ಒಳ್ಳೆ ಮನಸ್ಸಿನ ಒಕ್ಕೂಟ ತಂಡವು, ಒಂದೊಳ್ಳೆ ಕಾರ್ಯಕ್ರಮಕ್ಕೆ ಕನ್ನಡ ರಾಜ್ಯೋತ್ಸವ ಸಾಕ್ಷಿಯಾಯ್ತು.
(CHIKKAMAGALURU): ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲೂಕಿನ ಬಾಳೆಹೊನ್ನೂರಿನಲ್ಲಿ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಮಲೆನಾಡ ಸೃಜನಶೀಲ ಪ್ರತಿಭೆ ಹಾಗೂ ಮಲೆನಾಡಿನ ಮೇರು ಪ್ರತಿಭೆಯಾದ ಹು.ವಾ. ಶ್ರೀವತ್ಸ ಇವರು ಕಾವ್ಯ,ಕಥೆ,ನಾಟಕ ರಚನೆಯ ಜೊತೆಗೆ ಅಭಿನಯದಲ್ಲೂ ಪ್ರೌಡಿಮೆಯನ್ನು ಕಂಡವರು ಮಲೆನಾಡಿನ ಸಾಮಾನ್ಯ ಜನರಲ್ಲೂ ಸಾಹಿತ್ಯ ಅಭಿರುಚಿಯನ್ನು ಮೂಡಿಸಿದ ವ್ಯಕ್ತಿ ಹಾಗೂ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ದಿವಂಗತ ಹು.ವಾ. ಶ್ರೀವತ್ಸರವರ ಕುಟುಂಬವನ್ನು ಬಾಳೆಹೊನ್ನೂರಿನ ಜೆಸಿಐ ಹಾಗೂ ಒಳ್ಳೆ ಮನಸ್ಸಿನ ಒಕ್ಕೂಟ ತಂಡವು ಗಮನಿಸಿ ಸನ್ಮಾನಿಸಲಾಯಿತು.
ಚೈತನ್ಯ ವೆಂಕಿ ಅವರ ನಿರೂಪಣೆಯೊಂದಿಗೆ ರಾಜೇಶ್ ಬಾಳೆಹೊನ್ನೂರು ಇವರಿಂದ ಪ್ರಾರ್ಥನೆ ಮೂಲಕ ಆರಂಭಗೊಂಡ ಕಾರ್ಯಕ್ರಮವು ದಿವಂಗತ ಹು. ವಾ ಶ್ರೀವತ್ಸ ಕುಟುಂಬವನ್ನು ಸನ್ಮಾನಿಸಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನಮ್ಮ ಮಲೆನಾಡ ಹೆಮ್ಮೆಯ ವಿಶ್ವನಾಥ್ ಸರ್ ಅವರನ್ನು ಸಹ ಸನ್ಮಾನಿಸಲಾಯಿತು. ಆಗಮಿಸಿದಂತಹ ಎಲ್ಲಾ ಒಳ್ಳೆ ಮನಸ್ಸಿನ ಬಾಂಧವರು ಅವರ ಅನುಭವದ ಬಗ್ಗೆ ಕನ್ನಡ ನಾಡು ನುಡಿಯ ಬಗ್ಗೆ ಮಾತನಾಡಿದರು. ನಂತರದಲ್ಲಿ ನಾಡಗೀತೆ ಹಾಗೂ ರಾಜೇಶ್ ರವರ ಕಂಠದಲ್ಲಿ ಮೂಡಿ ಬಂದ ಇದೇ ನಾಡು ಇದೇ ಭಾಷೆ ಎಂಬ ಹಾಡಿನ ಮೂಲಕ ಕಾರ್ಯಕ್ರಮವು ಕೊನೆಗೊಂಡಿತು.
ಈ ಕಾರ್ಯಕ್ರಮದಲ್ಲಿ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ರಾಜೇಂದ್ರ, ರಾಘವೇಂದ್ರ, ಸತೀಶ್ ಅರಳಿಕೊಪ್ಪ, ಆಯೋಜಕರಾದ ಚೈತನ್ಯ ವೆಂಕಿ, ಸ್ಟೀಫನ್, ಮನು ಕುಮಾರ್ ನಮನ, ಶೇಖರ್ ಪೂಜಾರಿ, ರಮೇಶ್ ನಾಯಕ್, ಸೋಮೇಶ್, ರಾಜ್ಯ ಪ್ರಶಸ್ತಿ ಪುರ ಪುರಸ್ಕೃತ ವಿಶ್ವನಾಥ್, ಎಚ್ ಕೃಷ್ಣಮೂರ್ತಿ, ಶ್ರೀಕಾಂತ್, ನಾಗರಾಜ್ ಡಿಕೆ, ಮಂಜುನಾಥ್ ತುಪ್ಪುರ್, ಪ್ರಾಧ್ಯಾಪಕರು, ಮತ್ತಿತ್ತರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.