ತೀರ್ಥಹಳ್ಳಿ ಕಾಡಿನಲ್ಲಿ (ಕೆಂಪು ನಾಯಿ) ಕೆನ್ನಾಯಿ ಗುಂಪು ತೀರ್ಥಹಳ್ಳಿಯಲ್ಲಿ ಪ್ರತ್ಯಕ್ಷ ಆಶ್ಚರ್ಯಗೊಂಡ ಗ್ರಾಮಸ್ಥರು
( ತೀರ್ಥಹಳ್ಳಿ- ಸೆಪ್ಟೆಂಬರ್ -01 ) ಕೆಂಪು ನಾಯಿಯ ಗುಂಪು ಅರಣ್ಯ ಗಸ್ತು ತಿರುಗುತ್ತಿದ್ದ ವೇಳೆ ಅರಣ್ಯ ಅಧಿಕಾರಿ ಕಣ್ಣಿಗೆ ಕೆನ್ನಾಯಿ ಗುಂಪು ಕಂಡುಬಂದಿದೆ. ತೀರ್ಥಹಳ್ಳಿ ತಾಲೂಕಿನ ಹೋದಲಾದಲ್ಲಿ ಅಪರೂಪದ ಕೆನ್ನಾಯಿಯ ಗುಂಪು ಪತ್ತೆಯಾಗಿದ್ದು ಇದು ಹೊಲದ ಗ್ರಾಮಸ್ಥರಲ್ಲಿ ಅಚ್ಚರಿ ಉಂಟುಮಾಡಿದೆ ಮಾರಿ ಕೇರಿ ಅರಣ್ಯದ ಬಳಿ ಅತಿ ವಿರಳವಾದ ಕೆನ್ನಾಯಿಯ ಗುಂಪೊಂದು ಕಂಡುಬಂದಿದೆ. ಅರಣ್ಯ ಗಸ್ತು ತಿರುಗುತ್ತಿದ್ದ ವೇಳೆ ಗಾರ್ಡ್ ಪ್ರಜ್ವಲ್ ಅವರಿಗೆ ಈ ಕೆನ್ನಾಯಿಯ ಗುಂಪು ಕಂಡುಬಂದಿದೆ. ಈ ಕೆನ್ನಾಯಿ ತಮ್ಮ ಗುಂಪಿನೊಂದಿಗೆ ಮಾರಿಕೇರಿ ದಡದಿಂದ ನಲ್ಲಿಸಾರ ಕಾಡಿನತ್ತ ಹಾದು ಹೋಗುತ್ತಿರುವುದನ್ನು ಕಂಡ ಅರಣ್ಯ ಅಧಿಕಾರಿ ಪ್ರಜ್ವಲ್ ತಮ್ಮ ಮೊಬೈಲ್ ನಲ್ಲಿ ಈ ಕೆನ್ನಾಯಿಯ ದೃಶ್ಯಗಳನ್ನು ಸೆರೆ ಹಿಡಿದಿದ್ದಾರೆ. ಇದು ಅಚ್ಚರಿಯ ಪ್ರಸಂಗವಾಗಿದ್ದು ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಕುತೂಹಲ ಉಂಟುಮಾಡಿದೆ.
ಕರ್ನಾಟಕ ರಾಜ್ಯದಲ್ಲಿ ಈ ಕೆಂಪು ನಾಯಿಗಳ ಗುಂಪು ಹೆಚ್ಚಾಗಿ ನಾಗರಹೊಳೆ ಅಭಯಾರಣ್ಯ ವ್ಯಾಪ್ತಿಯಲ್ಲಿ ಮಾತ್ರ ಕಂಡುಬರುವ ಇವುಗಳು ಇಂದು ತೀರ್ಥಹಳ್ಳಿಯ ಹೊದಲದಲ್ಲಿ ಕಂಡುಬಂದಿರುವುದು ಆಶ್ಚರ್ಯಕರವಾಗಿದೆ.