ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಕರಾಟೆ – ಕುಸ್ತಿ ವಿದ್ಯಾರ್ಥಿಗಳು.
(VIJAYANAGARA): ವಿಜಯನಗರ ಸಂಯುಕ್ತ ಪದವಿ ಪೂರ್ವ ಕಾಲೇಜು, ಮುನಿರಾಬಾದ್ ನ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ, ಇಂದು ನಡೆದ 2023-24 ನೇ ಸಾಲಿನ ಕೊಪ್ಪಳ ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟವು ಗಂಗಾವತಿ ಶ್ರೀ ವಿದ್ಯಾನಿಕೇತನ ಪದವಿ ಪೂರ್ವ ಕಾಲೇಜುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಒಳಾಂಗಣ ಕ್ರೀಡಾ ಕೂಟದಲ್ಲಿ ವಿಜೇತರಾಗಿದ್ದಾರೆ, ಬಾಲಕಿಯರು-ಕುಸ್ತಿಯಲ್ಲಿ- ಸಂಜನಾ, ಭಾನು, ಸುಧಾ, ಜ್ಯೋತಿ, ಎಸ್.ಜ್ಯೋತಿ. ಬಿ, ತೇಜಸ್ವಿನಿ, ಗಿರಿಜಾ, ನವ್ಯ ಶ್ರೀ, ಹಾಗೂ ಬಾಲಕರ ವಿಭಾಗ- ಕರಾಟೆ-ಆಸಿಫ್, ಹನುಮಂತ, ಹನುಮೇಶ, ಬಾಲ ನರಸಿಂಹ,
ಬಾಲಕರ ಕುಸ್ತಿ- ಆಕಾಶ, ಕಿರಣ, ಪ್ರಶಾಂತ, ಶ್ರೀಧರ, ರಾಜು, ಈ ಎಲ್ಲಾ ವಿದ್ಯಾರ್ಥಿಗಳ ಸಾಧನೆಗೆ ನಮ್ಮ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಅಕ್ಕಿ ಶಿವಕುಮಾರ್ ಸರ್,ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರು, ಪ್ರಾಚಾರ್ಯರಾದ ಬಸವರಾಜ, ದೈಹಿಕ ಉಪನ್ಯಾಸಕರಾದ ತಿರುಪತಿ, ತಂಡದ ವ್ಯವಸ್ಥಾಪಕ ಅಂಬಳಿ ವೀರೇಂದ್ರ ಉಪನ್ಯಾಸಕರು ಉಪನ್ಯಾಸಕರು, ವಿದ್ಯಾರ್ಥಿಗಳು, ಪಾಲಕರು, ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ವದರಿ: – ಸುನಿಲ್ ಕುಮಾರ್ ಎಂ NSD