ಕೋಲಾರಜಿಲ್ಲೆನ್ಯೂಸ್

ಕಾರ್ಮಿಕ ಪ್ರಭುತ್ವದ ಉದಯದ ಕುರುಹು ಕಾರ್ಮಿಕ ದಿನಾಚರಣೆ: ಕೇಶವಮೂರ್ತಿ

ಕಾರ್ಮಿಕ ಪ್ರಭುತ್ವದ ಉದಯದ ಕುರುಹು ಕಾರ್ಮಿಕ ದಿನಾಚರಣೆ: ಕೇಶವಮೂರ್ತಿ

(KOLARA): ಯಾವುದೇ ರಾಷ್ಟ್ರದ ಪ್ರಗತಿಯ ದಿಕ್ಸೂಚಿ ಅಲ್ಲಿನ ಕಾರ್ಮಿಕವರ್ಗದ ಸದೃಢ ಸಂಪನ್ಮೂಲವನ್ನು ಅವಲಂಬಿಸಿರುತ್ತದೆ, ಕಾರ್ಮಿಕರು ಜಗತ್ತಿನ ಆಸ್ತಿ. ಕಾರ್ಮಿಕರಿಲ್ಲದ ಜಗತ್ತನ್ನು ಊಹಿಸುವುದಕ್ಕೇ ಸಾಧ್ಯವಿಲ್ಲ. ಕಾರ್ಮಿಕ ಪ್ರಭುತ್ವದ ಉದಯದ ಕುರುಹುವಾಗಿ ಮತ್ತು ಶ್ರಮಜೀವಿಗಳನ್ನು ಗೌರವಿಸುವ, ಅವರ ಸೇವೆಯನ್ನು ಸ್ಮರಿಸುವ ದಿನವಾಗಿ ನಾವು ಕಾರ್ಮಿಕ ದಿನಾಚರಣೆಯನ್ನು ಆಚರಿಸುತ್ತಿರುವುದು ಅತ್ಯಂತ ಸಂತಸದಾಯಕ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಕೇಶವಮೂರ್ತಿ.ಬಿ ಅಭಿಪ್ರಾಯ ಪಟ್ಟರು.

ಬಂಗಾರಪೇಟೆ: ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ರೀಚ್ ಸಂಸ್ಥೆ, ಫೋಕಸ್ ಸಂಸ್ಥೆ ಮತ್ತು ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಹಾಗೂ ಕಾರ್ಮಿಕ ಇಲಾಖೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಕಾರ್ಮಿಕ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಾರ್ಮಿಕರು ತಮ್ಮ ಹಕ್ಕುಗಳ ರಕ್ಷಣೆಗಾಗಿ ಧೃತಿಗೆಡುವ ಅಗತ್ಯವಿಲ್ಲ ಸಂವಿಧಾನ ಕಾರ್ಮಿಕರ ರಕ್ಷಣೆಗೆ ಸಂಬoಧಪಟ್ಟoತೆ ಅನೇಕ ಕಾನೂನು ಕಟ್ಟಳೆಗಳನ್ನು ಜಾರಿಗೆ ತಂದಿದೆ.


ಕಾರ್ಮಿಕರ ಹಕ್ಕುಗಳ ಬಗ್ಗೆ ಅರಿವಿನ ಕೊರತೆ, ಬಂಡವಾಳ ಶಾಹಿಗಳಿಗೆ ಲಾಭ:
ಆರ್ಟಿಕಲ್ 14 ಮತ್ತು 15ರಲ್ಲಿ “ಸಮಾನ ಕೆಲಸಕ್ಕೆ ಸಮಾನ ವೇತನ” ಎಂದು ತಿಳಿಸಲಾಗಿದೆ ಇದರಾನ್ವಯ ಕಾನೂನಿನ ಮುಂದೆ ಎಲ್ಲಾರೂ ಸಮಾನರಾಗಿದ್ದು ದೈಹಿಕ ಸಾಮರ್ಥ್ಯ, ಕೌಶಲ್ಯರಹಿತ ಮತ್ತು ನುರಿತ ಕಾರ್ಮಿಕರು ಅವರ ಅರ್ಹತೆಗೆ ಅನುಗುಣವಾಗಿ ವೇತನ ಪಾವತಿ ಮಾಡಬೇಕು ಅದನ್ನು ಹೊರತುಪಡಿಸಿ ಲಿಂಗತಾರತಮ್ಯ ಮಾಡುವಂತಿಲ್ಲ ಎನ್ನಲಾಗಿದೆ.
ಸಂವಿಧಾನವು ಎಲ್ಲಾ ರೀತಿಯ ಬಾಲಕಾರ್ಮಿಕ ಪದ್ಧತಿಯನ್ನು ನಿಷೇಧಿಸಿದೆ. 15 ವರ್ಷದೊಳಗಿನ ಮಗುವನ್ನು ಯಾರೂ ಕೆಲಸಕ್ಕೆ ನೇಮಿಸಿಕೊಳ್ಳುವಂತಿಲ್ಲ. ಆರ್ಟಿಕಲ್ 24ರ ದಂಡನೆಯು ತೀವ್ರವಾಗಿದೆ. ಹಾಗೂ ಯಾವುದೇ ಒಬ್ಬ ಕಾರ್ಮಿಕನನ್ನು ಒತ್ತಾಯಪೂರ್ವಕವಾಗಿ ಕೆಲಸ ಮಾಡಿಸಿಕೊಳ್ಳುವುದನ್ನು ಕಂಡನಾರ್ಹ ಎಂದು ತಿಳಿಸಲಾಗಿದೆ, ಇದರ ಜೊತೆಯಲ್ಲಿ ಉದ್ಯೋಗದ ಭದ್ರತೆ, ಆರೋಗ್ಯಭದ್ರತೆಗೆ ಸಂಬoಧಪಟ್ಟoತೆ ಅನೇಕ ಕಾನೂನು ಕಟ್ಟಲೆಗಳು ಸಂವಿಧಾನದಲ್ಲಿದೆ. ವಿಪರ್ಯಾಸ ಕಾರ್ಮಿಕರಿಗೆ ಅವರ ಹಕ್ಕುಗಳ ಬಗ್ಗೆ ಸಮರ್ಪಕ ಅರಿವಿಲ್ಲದಿರುವುದು ಅನೇಕ ಗೊಂದಲಗಳಿಗೆ ಕಾರಣವಾಗಿದೆ ಇದನ್ನೆ ಬಂಡವಾಳ ಮಾಡಿಕೊಂಡ ಕೆಲ ಖಾಸಗಿ ಕಂಪನಿಗಳು ಮತ್ತು ವಾಣಿಜ್ಯೋದ್ಯಮಿಗಳು ಕಾರ್ಮಿಕರಿಂದ ಮನಸ್ಸೊಯಿಚ್ಛೆ  ದುಡಿಸಿಕೊಳ್ಳುವುದರ ಮೂಲಕ ಅಧಿಕ ಲಾಭ ಗಳಿಸುತ್ತಿರುವುದು ಸಮಂಜಸವಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ಪಿಎಸ್‌ಐ ಭಾಗ್ಯಲಕ್ಷ್ಮಿ ಮಾತನಾಡಿ, ಯಾವುದೇ ಕಾರ್ಖಾನೆ ಅಥವಾ ಕಂಪನಿಗಳಲ್ಲಿ ಕಾರ್ಮಿಕರಿಗೆ ತೊಂದರೆಯಾದಲ್ಲಿ ಪೊಲೀಸ್ ಇಲಾಖೆಗೆ ದೂರನ್ನು ನೀಡಬೇಕು, ಪ್ರಸ್ತುತ ಪೊಲೀಸ್ ಠಾಣೆಗಳು ಜನಸ್ನೇಹಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ನಿಮ್ಮ ದೂರುಗಳಿಗೆ ಸಕರಾತ್ಮಕವಾಗಿ ಸ್ಪಂಧಿಸಿ ನ್ಯಾಯ ಒದಗಿಸಿಕೊಡುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದೆಂದರು.

ಈ ಕಾರ್ಯಕ್ರಮದಲ್ಲಿ ವಕೀಲ ಸಂಘದ ಅಧ್ಯಕ್ಷ ಎಸ್.ನಾರಾಯಣಪ್ಪ, ಅ.ನಾ.ಹರೀಶ್, ಶೈಲಜ, ಇನ್ನಿತರರು ಉಪಸ್ಥಿತರಿದ್ದರು.

ವರದಿ: ವಿಷ್ಣು ಕೋಲಾರ

Leave a Reply

Your email address will not be published. Required fields are marked *

Scan the code