ಚಿಕ್ಕಮಗಳೂರುನ್ಯೂಸ್

ಕುಂಬರಕೋಡಿನಲ್ಲಿ ಕಾಡಾನೆ ದಾಳಿ.

ಕುಂಬರಕೋಡಿನಲ್ಲಿ ಕಾಡಾನೆ ದಾಳಿ.



(CHIKKAMAGALURU): ಕಾಫಿ ನಾಡಲ್ಲಿ ಹೆಚ್ಚುತ್ತಿರುವ ಕಾಡುಪ್ರಾಣಿಗಳ ದಾಳಿಯಿಂದ ಸಾರ್ವಜನಿಕರು ರೈತರು ಕಂಗಾಲಾಗಿದ್ದಾರೆ. ಅದರಲ್ಲೂ ಕಾಡಾನೆಗಳ ದಾಳಿಯಿಂದ ಹಲವು ಮಹಿಳೆಯರು ತೋಟದ ಕಾರ್ಮಿಕರು ಜೀವ ಕಳೆದುಕೊಂಡಿದ್ದಾರೆ. ಕಾಡಾನೆಗಳು ಕಾಫಿ ತೋಟ, ರೈತರ ಜಮೀನುಗಳಿಗೆ ನುಗ್ಗೆ ಬೆಳೆ ನಾಶ ಮಾಡುತ್ತಿರುವುದು ಕಾಫಿನಾಡಲ್ಲಿ ಹೆಚ್ಚಾಗಿದೆ.

ಆಲ್ದೂರು ಸಮೀಪ ಮಹಿಳೆಯನ್ನು ಕೊಂದ ಆನೆ.

ಚಿಕ್ಕಮಂಗಳೂರು ಜಿಲ್ಲೆಯ ಬಾಳೆಹೊನ್ನೂರು ಸಮೀಪದ ಖಾಂಡ್ಯ ಹೋಬಳಿ ದೇವದಾನ ಗ್ರಾಪಂ ವ್ಯಾಪ್ತಿಯ ಕುಂಬರಕೋಡು ಗ್ರಾಮದ ಸುತ್ತಮುತ್ತ ಕಾಡಾನೆ ಹಾವಳಿ ಆರಂಭವಾಗಿದ್ದು, ತೋಟಗಳಿಗೆ ನುಗ್ಗಿ ಬೆಳೆ ನಾಶ ಮಾಡುತ್ತಿದೆ.
ಗುರುವಾರ ರಾತ್ರಿ ಕುಂಬರಕೋಡು ಗ್ರಾಮದ ಯೋಗೀಶ್ ಎಂಬುವರ ತೋಟಕ್ಕೆ ನುಗ್ಗಿದ ಕಾಡಾನೆ ಕಾಫಿ, ಅಡಕೆ, ತೆಂಗಿನ ಮರಗಳನ್ನು ಉರುಳಿಸಿ ಹಾನಿ ಮಾಡಿದೆ. ಕಾಡಾನೆಯ ಹಾವಳಿಗೆ ಕೃಷಿಕರು ಭಯಭೀತರಾಗಿದ್ದಾರೆ.

Leave a Reply

Your email address will not be published. Required fields are marked *

Scan the code