ನ್ಯೂಸ್ಶಿವಮೊಗ್ಗ

ಜನ ಶಕ್ತಿ ಕಟ್ಟಡ ನಿರ್ಮಾಣ ಮತ್ತು ಕಾಮಗಾರಿ ಕಾರ್ಮಿಕರ ದಿನಾಚರಣೆ ಆಚರಣೆ.

ಜನ ಶಕ್ತಿ ಕಟ್ಟಡ ನಿರ್ಮಾಣ ಮತ್ತು ಕಾಮಗಾರಿ ಕಾರ್ಮಿಕರ ದಿನಾಚರಣೆ ಆಚರಣೆ.

(SHIVAMOGA): ಕಾರ್ಮಿಕ ದಿನಾಚರಣೆಯ ದಿನದಂದು ಸಾಗರದ ಹಿರಿಯ ಕಾರ್ಮಿಕರಿಗೆ ಸನ್ಮಾನ ಮತ್ತು ಸಿಹಿ ಹಂಚಿ ಶುಭಾಶಯ ಕೋರಿದರು.
ಕಾರ್ಮಿಕರಿಗೆ ಇಲಾಖೆಯಿಂದ ಬರುವ ಅನುದಾನವಾಗಲಿ ಸವಲತ್ತುಗಳನ್ನು ಕಾರ್ಮಿಕರಿಗೆ ತಲುಪಿಸುವ ಕೆಲಸ ಆಗಬೇಕು. ಈಗಿನ ಸರ್ಕಾರ ಅನೇಕ ಕಾರ್ಮಿಕ ಮಕ್ಕಳಿಗೆ ಸಿಗುವ ಸವಲತ್ತುಗಳನ್ನು ಕಮ್ಮಿ ಮಾಡಿದ್ದು ಮುಂಬರುವ ದಿನದಲ್ಲಿ ಎಲ್ಲಾ ಕಾರ್ಮಿಕರು ಸೇರಿ ಇದರ ವಿರುದ್ಧ ಹೋರಾಟ ನಡೆಸಬೇಕಾಗಿದೆ.

ಇನ್ನು ಕೆಲವರಿಗೆ ಕಾರ್ಮಿಕ ಕಾರ್ಡ್ ಸಿಗದೇ ಇರುವುದು. ಹಾಗೂ ಅದರ ಸೌಲಭ್ಯ ದೊರಕಿಸಿ ಕೊಡಬೇಕಾಗಿದೆ‌ ಎಂದರು. ಮುಖ್ಯವಾಗಿ ಫೇಕ್ ಕಾರ್ಡ್ ನೀಡುವ ಮೂಲಕ ಸಂಘಟನೆ ಅಥವಾ ಗುತ್ತಿಗೆದಾದರಾಗಿದ್ದರು. ಅವರೆ ನೇರ ಕಾರಣ ಮುಂದಿನ‌ದಿನದಲ್ಲಿ ಇದರ ವಿರುದ್ದ ಹೋರಾಟದ ಅವಶ್ಯಕತೆ ಇದೆ ಎಂದರು.

ವೇದಿಕೆಯಲ್ಲಿ  ಅಧ್ಯಕ್ಷರಾದ ರಮೇಶ ಬಂದಗದ್ದೆ, ಸನ್ಮಾನಿತರಾದ ಸದಾಶಿವಣ್ಣ, ಗಣಪತಿ ತಾಳಗುಪ್ಪ, ಗೋಪಾಲ ಗುಡ್ಡೆಮನೆ, ಮದು ಕುಗ್ವೆ, ಹಾಗೂ ಕಾರ್ಮಿಕ ಸಂಘದ ಪದಾಧಿಕಾರಿಗಳು ಹಾಜರಿದ್ದರು.

ವರದಿ:ರಾಘವೇಂದ್ರ ತಾಳಗುಪ್ಪ

Leave a Reply

Your email address will not be published. Required fields are marked *

Scan the code