LatestNews & Updatesಚಿಕ್ಕಮಗಳೂರು

ಕನ್ನಡ ಸಾಹಿತ್ಯ ಪರಿಷತ್ ಚಿಕ್ಕಮಳೂರು ಜಿಲ್ಲೆ! ಕಾರ್ಯಕ್ರಮದಲ್ಲಿ ವಿಠಲ್ ರವ್ ಅವರ ನೆನಪು ಮರುಕಳಿಸಿತು.

ಕನ್ನಡ ಸಾಹಿತ್ಯ ಪರಿಷತ್ ಚಿಕ್ಕಮಳೂರು ಜಿಲ್ಲೆ! ಕಾರ್ಯಕ್ರಮದಲ್ಲಿ ವಿಠಲ್ ರವ್ ಅವರ ನೆನಪು ಮರುಕಳಿಸಿತು.

(ಬಾಳೆಹೊನ್ನೂರು- ಸೆ – 10) ಕನ್ನಡ ಸಾಹಿತ್ಯ ಪರಿಷತ್ ಚಿಕ್ಕಮಳೂರು ಜಿಲ್ಲೆ ವಿಠಲ್ ರಾವ್ ರವರ ಸ್ಮರಣಾರ್ಥ ದತ್ತಿ ಉಪನ್ಯಾಸ ಕಾರ್ಯಕ್ರಮವು ಬಾಳೆಹೊನ್ನೂರಿನ ಶ್ರೀ ರಂಭಾಪುರೀ ಜಗದ್ಗುರುಗಳ ಪೀಠದಲ್ಲಿ ನಡೆಯಿತು ಜಗದ್ಗುರುಗಳ ಸಾನಿಧ್ಯದಲ್ಲಿ ಕಾರ್ಯಕ್ರಮವು ವೇದಘೋಷದೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಸ್ವಾಗತ ಕಾರ್ಯಕ್ರಮವನ್ನು ಜಿಲ್ಲಾ ಕಾರ್ಯದರ್ಶಿಗಳಾದ ಎಸ್ ಎಸ್ ವೆಂಕಟೇಶ್ ರವರು ನಡೆಸಿಕೊಟ್ಟರು ರಂಭಾಪುರೀ ಪೀಠದ ಜಗದ್ಗುರುಗಳಿಗೆ ಗೌರವ ಪ್ರಣಾಮಗಳನ್ನು ಸಲ್ಲಿಸುವ ಮೂಲಕ ಶ್ರೀಯುತ ಯಗ್ನಪುರುಷ ಭಟ್ ಪ್ರಾಸ್ತಾವಿಕ ಭಾಷಣವನ್ನು ಮಾಡಿದರು ಶ್ರೀಯುತ ವಿಠಲ್ ರವರ ಜೊತೆಗಿನ ಒಡನಾಟವನ್ನು ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ಮೆಲುಕು ಹಾಕುತ್ತ ದತ್ತ ಪೀಠದ ಹೋರಾಟ ಮತ್ತು ವಿಠಲ್ ರಾವ್ ರವರ ಪಾತ್ರದ ಕುರಿತಾಗಿ ತಿಳಿಸಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ಪರಮಪೂಜ್ಯ ಶ್ರೀ ರಂಭಾಪುರೀ ಜಗದ್ಗುರು ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಮತ್ತು ಬಿ ಸಿ ಗೀತಾ ಹಾಗೂ ವೇದಿಕೆ ಮೇಲೆ ಇದ್ದ ಗಣ್ಯರು ನಡೆಸಿಕೊಟ್ಟರು.

ಉದ್ಘಾಟನಾ ಭಾಷಣವನ್ನು ಮಾಡಿದ ಬಿ ಸಿ ಗೀತಾ ರವರು ದತ್ತಿ ಉಪನ್ಯಾಸದ ಮಹತ್ವವನ್ನು ತಿಳಿಸಿದರು ಹಾಗೂ ಬಿ ಎಸ್ ವಿಠ್ಠಲ್ ರಾವ್ ರವರ ಸಮಾಜಮುಖಿ ಕೆಲಸದ ಬಗ್ಗೆ ನೆನಪು ಮಾಡಿಕೊಂಡರು. ಬಾಳೆಹೊನ್ನೂರು ತಾಲೂಕು ಕೇಂದ್ರವಾಗಬೇಕು ಎಂಬ ಹೋರಾಟದಲ್ಲಿ ವಿಠ್ಠಲ್ ರಾವ್ ಹಾಗೂ ತಮ್ಮ ಓಡಾಟವನ್ನು ನೆನಪಿಸಿಕೊಂಡರು. ನಂತರ ಬಿ ಸಿ ಗೀತಾ ರವರನ್ನು ಸನ್ಮಾನಿಸಲಾಯಿತು

