ತಾಲೂಕಿನ ತಿಮ್ಮಪುರ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಕರ್ನಾಟಕ ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ಜನಜಾಗೃತಿ
(KOLARA): ಬಂಗಾರಪೇಟೆ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕೋಲಾರ ಫೋಕಸ್ ಟ್ರಸ್ಟ್ ಬಂಗಾರಪೇಟೆ ಜಾನಪದ ಕಲಾತಂಡ ಕರ್ನಾಟಕ ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ಜನಜಾಗೃತಿ ಕಾರ್ಯಕ್ರಮ ಬಂಗಾರಪೇಟೆ ತಾಲೂಕು ಹತ್ತು ಗ್ರಾಮ ಪಂಚಾಯಿತಿಗಳನ್ನು ಒಳಗೊಂಡಂತೆ 20 ಗ್ರಾಮಗಳಲ್ಲಿ ಬೆಳಗ್ಗೆ ಒಂದು ಸಾಯಂಕಾಲ ಒಂದು ಜನಪದ ತಂಡದ ವತಿಯಿಂದ ಜಾಗೃತಿ ಕಾರ್ಯಕ್ರಮ ನಡೆಸಿಕೊಡಲಾಗುತ್ತಿದೆ.
ಈ ಕಾರ್ಯಕ್ರಮದ ಉದ್ದೇಶ ಗ್ರಾಮೀಣ ಪ್ರದೇಶದ ಜನರಲ್ಲಿ ನಾನ ಯೋಜನೆಗಳ ಮೂಲಕ ರೈತರಿಗೆ ಬಡವರಿಗೆ ಯುವಕರಿಗೆ ಶಕ್ತಿ ತುಂಬುವಂತ ಐದು ಗ್ಯಾರಂಟಿ ಯೋಜನೆಗಳನ್ನು ಕರ್ನಾಟಕ ಸರ್ಕಾರ ಜಾರಿಗೆ ಮಾಡಿದೆ ಒಂದು ಬಡವರು ರೈತರಿಗೆ ಗೃಹ ಜ್ಯೋತಿ ಯೋಜನೆ. ಶಕ್ತಿ ಯೋಜನೆ ಅಡಿ ಉಚಿತ ಪ್ರಯಾಣ. ಪದವಿ ಪಡೆದ ನಿರುದ್ಯೋಗಿ ಯುವಕ ಯುವತಿಯರಿಗೆ ಯುವ ನಿಧಿ ಯೋಜನೆ. ಬಿಪಿಎಲ್ ಕಾರ್ಡುದಾರರಿಗೆ ತಲಾ ಹತ್ತು ಕೆಜಿ ಅಕ್ಕಿ ಅನ್ನ ಭಾಗ್ಯ ಯೋಜನೆ. ಸಾರ್ವಜನಿಕರು ಐದು ಗ್ಯಾರಂಟಿ ಯೋಜನೆಗಳ ಬಗ್ಗೆ ಸವಿಸ್ತಾರವಾಗಿ ತಿಳಿದು ಅದರ ಪ್ರಯೋಜನನ್ನು ಪಡೆದುಕೊಂಡು ನೆಮ್ಮದಿಯ ಜೀವನ ನಡೆಸಬೇಕೆಂದು ಕರ್ನಾಟಕ ಸರ್ಕಾರದ ಬಹುದೊಡ್ಡ ಮಹದ ಆಸೆಯಾಗಿದೆ ಎಂಬ ವಿಚಾರವನ್ನು ಹಳ್ಳಿ ಹಳ್ಳಿಗಳಲ್ಲಿ ಜಾನಪದ ತಂಡದ ಮೂಲಕ ಜಾಗೃತಿ ಮೂಡಿಸುತ್ತಿದ್ದೇವೆ ಈ ತಂಡದಲ್ಲಿನಾಯಕ. ಕಲಾವಿದ ಎಲ್ಲಪ್ಪ. ಲಲಿತಮ್ಮ. ಶಾಂತಮ್ಮ. ರವಿ ಚಂದ್ರ ಇದ್ದರು.
ವರದಿ: ವಿಷ್ಣು ಕೋಲಾರ