ಕೋಲಾರನ್ಯೂಸ್

ಕೆಂಪೇಗೌಡರು ಸಂವೃದ್ಧಿಯ‌ ಪ್ರತೀಕ: ಅಶ್ವಥ್ ನಾರಾಯಣ.

ಕೆಂಪೇಗೌಡರು ಸಂವೃದ್ಧಿಯ‌ ಪ್ರತೀಕ: ಅಶ್ವಥ್ ನಾರಾಯಣ.

(KOLARA): ಬಂಗಾರಪೇಟೆ: ನಾಡ ಪ್ರಭು ಕೆಂಪೇಗೌಡರು ಸರ್ವ ಜನಾಂಗದ ಅಭ್ಯುದಯಕ್ಕಾಗಿ ಶ್ರಮಿಸಿ ಕೃಷಿ, ನೀರಾವರಿ, ವಾಣಿಜ್ಯ, ವ್ಯಾಪಾರಕ್ಕಾಗಿ  ದೂರ ದೃಷ್ಟಿಯ ಯೋಜನೆಗಳನ್ನು ಜಾರಿಗೆ ತಂದು ಬೆಂಗಳೂರು ಎಂಬ ನವ ನಾಡನ್ನು ಕಟ್ಟಿದ ವಿಶ್ವ ಇತಿಹಾಸ ಪುಟ್ಟದಲ್ಲಿ ಅಜರಾಮರವಾಗಿದ್ದಾರೆ  ಎಂದು ನಿಕಟಪೂರ್ವ ಉಪ ಮುಖ್ಯಮಂತ್ರಿ ಅಶ್ವಥ್ ನಾರಾಯಣ ಅಭಿಪ್ರಾಯಪಟ್ಟರು.

ಪಟ್ಟಣದ ಕೆಂಪೇಗೌಡ ಕಲ್ಯಾಣ ಮಂಟಪದಲ್ಲಿ ತಾಲೂಕು ಒಕ್ಕಲಿಗರ ಸಂಘದ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ನಾಡಪ್ರಭು ಕೆಂಪೇಗೌಡರ 515ನೇ ಜಯಂತೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಕೆಂಪೇಗೌಡರು ಸಮೃದ್ಧಿಯ ಪ್ರತಿರೂಪವಾಗಿದ್ದು ತನ್ನ ಆಡಳಿತದ ಅವಧಿಯಲ್ಲಿ ದೂರ ದೃಷ್ಟಿಯ ಚಿಂತನ ಮನೋಭಾವನೆಗಳ ಮೂಲಕ ನಾಡನ್ನು ಕಟ್ಟಿದ್ದಾರೆ, ಕೆಂಪೇಗೌಡರನ್ನು  ಎಲ್ಲಾ ಜಾತಿ ವರ್ಗ ಧರ್ಮದವರ ಒಳಿತಿಗಾಗಿ ವಿವಿಧ ಮಾರುಕಟ್ಟೆಗಳು, ದೇವಾಲಯಗಳು, ಕೆರೆ ಕುಂಟೆಗಳನ್ನು ಸ್ಥಾಪಿಸಿದರು ಮತ್ತು ಕಲೆ, ಸಾಹಿತ್ಯ, ಸಂಸ್ಕೃತಿ, ಆರ್ಥಿಕ, ಸಾಮಾಜಿಕ, ಔದ್ಯೋಗಿಕ ಕ್ಷೇತ್ರಗಳಿಗೆ ಹೆಚ್ಚಿನ ಒತ್ತುಕೊಟ್ಟು ನವನಗರ ನಿರ್ಮಿಸಿದ ಅದ್ಭುತ  ವ್ಯಕ್ತಿತ್ವ ಅವರದು, ಕೆಂಪೇಗೌಡರನ್ನು ರಾಜ್ಯದ ಜನ ಸ್ಪೂರ್ತಿಯ ಸಂಕೇತವಾಗಿ ಪರಿಗಣಿಸಿ ಅವರ ಹಾದಿಯಲ್ಲಿ ಮುನ್ನುಗ್ಗಬೇಕು ಎಂದರು.


