ಚಿಕ್ಕಮಗಳೂರುನ್ಯೂಸ್

ಬಾಬಾ ಬುಡನ್‌ ದರ್ಗಾದ ಶಾಖಾದ್ರಿ ಬಂಧಿಸುವಲ್ಲಿ ಸೈಯದ್‌ ಗೌಸ್‌ ಮೊಹಿನುದ್ದೀನ್‌ ಮನೆಯಲ್ಲಿ ಸಿಕ್ಕ ಚಿರತೆ – ಜಿಂಕೆ ಚರ್ಮ

ಬಾಬಾ ಬುಡನ್‌ ದರ್ಗಾದ ಶಾಖಾದ್ರಿ ಬಂಧಿಸುವಲ್ಲಿ ಸೈಯದ್‌ ಗೌಸ್‌ ಮೊಹಿನುದ್ದೀನ್‌ ಮನೆಯಲ್ಲಿ ಸಿಕ್ಕ ಚಿರತೆ – ಜಿಂಕೆ ಚರ್ಮ

(CHIKKAMAGALURU): ಹುಲಿ ಚರ್ಮದ ಮೇಲೆ ಕೂತ ಫೋಟೋ ವೈರಲ್ ಆಗುತ್ತಿದ್ದಂತೆ ಅರಣ್ಯ ಅಧಿಕಾರಿಗಳಿಗೆ ನಡುಕ ಉಂಟಾಗಿ ಶ್ರೀ ಗುರುದತ್ತಾತ್ರೇಯ ಬಾಬಾ ಬುಡನ್‌ ದರ್ಗಾದ ಶಾಖಾದ್ರಿ ಸೈಯದ್‌ ಗೌಸ್‌ ಮೊಹಿನುದ್ದೀನ್‌ ಅವರ ನಿವಾಸದ ಮೇಲೆ ದಾಳಿ ನಡೆಸಿದ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಅಧಿಕಾರಿಗಳು ಮನೆಯಲ್ಲಿ ಅಡಗಿಸಿ ಇಟ್ಟಿದ್ದ ಚಿರತೆ ಚರ್ಮ ಮತ್ತು ಜಿಂಕೆ ಚರ್ಮವನ್ನು ಜಪ್ತಿ ಮಾಡಿಕೊಂಡಿದ್ದಾರೆ

ಶಾಖಾದ್ರಿ ಮನೆಯಲ್ಲಿ ಹುಲಿ ಚರ್ಮ ಇದೆ. ಅದನ್ನು ವಶಕ್ಕೆ ಪಡೆದು ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ದಾಳಿ ನಡೆಸಿ ಮನೆಯಲ್ಲಿ ಇರಿಸಲಾಗಿದ್ದ ಚಿರತೆ ಹಾಗೂ ಜಿಂಕೆ ಚರ್ಮವನ್ನು ವಶಪಡಿಸಿಕೊಂಡಿದ್ದಾರೆ.

ಶಾಖಾದ್ರಿ ಕುಟುಂಬದ ಹಿರಿಯರು ವನ್ಯಜೀವಿಯೊಂದರ ಚರ್ಮದ ಹಾಸಿನ ಮೇಲೆ ಕುಳಿತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಇವರ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು.

ಬೆಂಗಳೂರಿನಲ್ಲಿ ಇರುವ ಶಾಖಾದ್ರಿ ಅವರನ್ನು ಬಂಧಿಸದೆ ಅವರ ಮನೆ ಮೇಲೆ ದಾಳಿ ನಡೆದಿದ್ದು, ಮನೆ ಬೀಗವನ್ನು ಅರಣ್ಯ ಅಧಿಕಾರಿಗಳು ಬೆಂಗಳೂರಿಂದ ಬಸ್ಸಿನಲ್ಲಿ ತರಿಸಿಕೊಂಡಿದ್ದು ಆನಂತರ ಮನೆ ಮೇಲೆ ದಾಳಿ ನಡೆಸಿದ್ದಾರೆ. ಚಿರತೆ ಮತ್ತು ಜಿಂಕೆಯ ಚರ್ಮ ದೊರಕಿದ್ದು ಶಾಖಾದ್ರಿ ಸೈಯದ್‌ ಗೌಸ್‌ ಮೊಹಿನುದ್ದೀನ್‌ ಇವರನ್ನು ಬಂಧಿಸದೇ ಇರುವುದು ಪರಿಸರವಾದಿಗಳಿಂದ ಆಕ್ರೋಶ ವ್ಯಕ್ತವಾಗಿದೆ.

Leave a Reply

Your email address will not be published. Required fields are marked *

Scan the code