ಕೆ. ಚಂದ್ರಾರೆಡ್ಡಿ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ : ಎಸ್,ಎನ್, ನಾರಾಯಣಸ್ವಾಮಿ.
(KOLARA): ಬಂಗಾರಪೇಟೆ: ಬಿಜೆಪಿ ಪಕ್ಷದ ಹಿರಿಯ ಮುಖಂಡ ಕೆ ಚಂದ್ರಾರೆಡ್ಡಿ ರವರು ಮೂಲತಃ ಕಾಂಗ್ರೆಸ್ ಪಕ್ಷದವರಾಗಿದ್ದು ಬದಲಾದ ರಾಜಕಾರಣದಲ್ಲಿ ಬಿಜೆಪಿ ಪಕ್ಷವನ್ನು ಸೇರ್ಪಡೆಯಾಗಿದ್ದರು ಅತಿ ಶೀಘ್ರದಲ್ಲಿ ಪುನಃ ಕಾಂಗ್ರೆಸ್ ಪಕ್ಷಕ್ಕೆ ಮರಳಿ ಬರಲಿದ್ದಾರೆ ಎಂದು ಕೆ,ಯು,ಡಿ,ಐ,ಎಫ್,ಸಿ ಅಧ್ಯಕ್ಷ ಹಾಗೂ ಶಾಸಕ ಎಸ್,ಎನ್ ನಾರಾಯಣಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.
ಪಟ್ಟಣದ ಪುರಸಭೆ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯ ನಂತರ ಪತ್ರಿಕಾ ಘೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ರಾಜಕಾರಣದಲ್ಲಿ ಯಾರು ಶತ್ರುಗಳಲ್ಲ ಮಿತ್ರರೂ ಅಲ್ಲ ,ಕೆ ಚಂದ್ರಾರೆಡ್ಡಿ ಅವರು ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡಿದ್ದರೂ ಸಹ ಅವರು ಕಾಂಗ್ರೆಸ್ ಪಕ್ಷದ ಚಿಹ್ನೆಯಲ್ಲಿ ಗೆದ್ದಿರುವ ಪುರಸಭಾ ಸದಸ್ಯರಾಗಿದ್ದಾರೆ, ಇಷ್ಟು ದಿನಗಳ ಕಾಲ ತವರು ಮನೆಯನ್ನು ಬಿಟ್ಟು ಅತ್ತೆ ಮನೆಗೆ ಪ್ರವಾಸ ಹೋಗಿದ್ದರೂ ಅತಿ ಶೀಘ್ರದಲ್ಲಿ ಪುನಃ ಪ್ರವಾಸ ಮುಗಿಸಿ ಮರಳಿ ತವರು ಮನೆಗೆ ಬರಲಿದ್ದಾರೆ ಎಂದರು.
ಅಕ್ರಮ ಖಾತೆ ರದ್ದು, ಪುರಸಭೆ ವಶಕ್ಕೆ 5 ಕೋಟಿ ಬೆಲೆಬಾಳುವ ಸ್ಥಳ:
1984ರಲ್ಲಿ ಪುರಸಭೆ ನೇತೃತ್ವದಲ್ಲಿ ಕುಪ್ಪಸ್ವಾಮಿ ಮೊದಲಿಯಾರ್ ಬಡಾವಣೆಯ ಯೋಜನೆಗಳನ್ನು ರೂಪಿಸಲಾಗಿತ್ತು , ಬಡಾವಣೆಯ ಯೋಜನೆಗೆ ಅನುಗುಣವಾಗಿ ಉದ್ಯಾನವನ, ರಸ್ತೆಗಳು, ಒಳಚರಂಡಿ ನಿರ್ಮಾಣಕ್ಕೆ ಅನುಮೋದನೆ ನೀಗಲಾಗಿತ್ತು, ತದನಂತರ 2003 ರಲ್ಲಿ ಪುರಸಭೆ ಮುಖ್ಯ ಅಧಿಕಾರಿ ಯಾಗಿದ್ದ ನಂಜುಂಡಪ್ಪನವರು ಎಂ ಭರತ್ ಕುಮಾರ್ ಬಿನ್ ವೆಂಕಟರಾಮಯ್ಯ ಎಂಬುವರಿಗೆ 5 ಕೋಟಿ ಬೆಲೆಬಾಳುವ 100*82, 44*102, 46*82 ರ ವಿಸ್ತೀರ್ಣದ ನಿವೇಶನವನ್ನು ಅಕ್ರಮವಾಗಿ ಖಾತೆ ಮಾಡಿಕೊಟ್ಟಿರುತ್ತಾರೆ, ಆದರೆ ಅಲ್ಲಿಯ ಸ್ಥಳೀಯ ನಿವಾಸಿಗಳು ಮತ್ತು ಜನಪ್ರತಿನಿಧಿಗಳು ಉದ್ಯಾನವನಕ್ಕೆ ಮೀಸಲಿಟ್ಟ ಸ್ಥಳವನ್ನು ತೆರವುಗೊಳಿಸಿ ಪಾರ್ಕ್ ನಿರ್ಮಿಸಿ ಕೊಡುವಂತೆ ಮನವಿ ಸಲ್ಲಿಸಿದ್ದರು ಮನವಿಯನ್ನು ಪುರಸ್ಕರಿಸಿದ ಪುರಸಭೆ ತನಿಖೆ ನಡೆಸಿ ಪರಿಶೀಲಿಸಿದಾಗ ಅಕ್ರಮ ಖಾತೆ ಎಂದು ಕಂಡುಬಂದಿರುತ್ತದೆ ಈ ಹಿನ್ನೆಲೆಯಲ್ಲಿ ಪುನಃ ಪುರಸಭೆ ಸದರಿ ಸ್ಥಳವನ್ನು ವಶಕ್ಕೆ ಪಡೆಯಲು ನಿರ್ಧರಿಸಲಾಗಿದೆ ಎಂದರು.
ಕನ್ನಡ ಭವನ ನಿರ್ಮಾಣಕ್ಕೆ ಬದ್ಧ:
ಪುರಸಭೆ ಸ್ವಾಮ್ಯಯದಲ್ಲಿರುವ ನಿವೇಶನದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ 40 ವರ್ಷಗಳ ಹಿಂದೆ ಅನುಮೋದನೆ ನೀಡಲಾಗಿತ್ತು, ವಿಪರ್ಯಾಸ ಇದುವರೆಗೂ ಕನ್ನಡ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಗಮನ ಹರಿಸದ ಹಿನ್ನೆಲೆಯಲ್ಲಿ ಸರ್ಕಾರದ ನಿಯಮಾವಳಿಗಳಂತೆ ಹಿಂಪಡೆಯುವ ಅಧಿಕಾರ ಪುರಸಭೆಗೆ ಇರುತ್ತದೆ, ಈ ಹಿನ್ನೆಲೆಯಲ್ಲಿ ಕನ್ನಡ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳನ್ನು ಒಳಗೊಂಡಂತೆ ಸಭೆ ಕರೆಯಲಾಗುವುದು ಮತ್ತು ಕಟ್ಟಡ ನಿರ್ಮಾಣಕ್ಕೆ ನಿಗದಿತ ಕಾಲಮಿತಿಯನ್ನು ನೀಡಲಾಗುವುದು, ಒಂದು ವೇಳೆ ಸಂಘದ ಪದಾಧಿಕಾರಿಗಳು ಕಟ್ಟಡ ನಿರ್ಮಾಣ ಮಾಡದೆ ಹೋದರೆ ಪುರಸಭೆ ವಶಕ್ಕೆ ಪಡೆದು ಭವನ ನಿರ್ಮಾಣ ಮಾಡಲು ನೆರವು ನೀಡಲಾಗುವುದು ಎಂದರು.
ಸಭೆಯ ಪ್ರಮುಖ ಅಂಶಗಳು:
1. ಬಂಗಾರಪೇಟೆ ಪುರಸಭಾ ವ್ಯಾಪ್ತಿಯ ವಾರ್ಡ್ ನಂ.20 ರಲ್ಲಿ ಇರುವ ಪುರಸಭಾ ಕಛೇರಿ ಮತ್ತು 0.9 ಸಂಜಯಗಾಂಧಿನಗರದಲ್ಲಿ ಇರುವ ರಾಜೀವ್ಗಾಂಧಿ ಸಮುದಾಯಭವನವನ್ನು ನವೀಕರಿಸಿ ಹರಾಜು ಮುಖಾಂತರ ಬಾಡಿಗೆಗೆ ನೀಡುವ ಬಗ್ಗೆ ಚರ್ಚಿಸಿ ತೀರ್ಮಾನ.
