ಜಿಲ್ಲೆನ್ಯೂಸ್

ಲಕ್ಷ ಅನುದಾನ, ಅಲಕ್ಷ್ಯ ಕಾಮಗಾರಿ
2 ದಿನಕ್ಕೆ ಕಿತ್ತು ಬಂದ ಡಾಂಬರ್

ಲಕ್ಷ ಅನುದಾನ, ಅಲಕ್ಷ್ಯ ಕಾಮಗಾರಿ 2 ದಿನಕ್ಕೆ ಕಿತ್ತು ಬಂದ ಡಾಂಬರ್

(CHIKKAMAGALURU): ಬಾಳೆಹೊನ್ನೂರು ಖಾಂಡ್ಯ ಮಾರ್ಗವಾಗಿ ಕಡಬಗೆರೆ ಸಮೀಪ ನಿರ್ಮಾಣ ಮಾಡಿರುವ ಸುಮಾರು 30-40 ಮೀಟರ್‌ ರಸ್ತೆ ಕಾಮಗಾರಿ ತೀರಕಳಪೆಯಾಗಿರುವ ಕಾರಣ ಮರುಡಾಂಬರಿಕರಣವಾದ 2 ದಿನದಲ್ಲೆ ಡಾಂಬರ್‌ ಮೇಲೆದ್ದು, ಜಲ್ಲಿ ಕಲ್ಲುಗಳು ಆಚೆಗೆ ಬಂದು ಸಂಚಾರ ಮಾಡುವ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ.

ಮಲೆನಾಡು ಭಾಗಗಳಲ್ಲಿ ರಸ್ತೆಗಳು ಹೆಚ್ಚು ಅದಗೆಡುತ್ತಿದ್ದು ಚುನಾವಣೆ ಸಂದರ್ಭದಲ್ಲಿ ಮಾತ್ರ ರಸ್ತೆಗಳ ರಿಪೇರಿ, ಪ್ಯಾಚ್ ವರ್ಕ್ , ಮಾಡಲಾಗಿದ್ದು ಶಾಶ್ವತ ಪರಿಹಾರ ಕಂಡುಕೊಳ್ಳುತ್ತಿಲ್ಲ.
ಇದೆ ಮೊದಲಲ್ಲ, ಈ ಹಿಂದೆಯೂ ಕೂಡ ರಸ್ತೆ ನಿರ್ಮಾಣವಾದ 15 ದಿನದಲ್ಲೇ ಡಾಂಬರ್ ರೊಟ್ಟಿಯಂತೆ ಕಿತ್ತು ಬಂದಿತ್ತು.

ಶಾಸಕರು ದಿನ ನಿತ್ಯ ಇದೆ ಮಾರ್ಗವಾಗಿ ಸಂಚಾರ ಮಾಡುತ್ತಿದ್ದರು, ಕಣ್ಣೆದುರೇ ರಸ್ತೆ ಕಿತ್ತು ಬರುತ್ತಿದ್ದರೂ ಗುತ್ತಿಗೆದಾರರ ಮೇಲೆ ಯಾಕೆ ಕ್ರಮಕೈಗೊಂಡಿಲ್ಲ? ಎಂದು ಸಾರ್ವಜನಿಕರು ಹಾಗೂ ವಾಹನ ಸವಾರರು ಪ್ರಶ್ನಿಸಿದ್ದಾರೆ.

Leave a Reply

Your email address will not be published. Required fields are marked *

Scan the code