“ಜಲಜೀವನ್ ಮಿಷನ್ ಕಾಮಗಾರಿ ಕಳಪೆ ಮತ್ತು ವ್ಯಾಪಕ ಭ್ರಷ್ಟಾಚಾರದ ಶಂಕೆ- ವೆನಿಲ್ಲಾ ಭಾಸ್ಕರ್”
(CHIKKAMAGALURU): ಪ್ರತಿಮನೆಗೂ ಪೈಪ್ ಲೈನ್ ಮಾಡಿ ನೀರು ನೀಡಬೇಕೆನ್ನುವ ಮೋದಿಜಿಯವರ ಮಹತ್ವಾಕಾಂಕ್ಷೆ ಯೋಜನೆಯಾದ ಜಲಜೀವನ್ ಮಿಶನ್ ನಮ್ಮ ನರಾಪುರ ತಾಲ್ಲೂಕಿನಲ್ಲಿ ಲಂಚದ ಕೂಪಕ್ಕೆ ಸಿಲುಕಿ ಯೋಜನೆ ಸಮರ್ಪಕವಾಗಿ ಅನುಷ್ಠಾನವಾಗುತ್ತಿಲ್ಲವಲ್ಲದೇ ವ್ಯಾಪಕ ಭ್ರಷ್ಟಾಚಾರ ನೆಡೆದಿರುವ ಶಂಕೆ ಇದ್ದು ಈ ಸಂಬoದ ಪಿ ಆರ್ ಡಿ ಯವರಿಗೆ ಜಿಲ್ಲಾಧಿಕಾರಿಗಳವರಿಗೆ ಮತ್ತು ಕೇಂದ್ರ ಜಲಜೀವನ್ ಮಿಷನ್ ಮುಖ್ಯಸ್ಥರಿಗೆ ದೂರು ನೀಡುತ್ತಿರುವುದಾಗಿಯೂ ಅಲ್ಲದೇ ಪಿ ಆರ್ ಡಿ ಇಂಜಿನಿಯರ್ ರವರಿಗೆ ಪೋನ್ ಮುಖಾಂತರ ದೂರು ನೀಡಿದ್ದರು ಇದುವರೆಗೂ ಯಾವುದೇ ಕ್ರಮ ಕೈಗೊಳ್ಳದಿರುವುದು ನೋಡಿದರೇ ಇದರಲ್ಲಿ ಅಧಿಕಾರಿಗಳು ಭ್ರಶ್ಟಾçಚಾರ ಎಸಗಿರುವ ಶಂಕೆ ಇದೆ ಎಂದು ಬಿಜೆಪಿ ಜಿಲ್ಲಾ ಸಮಿತಿ ಸದಸ್ಯರಾದ ವೆನಿಲ್ಲಾ ಭಾಸ್ಕರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಒಂದು ಮೀಟರ್ ಆಳ ತೆಗೆದು ಪೈಪ್ ಲೈನ್ ಮಾಡಬೇಕೆಂಬ ನಿಯಮವಿದ್ಧರು ಕೆಲವೊಂದು ಕಡೆ ಕೇವಲ ಒಂದು ಅಡಿ ಆಳ ತೆಗೆದು ಪೈಪ್ ಹಾಕಿದ್ದಾರೆ. ಅಲ್ಲದೇ ಇದಕ್ಕೆ ಬಳಸಿರುವ ಪೈಪ್ ನ ಗುಣಮಟ್ಟದ ಬಗ್ಗೆಯೂ ಜನತೆ ಶಂಕೆ ವ್ಯಕ್ತ ಪಡಿಸುತಿದ್ದು ಈ ರೀತಿಯ ಕಳಪೆ ಕಾಮಗಾರಿಯಾಗಿ ಆಯಾ ಭಾಗದಲ್ಲಿ ಸ್ಥಳಿಯ ಪಂಚಾಯ್ತಿ ಪಿಡಿಒ ಗಳು ಮತ್ತು ಅಧ್ಯಕ್ಷರು ಇದನ್ನು ಗಮನಿಸಿ ಕಾಮಗಾರಿಗೆ ಒಪ್ಪಿಗೆ ನೀಡಬೇಕು ಇಲ್ಲವೆಂದಲ್ಲಿ ಪಿಡಿಒ ಮತ್ತು ಅಧ್ಯಕ್ಷರನ್ನೇ ಈ ಕಳಪೆ ಕಾಮಗಾರಿಗೆ ಹೊಣೆಯಾಗಿಸಬೇಕು.
ಜೀವರಾಜ್ ಮತ್ತು ಹಿಂದಿನ ಸಂಸದೆ ಶೋಭ ಕರಂದ್ಲಾಜೆಯವರ ಪರಿಶ್ರಮದಿಂದಾಗೆ ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲ್ಲೂಕಿಗೆ ಒಟ್ಟು 51.8792 ಕೋಟಿ ಗಳು ಬಿಡುಗಡೆಯಾಗಿದ್ದು ಇದರಲ್ಲಿ ಬಾಳೆಹೊನ್ನೂರಿನ ಕೆ ಇ ಬಿ ಕಾಲೋನಿಗೆ 195 ಲಕ್ಷ, ಹೊಸಮನೆ ಮಾಗೋಡಿಗೆ 84 ಲಕ್ಷ, ಕಡ್ಲೆಮಕ್ಕಿ ಮಠದ ಕಾಲೋನಿಗೆ 184.50 ಲಕ್ಷ, ಮೆಣಸುಕೂಡಿಗೆ ತಲವಾನೆಗೆ 62 ಲಕ್ಷ, ಸಿಕೆ ವಾಟುಕೂಡಿಗೆಗೆ 87 ಲಕ್ಷ, ಕೆಸುವಿನ ಮನೆ ಮುದುಗುಣಿಗೆ 112 ಲಕ್ಷ ಬಿಡುಗಡೆಯಾಗಿದೆ ಆದರೇ ಸ್ಥಳಿಯ ಶಾಸಕರ ನಿರ್ಲಕ್ಷದಿಂದ ಈ ಯೋಜನೆ ಅದ್ವಾನದತ್ತ ಸಾಗಿದೆಯಲ್ಲದೇ ಶಾಸಕರು ನೈತಿಕತೆ ಇಲ್ಲದೇ ಕೇಂದ್ರದ ಈ ಯೋಜನೆಗೆ ತಮ್ಮ ಪೋಟೋ ಹಾಕಿಸಿಕೊಂಡು ಬ್ಯಾನರ್ ಕಟ್ಟಿಸಿಕೊಳ್ಳುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದರಲ್ಲದೇ ಕೂಡಲೇ ಜಿಲ್ಲಾಧಿಕಾರಿಗಳು ಕಾಮಗಾರಿಯನ್ನು ಪರೀಶೀಲಿಸಿ ಅದ್ವಾನದತ್ತ ಸಾಗುತಿರುವ ಯೋಜನೆಯನ್ನು ಸರಿ ಪಡಿಸಬೇಕೆಂದು ಒತ್ತಾಯಿಸಿದ್ದಾರೆ.