ದತ್ತಿ ಉಪನ್ಯಾಸದ ಬಗ್ಗೆ ಕೆ ಟಿ ವೆಂಕಟೇಶ್ ರವರು ಮಾತನಾಡಿದರು ಧರ್ಮ ಸಂಸ್ಕೃತಿಯನ್ನು ಬಗ್ಗೆ ಮಾತನಾಡಿದ ತಮಿಳು ನಾಡಿನ ಸಿಎಂ ಪುತ್ರನಾದ ಉದಯ ನಿಧಿ ಸ್ಟಾಲಿನ್ ಸನಾತನ ಧರ್ಮದ ಕುರಿತಾಗಿ ನೀಡಿದ ವಿವಾದಾತ್ಮಕ ಹೇಳಿಕೆಯನ್ನು ಕಟುವಾಗಿ ಟೀಕಿಸಿ ಸನಾತನ ಧರ್ಮ ಸೂರ್ಯ ಚಂದ್ರ ಇರುವ ತನಕ ಇರುತ್ತದೆ ಅದನ್ನು ಯಾರಿಂದಲೂ ನಾಶ ಮಾಡಲು ಸಾಧ್ಯವಿಲ್ಲ ಪ್ರಚಾರದ ಹುಚ್ಚಿಗೆ ಈ ರೀತಿಯ ಲಘು ಹೇಳಿಕೆಯನ್ನು ನೀಡುತ್ತಿದ್ದಾರೆ ಎಂದು ಕೆ ಟಿ ವೆಂಕಟೇಶ್ ರವರು ತಿಳಿಸಿದರು.

ದತ್ತ ಪೀಠದ ಐತಿಹ್ಯದ ವಿಷಯದ ಬಗ್ಗೆ ಶ್ರೀಮತಿ ಎಸ್ ಎನ್ ಚಂದ್ರಕಲಾ ಉಪನ್ಯಾಸವನ್ನು ನೀಡಿದರು ತಮ್ಮ ಉಪನ್ಯಾಸದಲ್ಲಿ ದತ್ತ ಪೀಠದ ಬಗ್ಗೆ ಸವಿಸ್ತಾರ ಮಾಹಿತಿಯನ್ನು ನೀಡಿದರು. ದತ್ತ ಪೀಠದ ಹೋರಾಟದಲ್ಲಿ ವಿಠ್ಠಲ್ ರಾವ್ ರವರು ನಡೆಸಿದ ತಾಳೆಗರಿ ಅಭಿಯಾನದ ಬಗ್ಗೆ ತಿಳಿಸಿದರು. ಅಧ್ಯಕ್ಷೀಯ ಭಾಷಣವನ್ನು ಚಿಕ್ಕದಾಗಿ ಚೊಕ್ಕದಾಗಿ ಸೂರಿ ಶ್ರೀನಿವಾಸ್ ರವರು ಮಾಡಿದರು.

ಪರಮಪೂಜ್ಯ ಶ್ರೀ ರಂಭಾಪುರೀ ಪೀಠದ ಜಗದ್ಗುರು ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಹಿಂದೂ ಸಂಸ್ಕೃತಿಯ ಬಗ್ಗೆ ನಿಂದಿಸುವವರು ಹಾಗೂ ಟೀಕಿಸುವವರು ಅವರ ರಾಜಕೀಯ ಮತ್ತು ವ್ಯರ್ಥ ಪ್ರಯತ್ನ ಮಾಡುವವರು ಮಾಡುತ್ತಾ ಇದ್ದಾರೆ ಮತ್ತು ಮಾಡುತ್ತಲೇ ಇರುತ್ತಾರೆ ಹಿಂದೂ ಧರ್ಮ ಸಂಸ್ಕೃತಿಯನ್ನು ಯಾರಿಂದಲೂ ಅಳಿಸಲು ಸಾಧ್ಯವಿಲ್ಲ ಎಂದು ಆಶೀರ್ವಚನ ನೀಡಿದರು. ಪೀಠದ ಪರಿಸರದಲ್ಲಿ ಎಲೆ ಮರೆ ಕಾಯಿಯಂತೆ ಇರುವ ಸಾಹಿತಿಗಳು, ಕಲಾವಿದರು, ಚಿಂತಕರನ್ನು ಕರೆದು ಜಾತ್ರಾ ವೇದಿಕೆಯ ಮೂಲಕ ಸನ್ಮಾನಿಸುವ ಕಾರ್ಯಕ್ರಮವನ್ನು ನಡೆಸುವುದಾಗಿ ಈ ಮೂಲಕ ತಿಳಿಸಿದರು.

Leave a Reply

Your email address will not be published. Required fields are marked *

Scan the code