ಜಗತ್ತಿಗೆ ಶ್ರೇಷ್ಠತೆಯನ್ನು ನೀಡಿದವರು ಶ್ರೀಕೃಷ್ಣ ! ಕಲ್ಲಪ್ಪ ಮೆಣಸಿನಹಾಳ್.
*ತಾಲೂಕು ಆಡಳಿತದ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿ*
(ಸಾಗರ-ಸೆ-06) ಶ್ರೀಕೃಷ್ಣ ಜಗತ್ತಿಗೆ ಶ್ರೇಷ್ಠತೆಯನ್ನು ನೀಡಿದ ಅಪರೂಪದ ದಾರ್ಶನಿಕರು ಎಂದು ಉಪತಹಸೀಲ್ದಾರ್ ಕಲ್ಲಪ್ಪ ಮೆಣಸಿನಹಾಳ್ ಹೇಳಿದರು. ಅವರು ಇಲ್ಲಿನ ತಾಲ್ಲೂಕು ಆಡಳಿತ ಇವರು ತಾಲೂಕು ಕಛೇರಿಯ ಸಭಾಂಗಣದಲ್ಲಿ ಆಯೋಜಿಸಿದ್ದ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಮನಸ್ಸಿನ ಒಳಗಿನ ಚಿಂತನೆಗಳನ್ನು ನಿಜಾರ್ಥದಲ್ಲಿ ಅರ್ಥ ಮಾಡಿಕೊಳ್ಳಬೇಕು ಎಂದವರು ಹೇಳಿದರು.
ತಾಲೂಕು ಯಾದವ ಸಮಾಜದ ಅಧ್ಯಕ್ಷ ಕೃಷ್ಣಮೂರ್ತಿ ಬಿಳಿಗಲ್ಲೂರು ಮಾತನಾಡಿ ಭಗವದ್ಗೀತೆಯ ಅರಿವನ್ನು ಎಲ್ಲಾರಲ್ಲೂ ಮೂಡಿಸುವ ಕೆಲಸ ಆಗಬೇಕಾಗಿದೆ. ಜಗದ ಜೀವಿಗಳ ಜೀವ ಜಗತ್ತಿನ ಅನಾವರಣ ಮಾಡುವ ಮೂಲಕ ನಿಜ ಜಗತ್ತನ್ನು ತಿಳಿಸಿದ್ದಾರೆ, ಭಗವದ್ಗೀತೆಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದಿದ್ದರೆ ಜಗತ್ತಿನ ನಾಶ ಸನ್ನಿಹಿತ, ಕೃಷ್ಣನ ಬದುಕು ಎಲ್ಲಾರಿಗೂ ಮಾರ್ಗದರ್ಶನ. ಶ್ರೀ ಕೃಷ್ಣ ಒಂದು ಜಗತ್ತು ಇದ್ದಂತೆ ಎಂದವರು ಹೇಳಿದರು.
ಈ ಸಂದರ್ಭದಲ್ಲಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪಪ್ರಾಂಶುಪಾಲ ರಾಮಚಂದ್ರ ಕೆ ಇವರು ಉಪನ್ಯಾಸ ನೀಡಿದರು ವೇದಿಕೆಯಲ್ಲಿ ಬಿಇಓ ಇ.ಪರಶುರಾಮಪ್ಪ, ಉಪ ತಹಶೀಲ್ದಾರ್ ತೋಯಜಾಕ್ಷೀ ಮೋಹನ್, ವಿ.ಟಿ.ಸ್ವಾಮಿ ಮೊದಲಾದವರು ಉಪಸ್ಥಿತರಿದ್ದರು.
ವರದಿ – ರಾಘವೇಂದ್ರ ತಾ