Latestಮನರಂಜನೆ

ಮೂಳೆಗಳೆ ನೀವೇಕೆ ಒಳಗೆ ಅವಿತುಕೊಂಡಿದ್ದೀರಿ?

ಮೂಳೆಗಳೆ ನೀವೇಕೆ ಒಳಗೆ ಅವಿತುಕೊಂಡಿದ್ದೀರಿ?

ಮೂಳೆಗಳೆ ನೀವೇಕೆ ಒಳಗೆ ಅವಿತುಕೊಂಡಿದ್ದೀರಿ?
ಮೈಮೇಲೆ ರಸಸಹಿತ ಕಿರುಜರಿಗಳು
ನಿಮ್ಮ ಮೇಲೆ ಅಂಟುವುದು ಬೇಡವೆಂದೋ
ರಕ್ತ ಮಾಂಸಗಳ ಜೊತೆಗೆ ಸಿಕ್ಕಿಬಿದ್ದಿದ್ದೀರಿ
ಬನ್ನಿ ಹೊರಗೆ ದೇಹ ಕೊಳೆಯುವ ಮುನ್ನ
ಮುಟ್ಟಿದ ಕಡೆಯಲ್ಲ ಮುಟ್ಟಾಗುವುದಿಲ್ಲ !

ಮರದೊಳಗಿನ ರಸವನು
ಭೂಮಿಯೊಳಗಿನ ರಸಮಯಗಳನ್ನು
ನಾವು ಸರಿಯಾಗಿ ನೋಡಿದ್ದೇವೋ ಇಲ್ಲವೋ
ದೇಹದ ರಸವನ್ನು ಮಾತ್ರ ನಿರಾಕರಿಸಿದ್ದಿವಿ
ತಲೆಯೊಳಗಿನ ರಸವನು ಎಂದು ನಿರಾಕರಿಸುವೇವೋ
ರಸದಿಂದ ಮಾಂಸದ ಮುದ್ದೆಯಾಗಿದೆ
ಆಗಿಯುವ ಆಹಾರವು ರಸವಾಗಿದೆ ಅಲ್ಲವೆ?

ಪ್ರವಾಹದಂತೆ ಹರಿದು ಬಂದ ಆಲೋಚನೆಗಳು
ಮೂಳೆಗಳು ತಡೆಯಬೇಕಾಗಿದೆ
ಎಲೆಗಳ ಉದುರುವಿಕೆ, ಹೊಸ ಹುಟ್ಟಿಗೆ ಕಾರಣ
ಬುದ್ದಿಯ ಹುಟ್ಟಿಗೆ, ಕಣ್ತೆರೆಯುವ ಘಳಿಗೆಗೆ
ಯಾರು ಕಾರಣ?


ದಿಲೀಪ್ ಕುಮಾರ್. ಆರ್ ?

ಚಿಕ್ಕಬಳ್ಳಾಪುರ
(ರಂಗನಟ / ನಿರ್ದೇಶಕ)

Leave a Reply

Your email address will not be published. Required fields are marked *

Scan the code