ಚಿತ್ರದುರ್ಗನ್ಯೂಸ್

ಎರಡನೇ ಬಾರಿ ದೇವಸಮುದ್ರ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಲಕ್ಷ್ಮಿ ಟೀ ಚಂದ್ರಣ್ಣ ಆಯ್ಕೆ.

ಎರಡನೇ ಬಾರಿ ದೇವಸಮುದ್ರ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಲಕ್ಷ್ಮಿ ಟೀ ಚಂದ್ರಣ್ಣ ಆಯ್ಕೆ.

(CHITRADURGA): ಮೊಳಕಾಲ್ಮುರು: ತಾಲೂಕಿನ ಗ್ರಾಮ ಪಂಚಾಯತಿಯ ಎರಡನೇ ಬಾರಿಗೆ ನೂತನ ಅಧ್ಯಕ್ಷರಾಗಿ ಬಿಜೆಪಿ ಅಭ್ಯರ್ಥಿ ಲಕ್ಷ್ಮಿ ಟಿ ಚಂದ್ರಣ್ಣನವರು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯನ್ನು ಪರಾಭ ಗೊಳಿಸಿದ್ದಾರೆ.

ದೇವಸಮುದ್ರ ಗ್ರಾಮ ಪಂಚಾಯತಿ ಎರಡನೇ ಬಾರಿಯ ಅಧ್ಯಕ್ಷರಾಗಿ ಆಯ್ಕೆಯಾದ ಬಿಜೆಪಿ ಬೆಂಬಲಿತ ಅಭ್ಯರ್ಥಿ ಲಕ್ಷ್ಮಿ ಟಿ ಚಂದ್ರಣ್ಣನವರ ವಿರುದ್ಧ ಕಳೆದ ಜನವರಿ 6ರಂದು 14 ಸದಸ್ಯರು ಅವಿಶ್ವಾಸ ನಿರ್ಣಯ ಮಂಡಿಸಲು ಮನವಿ ಸಲ್ಲಿಸಿದ್ದರು. ಈ ಹಿನ್ನಲೆಯಲ್ಲಿ ಉಪ ವಿಭಾಗಾಧಿಕಾರಿ ವೆಂಕಟೇಶ್ ನಾಯಕ್ ಜನವರಿ 29 ರಂದು ಚುನಾವಣೆ ನಿಗದಿಸಿದರು. ಕಾಂಗ್ರೆಸ್ ಅಭ್ಯರ್ಥಿ ಧರ್ಮಾವತಿ ತಿಪ್ಪೇಸ್ವಾಮಿ ಪರ 14 ಸದಸ್ಯರು ಹಾಗೂ ಬಿಜೆಪಿ ಬೆಂಬಲಿತ ಅಭ್ಯರ್ಥಿ ಲಕ್ಷ್ಮೀ ಟಿ ಚಂದ್ರಣ್ಣ ಪರ 6 ಸದಸ್ಯರ ಬೆಂಬಲ ಸಾಬೀತಾಗಿದ್ದು. ಆದರೆ ಒಬ್ಬ ಸದಸ್ಯ ಗೈರಾದ  ಕಾರಣ ಚುನಾವಣೆ ನಿಯವಾದ ಪ್ರಕಾರ ಅವಿಶ್ವಾಸ ನ್ಯಾಯ ಅಂಗೀಕಾರವಾಗಲಿಲ್ಲ. ಹಿನ್ನೆಲೆಯಲ್ಲಿ ಲಕ್ಷ್ಮಿ ಟಿ ಚಂದ್ರಣ್ಣ ನವರೆ ಪೂರ್ಣಾವಧಿವರಿಗೂ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಮುಂದುವರೆಯಲಿದ್ದಾರೆ ಎಂದು ಚುನಾವಣೆ ಅಧಿಕಾರಿಯಾದ ವೆಂಕಟೇಶ್ ನಾಯಕ್ ಘೋಷಿಸಿದರು

ಈ ಸಂದರ್ಭದಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಲಕ್ಷ್ಮಿ ಟಿ ಚಂದ್ರಣ್ಣನವರ   ಬೆಂಬಲಿಗರಾದ  ತಿಮ್ಲಾಪುರ ಮೂರ್ತಿ ಎಚ್, ದೇವಸಮುದ್ರ ಪಿಎಸ್ ಪರಮೇಶ್ವರಪ್ಪ, ಉರ್ಥಳ್ ಕೃಷ್ಣಪ್ಪ, ವಿಠಲಾಪುರ ತಿಮ್ಮರೆಡ್ಡಿ, ಉರ್ತಳ್ ರವಿ ಸ್ವಾಮಿ ಮೊದಲಾದವರು ಸಿಹಿ ಹಂಚಿ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಎಸ್ ತಿಪ್ಪೇಸ್ವಾಮಿ ಶುಭ ಹಾರೈಸಿದರು. ಇನ್ನು ವಕೀಲರಾದ ಹುಲುಗಪ್ಪ, ಸೋಮಣ್ಣ, ಪರಮೇಶ್ವರಪ್ಪ, ಲೋಕೇಶ್, ವೆಂಕಟರೆಡ್ಡಿ, ಚಂದ್ರಣ್ಣ, ಉರ್ತಳ್ ರಾಮಣ್ಣ, ದಾದೂರಪ್ಪ, ಓಂಕಾರಿ, ನಿಂಗರಾಜ್, ಶಿವರಾಜ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

ವರದಿ: ಸಿದ್ದೇಶ ಜಿ ವೆಂಕಟಪುರ

Leave a Reply

Your email address will not be published. Required fields are marked *

Scan the code