಅರುಣ್‌ಕುಮಾರ್, ಪಿ.ಕೆ.ಪ್ರಕಾಶ್ ಬನ್ನೂರು, ಉಮೇಶ್, ಭೂಮಿಕಾ ಆಚಾರ್ಯ, ಭುವನ, ದೀಕ್ಷಿತಾ ಶೆಟ್ಟಿ, ಸಚಿನ್‌ಕುಮಾರ್, ಕಿರಣ್‌ಕುಮಾರ್ NSD, ಮಂಜು ಹೊಳೆಬಾಗಿಲು, ಇಂದುಜಾ, ಇಶಾನ್, ಕಿಶನ್, ಆನಂದ್, ಕಾರ್ತಿಕ್, ಪ್ರತೀಕ್, ಸಾಮ್ರಾಟ್ ಬಣ್ಣ ಹಚ್ಚಿದರು.
ಸ್ಫೂರ್ತಿ, ನಿಶ್ಚಿತ, ತನುಶ್ರೀ, ಹಿತೈಶಿ, ನಿನಾದ, ಸನ್ಯಂ, ಮಿಶಿಕಾ, ಮಿಷಾ, ಹಿರಣ್ಯ, ಸಾನ್ವಿಕ, ನಿರುಕ್ತ ನಾಟಕದ ನೃತ್ಯದಲ್ಲಿದ್ದರು. ದೀಪಾವಳಿಯ ಜಾನಪದ ಹಾಡಿಗೆ ರತ್ನಮ್ಮ ಶೇಷಯ್ಯ, ಹಾಲಮ್ಮ ಕಾಳಯ್ಯ ದನಿಯಾದರು. ರಂಗಸಜ್ಜಿಕೆಯಲ್ಲಿ ಮಂಜುನಾಥ್ ಆಚಾರ್ಯ, ಪ್ರೇಮ್‌ಕುಮಾರ್, ಭುವನ್, ಯೋಗೀಶ್ ಆಚಾರ್ಯ, ಮಂಜು ಹಲಸೂರು, ಸಂದೀಪ್‌ಶೆಟ್ಟಿ ಸಹಕರಿಸಿದರು.

Leave a Reply

Your email address will not be published. Required fields are marked *

Scan the code