2. ಬಂಗಾರಪೇಟೆ ಪುರಸಭಾ ವ್ಯಾಪ್ತಿಯ ಗಾಂಧಿನಗರದಲ್ಲಿ ತಾಲ್ಲೂಕು ಪಂಚಾಯ್ತಿ ಹಿಂಭಾಗದಲ್ಲಿ ಇರುವ ಪುರಸಭೆಯ ವಸತಿ ಗೃಹಗಳನ್ನು ತೆರವುಗೊಳಿಸಿ ವಾಣಿಜ್ಯ ಸಂಕೀರ್ಣ ನಿರ್ಮಿಸಲು ವಿಸ್ತ್ರತ ಯೋಜನಾ ವರದಿ ಸಿದ್ಧಪಡಿಸಲು ಚರ್ಚೆ.
3. 2024-25ನೇ ಸಾಲಿನ 15ನೇ ಹಣಕಾಸು ಅನುದಾನದಲ್ಲಿ ದಿನಾಂಕ:13.08.2024 ರಂದು ಕರೆದಿರುವ ಟೆಂಡರ್ಗಳನ್ನು ಘಟನೋತ್ತರ ಮಂಜೂರಾತಿ ನಿರೀಕ್ಷಣಾ ಮೇರೆಗೆ ಟೆಂಡರ್ ದರಗಳನ್ನು ಅನುಮೋದನೆ ನೀಡಿರುವುದನ್ನು ಅನುಮೋದಿಸುವ ಬಗ್ಗೆ ಚರ್ಚಿಸಲಾಗಿದೆ.
4. ಕೇಂದ್ರ ಪುರಸ್ಕೃತ ಅಮೃತ್ 2.0 ಯೋಜನೆಯಡಿ ಬಂಗಾರಪೇಟೆ ಪಟ್ಟಣಕ್ಕೆ ನೀರು ಸರಬರಾಜು ವ್ಯವಸ್ಥೆಯನ್ನು ಉತ್ತಮಪಡಿಸುವ ಯೋಜನೆಗೆ ಕರ್ನಾಟಕ ನಗರ ನೀರು ಸರಬರಾಜು. ಮತ್ತು ಒಳಚರಂಡಿ ಮಂಡಳಿ, ಕೋಲಾರ ರವರು ಸಿದ್ಧಪಡಿಸಿರುವ ರೂ.22ಕೋಟಿ ಅಂದಾಜುಪಟ್ಟಿಗೆ ತಾಂತ್ರಿಕ ಅನುಮೋದನೆ ನೀಡಲಾಗಿದೆ ಮತ್ತು ಯರಗೋಳ್ ಜಲಾಶಯದ ನೀರನ್ನು ನಗರ ಪ್ರದೇಶಕ್ಕೆ ಸರಬರಾಜು,
ಹಾಗೂ ರಂಗಮಂದಿರ ,ಒಳಾಂಗುಣ ಕ್ರೀಡಾಂಗಣ, ಮತ್ತು ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಹೆಚ್ಚುವರಿಯಾಗಿ 2ಕೋಟಿ ಹಣನೀಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಗೋವಿಂಧ, ಸದಸ್ಯರಾದ ಕೆ ಚಂದ್ರಾರೆಡ್ಡಿ ,ಬಾಳೆಹಣ್ಣು ವೆಂಕಟೇಶ್, ಷಫಿ, ಸಾದಿಕ್, ಪ್ರವೀಣ್, ಅರುಣಾಚಲಂ ಮಣಿ, ರಾಕೇಶ್, ಪೋನ್ನಿ ಇತರರು ಉಪಸ್ಥಿತರಿದ್ದರು.
ವರದಿ: ವಿಷ್ಣು ಕೋಲಾರ