ಮಹಿಳೆಯನ್ನು ಸದೃಢ ಮಾಡುವ ಜ್ಞಾನ ವಿಕಾಸ ಕೇಂದ್ರ
(SHIVAMOGA): ಸಾಗರ ತಾಲೂಕಿನ ಹೆಗ್ಗೋಡು ವಲಯದ ಕಾರೇ ಹೋಂಡಾ ಕಾರ್ಯಕ್ಷೇತ್ರದ ತೃಪ್ತಿ ಜ್ಞಾನವಿಕಾಸ ಕೇಂದ್ರದಲ್ಲಿ ಸರಕಾರಿ ಯೋಜನೆ ಮತ್ತು ಕಾನೂನು ಈ ವಿಷಯವಾಗಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ವಕೀಲರಾದ ಶ್ರಾವ್ಯ ಇವರು ಸದಸ್ಯರಿಗೆ ಮಹಿಳೆಯರ ಹಕ್ಕುಗಳ ಕುರಿತು ಹಾಗೂ ಒಬ್ಬ ಮಹಿಳೆ ಮೋಸಕ್ಕೆ ಒಳಗಾದಾಗ ಯಾವ ರೀತಿಯ ಸವಾಲುಗಳನ್ನು ಕಾನೂನಿನ ಮುಖಾಂತರ ಎದುರಿಸಬೇಕು ಎನ್ನುವುದನ್ನು ಸವಿಸ್ತಾರವಾಗಿ ತಿಳಿಸಿದರು. ಹಾಗೂ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿಯೂ ಮಹಿಳೆಯರು ಮುಂದೆ ಬರಬೇಕು ಮಹಿಳೆ ಕೇವಲ ಮನೆ ಕೆಲಸದವಳಲ್ಲ ಎಂದು ಸದಸ್ಯರಿಗೆ ತಿಳಿಸಿದರು ಸದ್ರಿ ಕಾರ್ಯಕ್ರಮದಲ್ಲಿ ಒಕ್ಕೂಟದ ಅಧ್ಯಕ್ಷರು ಹಾಗೂ ಸೇವಾ ಪ್ರತಿನಿಧಿ ಕವಿತಾ ಹಾಗೂ ತಾಲೂಕು ಸಮನ್ವಯ ಅಧಿಕಾರಿ ಗೌರಮ್ಮ ಹಾಗೂ ಎಲ್ಲ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ವರದಿ: ರಾಘವೇಂದ್ರ ತಾಳಗುಪ್ಪ