ಒತ್ತುವರಿ ವಿಚಾರ ಶಾಸಕ ರಾಜೇಗೌಡ ರಾಜಿನಾಮೆ ನೀಡಲಿ- ಜಗದೀಶ್ಚಂದ್ರ
(CHIKKAMAGALURU): ಒತ್ತುವರಿ ತೆರವು ವಿಚಾರದಲ್ಲಿ ಸರ್ಕಾರದ ಒತ್ತುವರಿ ತೆರವು ಕಾರ್ಯಾಚರಣೆಯನ್ನು ರಹಸ್ಯವಾಗಿ ಬೆಂಬಲಿಸುತ್ತಿರುವ ಹಾಲಿ ಶಾಸಕರಾದ ಟಿ ಡಿ ರಾಜೇಗೌಡರು ಆ ಸ್ಥಾನದಲ್ಲಿರಲು ಸೂಕ್ತರಲ್ಲ ರೈತವಿರೋದಿ ನೀತಿ ಅನುಸರಿಸುತ್ತಿರುವ ರಾಜೇಗೌಡರು ಒತ್ತುವರಿ ತೆರವು ವಿಚಾರದಲ್ಲಿ ರಾಜಕೀಯ ಲಾಭ ನಷ್ಟಗಳನ್ನು ಲೆಕ್ಕಹಾಕುತ್ತಿರುವುದು ಮಲೆನಾಡ ರೈತರಿಗೆ ಮಾಡಿರುವ ಅನ್ಯಾಯ ಹಾಗಾಗಿ ಶಾಸಕರು ಕೂಡಲೇ ರಾಜಿನಾಮೆ ನೀಡಬೇಕೆಂದು ಬಿಜೆಪಿ ನರಾ ಪುರ ತಾಲ್ಲೂಕು ವಕ್ತಾರ ಜಗದೀಶ್ಚಂದ್ರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಾಲಿ ಸರ್ಕಾರದ ನಿಲುವುಗಳು ಮಲೆನಾಡಿಗೆ ಮಾರಕವಾಗುತ್ತಿವೆ ಜೊತೆಗೆ ಹಾಲಿ ಶಾಸಕರ ಬೆಂಬಲವಿದೆ ಯೆಂಬುದು ಇತ್ತೀಚಿಗೆ ಅವರದೇ ಪಕ್ಷದ ಅರಣ್ಯ ಸಚಿವರು ಸುದ್ದಿಗೋಷ್ಟಿ ನೆಡೆಸಿದಾಗ ಹೇಳಿರುವುದು ಒತ್ತುವರಿ ತೆರವು ವಿಚಾರದಲ್ಲಿ ಶಾಸಕರ ನಿಲುವೇನೆಂಬುದು ಈಗಾಗಲೇ ರೈತರಿಗೆ ಸ್ವಷ್ಟವಾಗಿದ್ದು ನೈತಿಕತೆ ಇದ್ದರೆ ಶಾಸಕರು ರಾಜಿನಾಮೇ ನೀಡಲಿ.
ಅಲ್ಲದೇ ಈಗಾಗಲೇ ಜಿಲ್ಲೆಯ ಮಲೆನಾಡು ಭಾಗದಲ್ಲಿ ಅಳಿವು ಉಳಿವಿನ ಪ್ರಶ್ನೆಯಾಗಿರುವುದರಿಂದ ಸಣ್ಣ ಮದ್ಯಮ ವರ್ಗದ ರೈತರು ರೈತ ಹೋರಾಟಗಳನ್ನು ರೂಪಿಸಿಕೊಂಡು ಜನರನ್ನು ಹಾಗೂ ಸರ್ಕಾರವನ್ನು ಎಚ್ಚರಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಆದರೇ ಶಾಸಕರು ತಮ್ಮ ಹಿಂಬಾಲಕರ ಮೂಲಕ ಬದಲಿ ವೇದಿಕೆಗಳನ್ನು ಸೃಷ್ಟಿಸಿ ಹೋರಾಟದ ಹಾದಿ ತಪ್ಪಿಸುವ ಪ್ರಯತ್ನ ಮಾದುತ್ತಿರುವುದು ಮಲೆನಾಡಿನ ರೈತರಿಗೆ ಮಾಡುತ್ತಿರುವ ದ್ರೋಹ. ಇನ್ನಾದರೂ ಶಾಸಕರು ಎಚ್ಚರಗೊಳ್ಳಲಿ ಕೇವಲ ತೋರ್ಪಡಿಕೆಗೆ ರೈತರನ್ನು ಬೆಂಬಲಿಸಿ ಮೊಸಳೆ ಕಣ್ಣೀರು ಹಾಕುವ ಬದಲು ರೈತರಿಗೆ ಬೆನ್ನೆಲುಬಾಗಿ ನಿಲ್ಲಲಿ, ಕಂಡಕಂಡಲ್ಲಿ ರೈತರಬಗ್ಗೆ ಮತ್ತು ರೈತ ಹೋರಾಟಗಾರರ ಬಗ್ಗೆ ಹಗುರವಾಗಿ ಮಾತನಾಡುವುದನ್ನು ನಿಲ್ಲಿಸಲಿ, ಒಂದು ವೇಳೆ ಅವರು ನಿಲ್ಲಿಸದಿದ್ದಲ್ಲಿ ಜನತೆ ಮುಂದಿನ ಚುನಾವಣೆಯಲ್ಲಿ ತಕ್ಕ ಶಾಸ್ತಿ ಮಾಡುತ್ತಾರೆಂದು ಜಗದೀಶ್ಚಂದ್ರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.