ಒಂದು ಸುಳ್ಳನ್ನು ನೂರು ಸಲ ಹೇಳುವುದೇ ಈಗಿನ ಸರ್ಕಾರದ ಸಾಧನೆ : ಬಿ.ವ್ಯೆ ರಾಘವೇಂದ್ರ.
(SHIVAMOGGA): ಸಾಗರದ ತಾಳಗುಪ್ಪ ಗ್ರಾಮದ ಕದಂಬೇಶ್ವರ ದೇವಸ್ಥಾನದ ಆವರಣದಲ್ಲಿ ಬಿ.ಜೆ.ಪಿ.ಪಕ್ಷದ ಹಾಲಿ ಸಂಸದ ಹಾಗೂ ಸಂಭವ್ಯ ಅಭ್ಯರ್ಥಿ ಬಿ.ವ್ಯೆ ರಾಘವೇಂದ್ರ ಆಗಮಿಸಿ ತಾಳಗುಪ್ಪ ಶಕ್ತಿ ಕೇಂದ್ರದ ಬಿ.ಜೆ.ಪಿ.ಯ ಎಲ್ಲ ಕಾರ್ಯಕರ್ತರನ್ನು ಉದ್ದೇಶಿಸಿ ಮಾತಾನಾಡಿದರು. ಶಿವಮೊಗ್ಗ ಬಿ.ಜೆ.ಪಿ.ಜಿಲ್ಲಾದ್ಯಕ್ಷರಾದ ಮೇಘರಾಜ್ ಮಾತನಾಡಿ ಕೇಂದ್ರ ಸರ್ಕಾರದ ಹಲವು ಕಾರ್ಯಕ್ರಮಗಳನ್ನು ವಿವರಿಸಿದರು.
ಪ್ರತಿ ಗ್ರಾಮ ಪಂಚಾಯತಿಯ ಮಟ್ಟದಲ್ಲಿ ಬಂದು ಪ್ರತಿ ಒಬ್ಬರನ್ನು ಮಾತಾನಾಡಿಸುವ ಎಂ.ಪಿ.ನಮ್ಮ ರಾಘಣ್ಣ ಅವರ ಕನಸು ಇಂದು ಸಕಾರಗೊಂಡಿದೆ ಅವರ ಜನಪರ ಕಾಳಜಿಯಿಂದ ಇಂದು ಶಿವಮೊಗ್ಗ ಜಿಲ್ಲೆ ಅತ್ಯಂತ ಮುಂದುವರೆದ ಜಿಲ್ಲೆಯಾಗಿದೆ ಎಂದರು. ಬಿ.ಜೆ.ಪಿ ಅವರು ನಾವುಗಳು ಸ್ವಲ್ಪ ಮಟ್ಟಿಗೆ ಜವಾಬ್ದಾರಿ ಮರೆತಿದ್ದರ ಪರಿಣಾಮ ಇಂದು ಸುಳ್ಳು ಹೇಳುವ ಸರ್ಕಾರ ಬಂದಿದೆ ಇನ್ನು ಮುಂದಿನ ದಿನದಲ್ಲಿ ಹಾಗೆ ಆಗಲು ಬಿಡಬಾರದು.ದೇಶ ಚೆನ್ನಾಗಿ ಹಾಗೂ ನೆಮ್ಮದಿಯಾಗಿ ಇರಲು ಬಿ.ಜೆ.ಪಿ ಸರ್ಕಾರ ಕಾರಣ ಎಂದರು ದೇಶದ ಉಳಿವಿಗಾಗಿ ಬಿ.ಜೆ.ಪಿ.ಎಂದರು.
ಸಂಸದ ರಾಘವೇಂದ್ರ ಮಾತನಾಡಿ
ಅಭಿವೃದ್ಧಿ ಅಂದರೆ ಬಿ.ಜೆ.ಪಿ.ಆದರೆ ಈಗಿನ ಸರ್ಕಾರ ಬರೀ ಸುಳ್ಳು ಆಶ್ವಾಸನೆ ಹಾಗೂ ಜನರಿಗೆ ಸುಳ್ಳಿನಲ್ಲಿ ಮನೆ ಕಟ್ಟುವ ಕೆಲಸ ಮಾಡ್ತಾ ಇದೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ದ ಗುಡುಗಿದರು.
ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ನೀಡಲು ಸಾರ್ವಜನಿಕರ ದುಡ್ಡು ಬಳಸಿರುವುದು ಎಲ್ಲರಿಗೂ ಗೊತ್ತಾಗಿದೆ .ಮುಂದೆ ಯಾವಾಗಲೂ ಈ ಸರ್ಕಾರ ಬರೊಲ್ಲ ಅಂದರು, ನಮ್ಮ ಸರ್ಕಾರದ ಸಮಯದಲ್ಲಿ ಆದ ಕಾಮಗಾರಿಗಳಿಗೆ ಇಂದಿನ ಶಾಸಕರು ಗುದ್ದಲಿ ಪೂಜೆ ಮಾಡ್ತಾ ಇರುವುದು ಹಾಸ್ಯಾಸ್ಪದವಾಗಿದೆ. ಎಂದು ಸಾಗರ ಕ್ಷೇತ್ರದ ಶಾಸಕರನ್ನು ತರಾಟೆಗೆ ತೆಗೆದುಕೊಂಡರು. ಒಂದು ಸುಳ್ಳನ್ನು ನೂರು ಸಲ ಹೇಳವುದೇ ಈಗಿನ ಸರ್ಕಾರದ ಸಾಧನೆ ಎಂದರು.
ವೇದಿಕೆಯಲ್ಲಿ ಪ್ರಕಾಶ ತಲಕಾಲಕೊಪ್ಪ. ಡಾ..ಜ್ಞಾನೇಶ್ವರ ಲಲಿತಾ ನಾರಾಯಣ, ಶರಾವತಿ ಸಿ ರಾವ್, ಸದಾನಂದ, ಲಕ್ಷೀನಾರಾಯಣ ಬ್ಯಾಕೊಡ್, ಕಲ್ಪನಾ, ನಾಗರತ್ನ, ಶಾಂತಲಾ, ಅನ್ನಪೂರ್ಣ ಹಾಗೂ ಇನ್ನಿತರರು ಪಾಲ್ಗೊಂಡಿದ್ದರು.
ವರದಿ: ರಾಘವೇಂದ್ರ ತಾಳಗುಪ್ಪ