ಅಡ್ಡಿ ಆತಂಕದ ನಡುವೆ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಪುತ್ಥಳಿ:
ಪ್ರಸ್ಥುತ ಆಡಳಿತ ಪಕ್ಷ ಕೆಂಪೇಗೌಡ ವಿಮಾನ ನಿಲ್ದಾಣ ತಮ್ಮ ಕೊಡುಗೆ ಎಂದು ಬೊಬ್ಬೆ ಹಾಕುತ್ತಿದೆ ಆದರೆ ಅವರ ಆಡಳಿತ ಅವಧಿಯಲ್ಲಿ ವಿಮಾನ ನಿಲ್ದಾಣಕ್ಕೆ ಸ್ಥಳ ನೀಡಲಿಲ್ಲ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹಲವು ಅಡ್ಡಿ‌ ಆತಂಕಗಳನ್ನು ಎದುರಿಸಿ  24 ಎಕ್ಕರೆ ಜಮೀನನ್ನು ವಿಮಾನ ನಿಲ್ದಾಣಕ್ಕೆ ಮೀಸಲಿಡಲಾಯಿತು, ತದನಂತರ ರಾಜ್ಯದ ಐತಿಹಾಸಿಕ ಪ್ರದೇಶಗಳಿಂದ ಮಣ್ಣನ್ನು ಸಂಗ್ರಹಿಸಿ 108 ಅಡಿ ಎತ್ತರದ ಕೆಂಪೇಗೌಡ ಪುತ್ಥಳಿ‌ ಹಾಗೂ ಉದ್ಯಾನವನ ನಿರ್ಮಿಸಲಾಯಿತು ಇದು ನಮ್ಮ ಸಾಧನೆ ಎಂದು ತಿಳಿಸಿದರು.

ವಲಸೆ ಹೋಗುವ ಕಾರ್ಯಕ್ಕೆ ಕಡಿವಾಣ ಹಾಕಬೇಕು:
ದೇಶಕ್ಕೆ ಸ್ವಾತಂತ್ರ್ಯ ಬಂದು 77 ವರ್ಷಗಳ ಸುದೀರ್ಘವಾದ ಅವಧಿಯನ್ನು ಕಳೆದರೂ ಇಂದಿಗೂ ಸಹ ಉದ್ಯೋಗ ಹರಿಸಿ ಕ್ಷೇತ್ರದ ಜನರು ವಲಸೆ ಹೋಗುವ ಪ್ರವೃತ್ತಿಯನ್ನು ರೂಢಸಿಕೊಂಡಿದ್ದಾರೆ ಜನಪ್ರತಿನಿಧಿಗಳ ಆದಂತವರು ಸಾರ್ವಜನಿಕರಿಗೆ ಅಗತ್ಯವಾಗಿ ಬೇಕಾದ ವಿದ್ಯುತ್, ನೀರಾವರಿ, ಇಂಟರ್ನೆಟ್, ಗುಣಮಟ್ಟದ ಶಿಕ್ಷಣ, ಕೌಶಲ್ಯ, ತಂತ್ರಜ್ಞಾನ ಹಾಗೂ ಮೂಲಭೂತ ಸೌಲಭ್ಯಗಳನ್ನು ಒದಗಿಸುವಂತಾ ಗಬೇಕು, ಇಲ್ಲಿನ ರೈತರು ಕೃಷಿಯನ್ನು ಅವಲಂಬಿಸಿದ್ದಾರೆ ಈ ಭಾಗಕ್ಕೆ ಶಾಶ್ವತ ನೀರಾವರಿ ಯೋಜನೆಗಳನ್ನು ತರುವ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಕಾರ್ಯಪ್ರವೃತರಾಗಬೇಕು ಎಂದರು.


ನಿಕಟಪೂರ್ವ ಸಂಸದ ಎಸ್ ಮುನಿಸ್ವಾಮಿ ಮಾತನಾಡಿ ಬೆಂಗಳೂರು ಎಂಬ ನಾಡನ್ನು ಕಟ್ಟಿ ಇಡೀ ವಿಶ್ವಕ್ಕೆ ಮಾದರಿಯಾದ ಕೆಂಪೇಗೌಡರ ಪುತ್ಥಳಿಯನ್ನು ನಡು ರಸ್ತೆಯಲ್ಲಿ ನಿರ್ಮಿಸಲಾಗಿದೆ, ಈ ಭಾಗದಲ್ಲಿ ಸಾವಿರಾರು ಎಕ್ಕರೆ ಸರ್ಕಾರಿ ಸ್ಥಳವಿದೆ ಮುಂದಿನ ವರ್ಷದಲ್ಲಿ ಒಂದು ಎಕ್ಕರೆ ಜಮೀನನ್ನು ಗುರುತಿಸಿ ಆ ಭಾಗದಲ್ಲಿ ಕೆಂಪೇಗೌಡರ ಭವ್ಯ ಪುತ್ಥಳಿಯನ್ನು ನಿರ್ಮಾಣ ಮಾಡಲಾಗುವುದು, ಇದರೊಟ್ಟಿಗೆ ಕ್ಷೇತ್ರದಲ್ಲಿ ನಾನ ಕಾರಣಗಳಿಂದ ಎರಡೆರಡು ಬಾರಿ ಕೆಂಪೇಗೌಡ ಜಯಂತಿಯನ್ನು ಆಚರಣೆ ಮಾಡಲಾಗುತ್ತಿದೆ, ಮುಂದಿನ ವರ್ಷದಲ್ಲಿ ಸಮುದಾಯದ ಎಲ್ಲಾ ಮುಖಂಡರ ಸಹಕಾರದೊಂದಿಗೆ ಅತಿ ಹೆಚ್ಚು ವಿಜೃಂಭಣೆಯಿಂದ ಒಂದೇ ಬಾರಿ ಕೆಂಪೇಗೌಡ ಜಯಂತಿಯನ್ನು ಆಚರಿಸೋಣ ಎಂದರು.

