ನ್ಯೂಸ್ಶಿವಮೊಗ್ಗ

ರಾತ್ರೋರಾತ್ರಿ ಭೂಕಬಳಿಕೆಗೆ ಯತ್ನಿಸಿದ ಕದೀಮರು: ಎಚ್ಚೆತ್ತುಕೊಂಡ ಗ್ರಾಮಸ್ಥರು.

ರಾತ್ರೋರಾತ್ರಿ ಭೂಕಬಳಿಕೆಗೆ ಯತ್ನಿಸಿದ ಕದೀಮರು: ಎಚ್ಚೆತ್ತುಕೊಂಡ ಗ್ರಾಮಸ್ಥರು.

(SHIVAMOGA): ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಸರ್ವೆ ನಂಬರ್ 17/3 ಮೂರು ಎಕರೆ ಜಾಗದಲ್ಲಿ ಕೆಳದಿ ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ತೆರವಿನಕೊಪ್ಪ , ಹಾರೆಗೊಪ್ಪ, ಸರ್ಕಾರಿ ಗೋಮಾಳ ಜಾಗದಲ್ಲಿ ಕ್ರಿಕೆಟ್ ಆಡಲು ಹಾಗೂ ಜಾನುವಾರು ಮೇಯಲು ಸುಮಾರು 70 ವರ್ಷಗಳ ಇತಿಹಾಸದ ಈ ಜಾಗವನ್ನು ನಿನ್ನೆ ದಿನ ರಾತ್ರಿ ಕಬಳಿಸಲು ಭೂ ಕದೀಮರು ಬಂದಿರುತ್ತಾರೆ. ಊರಿನ ಗ್ರಾಮಸ್ಥರಿಗೆ ರಾತ್ರಿ ಗೊತ್ತಾಗದ ಬೆಳಗ್ಗೆ ಗ್ರಾಮಸ್ಥರೆಲ್ಲ ಒಟ್ಟಾಗಿ ತಡೆ ಹಿಡಿದಿರುತ್ತಾರೆ. ಶ್ರೀ ಅಕ್ಕ ನಾಗಮ್ಮ ಕ್ರೀಡಾಂಗಣ ನಾಮದೇಯ ಕೂಡ ಇರುತ್ತದೆ. ಊರಿನ ಗ್ರಾಮಸ್ಥರು ಹೇಳುವುದೇನೆಂದರೆ ನಮ್ಮ ಎದೆ ಬಗೆದುಕೊಂಡು ಹೋದರು ಕೂಡ ನಾವು ಈ ಜಾಗವನ್ನು ಕೊಡುವುದಿಲ್ಲ. ಊರಿನ ಗ್ರಾಮಸ್ಥರು ಅಳಲನ್ನು ತೋಡಿಕೊಂಡಿರುತ್ತಾರೆ.

ಸಾಗರದ ಶಾಸಕರು, ಶಿವಮೊಗ್ಗ ಜಿಲ್ಲಾಧಿಕಾರಿಗಳು, ತಾಲ್ಲೂಕು ದಂಡಾಧಿಕಾರಿಗಳು ಇತ್ತ ಕಡೆ ಹೆಚ್ಚು ಗಮನ ಹರಿಸಬೇಕಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ವರದಿ: ಸಂದೀಪ್ ಸಾಗರ

Leave a Reply

Your email address will not be published. Required fields are marked *

Scan the code