ಅಕ್ರಮ ಹಾಗೂ ಅವಿನೀತಿ ಬಗ್ಗೆ ತನಿಖೆ ನಡೆಸುವಂತೆ ಕರ್ನಾಟಕ ರಾಜ್ಯ ರೈತಸಂಘ ಮನವಿ ಸಲ್ಲಿಕೆ
(KOLARA): ಬಂಗಾರಪೇಟೆ: ತಾಲ್ಲೂಕಿನ ಐನೋರಹೊಸಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿಯ ಅನೇಕ ಅಕ್ರಮ ಹಾಗೂ ಅವಿನೀತಿ ಬಗ್ಗೆ ತನಿಖೆ ನಡೆಸುವಂತೆ ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರುಸೇನೆ ಜಿಲ್ಲಾಧ್ಯಕ್ಷ ಟಿ.ಎನ್.ರಾಮೇಗೌಡ ಅವರು, ಮನವಿ ಸಲ್ಲಿಸಿ ಒತ್ತಾಯಿಸಿದರು.
ಪಟ್ಟಣದ ಕೋಲಾರ ಹಾಲು ಒಕ್ಕೂಟ, ಶಿಭಿರ ಕಛೇರಿ ಮುಂಭಾಗ ಪ್ರತಿಭಟನೆ ಹಮ್ಮಿಕೊಂಡು ಮಾತನಾಡಿದ ಅವರು, ಐನೋರಹೊಸಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ಪ್ರಭಾಕರ್ ಅವರು ಅಕ್ರಮ ಲಕ್ಷಾಂತರ ರೂಗಳ ಅವ್ಯವಹಾರ ಮಾಡಿದ್ದಾರೆ. ಬರೀ ಒಂದು ವರ್ಷದಲ್ಲೇ ಇದೇ ಗ್ರಾಮದ ಪ್ರಭಾಕರ್ ಬ್ಯಾಂಕ್ ಖಾತೆಗೆ 90 ಸಾವಿರ, ಹಾಗೂ ಮಂಜುಳ ಖಾತೆಗೆ ೫೦ಸಾವಿರ, ೩ಭಾರಿ ಹಣವನ್ನು ಪದ್ಮ.ಎನ್ ರವರ ಖಾತೆಗೆ 1.98,000/- ವರ್ಗಾಹಿಸಿದ್ದು, ಒಟ್ಟು 3,38,000/- ರೂಗಳು ಅಕ್ರಮವಾಗಿ ಪಡೆದುಕೊಂಡಿರುತ್ತಾರೆ. ಇದು ಬರೊಬ್ಬರಿ ೧೦ತಿಂಗಳ ವ್ಯವಹಾರ ಆಗಿರುತ್ತದೆ. ಆದರೆ ಇವರು ಕಾರ್ಯದರ್ಶಿಯಾಗಿ ನೇಮಕವಾಗಿದ್ದಾಗಿನಿಂದ ಸುಮಾರು ಲಕ್ಷಾಂತರ ರೂಪಾಯಿ ವರ್ಗಾವಣೆಯಾಗಿರುತ್ತದೆಂಬ ಸಂಶಯ ಮೂಡಿರುತ್ತದೆ. ಹಾಲು ಶೇಖರಣೆಯಲ್ಲಿ ವ್ಯತ್ಯಾಸ, ಲೆಕ್ಕ ತಪಾಸಣೆಯಲ್ಲಿ ನ್ಯೂನತೆಗಳು, ಪಶು ಆಹಾರದಲ್ಲಿ ದುರುಪಯೋಗ, ಬೋನಸ್ ನೀಡದೇ ಉತ್ಪಾದಕರಿಗೆ ಅನ್ಯಾಯ ಮಾಡಲಾಗಿದೆ, ಹಾಲು ಸರಬರಾಜುಗೆ ತಕ್ಕಂತೆ ಧರ ನೀಡದೆ ವಂಚಿಸಿದ್ದಾರೆ, ಹಾಲು ಉತ್ಪಾದಕರ ಖಾತೆಗಳಿಗೆ ತಪ್ಪು ಲೆಕ್ಕಚಾರ ಮಾಡಿ ಹಣ ದುರುಪಯೋಗ ಮಾಡಿಕೊಂಡಿದ್ದಾರೆ ಹಾಗೂ ಸಂಘದ ಉಳಿತಾಯ ಖಾತೆ ಹಣ ದೋಖಮಾಡಿಕೊಂಡಿದ್ದಾರೆ. ಹಾಲು ಉತ್ಪಾದಕರಿಗೆ ನಿರಂತರ ಅನ್ಯಾಯವಾಗುತ್ತಿದೆ. ಈ ಕಾರಣದಿಂದ ಕೂಡಲೇ ತುರ್ತು ಕ್ರಮ ಕೈಗೊಂಡು ಇವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಂಡು ಅನ್ಯಾಯಕ್ಕೊಳಗಾದ ಹಾಲು ಉತ್ಪಾದಕರಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಅಧ್ಯಕ್ಷ ಮುರಳಿ, ತಾಲ್ಲೂಕು ಹಸಿರು ಸೇನೆ ಅಧ್ಯಕ್ಷ ಮುನಿಯಪ್ಪ, ಜಿಲ್ಲಾ ಮುಖಂಡರಾದ ರವಿ, ಶ್ರೀನಿವಾಸ್, ಗೋವಿಂದಪ್ಪ, ಕೃಷ್ಣಪ್ಪ, ದೇವರಾಜು, ವಾಸಿಂ, ಎಂ.ಆರ್.ನಾರಾಯಣಗೌಡ, ಲಕ್ಷ್ಮಿಕಾಂತ್ ಹಾಗೂ ಇನ್ನಿತರರಿದ್ದರು.
ವರದಿ: ವಿಷ್ಣು ಕೋಲಾರ