ಕೇಂದ್ರ ಬಿಂದುವಾದ ನಿಕಟಪೂರ್ವ ಸಂಸದ ಮುನಿಸ್ವಾಮಿ, ಸೆಲ್ಫಿಗಾಗಿ ಮುಗಿಬಿದ್ದ ಜನಸಾಗರ.
ಈ ಕಾರ್ಯಕ್ರಮದಲ್ಲಿ ಗ್ರಾಮೀಣ ಸೊಗಡು ರಾರಾಜಿಸುತ್ತಿತ್ತು ಚಿಲುಪಿಲಿ ಗೊಂಬೆ, ಗಾರ್ಡಿಗೊಂಬೆ, ಡೊಳ್ಳು ಕುಣಿತ, ಹುಲಿ ವೇಷ, ಡಿ.ಜೆ,  ಹಾಗೂ ನೂರಕ್ಕಿಂತಲೂ ಹೆಚ್ಚು ಸ್ತಬ್ಧ ಚಿತ್ರಗಳು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ನೋಡಿಗರ ಕಣ್ಮನ ಸೊರಗೊಂಡಿತು.
ಈ ಮಧ್ಯೆ ನಿಕಟ ಪೂರ್ವ ಸಂಸದ ಎಸ್ ಮುನಿಸ್ವಾಮಿ ರವರ ಕ್ರೇಜ್ ಹೆಚ್ಚಾಗಿ ಕಾರ್ಯಕ್ರಮದ ಕೇಂದ್ರ ಬಿಂದುವಾಗಿ ಗೋಚರಿಸಿದ್ದರು, ಮತ್ತು  ಅಪಾರ ಅಭಿಮಾನಿಗಳು ಅವರ ಬಳಿ ಸೆಲ್ಫಿಗಾಗಿ ಮುಗಿಬಿದ್ದ ಪ್ರಸಂಗ ನಡೆಯಿತು, ಇದರಿಂದ ಮುನಿಸ್ವಾಮಿ ರವರು ಹೈರಾಣಾದರು.

ಈ ಕಾರ್ಯಕ್ರಮದಲ್ಲಿ ಪರಮಪೂಜ್ಯ ಗುರುಗಳಾದ ಮಂಗಳಾನಂದ ಸ್ವಾಮೀಜಿ, ಸಂಸದ ಮಲ್ಲೇಶ್ ಬಾಬು, ತಾಲೂಕು ಒಕ್ಕಲಿಗ ಸಂಘದ ಅಧ್ಯಕ್ಷ ಶಿವಕುಮಾರ್ ,ಎಂ ಎಲ್ ಸಿ ಇಂಚರ ಗೋವಿಂದರಾಜು, ಒಕ್ಕಲಿಗ ಸಂಘದ ಜಿಲ್ಲಾಧ್ಯಕ್ಷ ಶಂಕರ್, ಮುಖಂಡರಾದ ಪ್ರಕಾಶ್, ದೇವರಾಜ್, ಮಾರ್ಕಂಡೇ ಗೌಡ,‌ ಮಾಜಿ ಶಾಸಕರಾದ ವೆಂಕಟಮುನಿಯಪ್ಪ, ಎಂ.ನಾರಾಯಣಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷ ವೇಣುಗೋಪಾಲ್, ಜೆಡಿಎಸ್ ತಾಲೂಕ್ ಅಧ್ಯಕ್ಷ ಮುನಿರಾಜು ,ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ವಿ. ಮಹೇಶ್, ಶ್ರೀನಿವಾಸ ಗೌಡ, ಮುಖಂಡರಾದ ಕೆ.ಚಂದ್ರಾರೆಡ್ಡಿ, ಕಪಾಲಿ ಶಂಕರ್, ವಡಗೂರು ರಾಮು, ವಿಶ್ವನಾಥ್, ಇತರರು ಉಪಸ್ಥಿತರಿದ್ದರು.

ವರದಿ: ವಿಷ್ಣು ಕೋಲಾರ

Leave a Reply

Your email address will not be published. Required fields are marked *

Scan the code