ಅರಣ್ಯ ಪ್ರದೇಶದಲ್ಲಿ ನಾಡಬಂದೂಕುಗಳನ್ನು ಉಪಯೋಗಿಸಿ ಜಿಂಕೆಗಳ ಹತ್ಯೆ…ಅರೋಪಿಗಳ ಬಂಧನ ..!
(SHIVAMOGA): ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಶರಾವತಿ ಕಣಿವೆ ಸಿಂಘಳೀಕ ಅಭಯಾರಣ್ಯದ ಕಾರ್ಗಲ್ ವನ್ಯಜೀವಿ ವಲಯದ ಮುಪ್ಪಾನೆ ಶಾಖೆಯ, ಕಳಸವಳ್ಳಿ ಗಸ್ತಿನ ಅಂಬಾರಗೋಡ್ಲು ಗ್ರಾಮದ ಸರ್ವೆ ನಂ 57ರ ಶರಾವತಿ ಹಿನ್ನೀರಿನ ಅಂಚಿನ ಅರಣ್ಯ ಪ್ರದೇಶಕ್ಕೆ ಅಕ್ರಮವಾಗಿ ಪ್ರವೇಶಿಸಿ ಜಿಂಕೆ (Spotted Deer) ಯನ್ನು ನಾಡಬಂದೂಕಿನಲ್ಲಿ ಹತ್ಯೆ ಮಾಡಿರುವ ಪ್ರಕರಣವನ್ನು ದಿನಾಂಕ:03.04.2024ರಂದು ಕಾರ್ಗಲ್ ವನ್ಯಜೀವಿ ವಲಯದ ಅರಣ್ಯಾಧಿಕಾರಿ ಶ್ರೀಮತಿ.ಸಂಧ್ಯಾ, ಮುಪ್ಪಾನೆ ಶಾಖೆಯ ಉಪ ವಲಯ ಅರಣ್ಯಾಧಿಕಾರಿ ಮೋಜಣಿದಾರ, ಶ್ರೀ.ಸುಧಾಕರ ಜಿ.ಕೆ ಮತ್ತು ಕಳಸವಳ್ಳಿಗಸ್ತಿನ ಗಸ್ತು ಅರಣ್ಯ ಪಾಲಕ ಶ್ರೀ.ಮಹೇಶ್ ಬಮ್ಮನಳ್ಳಿರವರು ಕಾರ್ಯಾಚರಣೆ ನಡೆಸಿ ಪ್ರಕರಣದಲ್ಲಿಭಾಗಿಯಾದ 03 ಜನ ಆರೋಪಿಗಳನ್ನುಬಂಧಿಸಿ ಆರೋಪಿಗಳ ವಿರುದ್ಧಪ್ರಕರಣವನ್ನು ದಾಖಲಿಸಿ ಆರೋಪಿತರಿಂದ ಜಿಂಕೆಯ (Spotted Deer) ತಲೆ – 01 ಸಂಖ್ಯೆ, ಜಿಂಕೆಯ (Spotted Deer) ಚರ್ಮ-01 ಸಂಖ್ಯೆ ಮತ್ತು ನಾಡಬಂದೂಕು-01ಸಂಖ್ಯೆಯನ್ನು ವಶಪಡಿಸಿಕೊಂಡು, ಆರೋವಪಿಗಳನ್ನು ದಿನಾಂಕ:04.04.2024ರಂದು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.
ವರದಿ: ರಾಘವೇಂದ್ರ ತಾಳಗುಪ್ಪ