ಯರಗೋಳ ಯೋಜನೆಗೆ ಬಿಜೆಪಿ ಅನುಮೋದನೆಗೆ ಸೀಮಿತ, ಕಾಂಗ್ರೆಸ್ ಅನುಷ್ಠಾನಕ್ಕೆ ಬದ್ಧ. ಶಾಸಕ ಎಸ್.ಎನ್.ನಾರಾಯಣಸ್ವಾಮಿ
(KOLARA): ಬಂಗಾರಪೇಟೆ. ಯರಗೋಳ ಡ್ಯಾಂ ನಿರ್ಮಾಣ ಕಾಂಗ್ರೆಸ್ ಪಕ್ಷದ ಮಹತ್ವಕಾಂಕ್ಷಿ ಯೋಜನೆಯಾಗಿದೆ ಆದರೆ ಕೆಲವು ವಿರೋಧ ಪಕ್ಷದ ರಾಜಕಾರಣಿಗಳು ಮಾಹಿತಿಯ ಕೊರತೆಯಿಂದ ಬಿಜೆಪಿ ಪಕ್ಷದ ಸಾಧನೆ ಎಂದು ಪ್ರತಿಬಿಂಬಿಸಲು ಹೊರಟಿರುವುದು ಖೇದಕರ, ಬಿಜೆಪಿ ಹಾಗೂ ಜೆಡಿಎಸ್ ಆಡಳಿತ ಅವಧಿಯಲ್ಲಿ ಕೇವಲ ಅನುಮೋದನೆ ನೀಡುವುದಕ್ಕೆ ಸೀಮಿತವಾಗಿತ್ತು ತದನಂತರದ ದಿನಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಡ್ಯಾಂನ ಸಂಪೂರ್ಣ ನಿರ್ಮಾಣಕ್ಕಾಗಿ ಹಣ ಬಿಡುಗಡೆ ಮಾಡುವುದರ ಮೂಲಕ ಇಂದು ಲೋಕಾರ್ಪಣೆಗೆ ಸಿದ್ಧವಾಗಿದೆ, ಕಾಂಗ್ರೆಸ್ ಪಕ್ಷ ಸದಾಕಾಲ ಯೋಜನೆಗಳನ್ನು ಅನುಷ್ಠಾನಗೊಳಿಸಲು ಬದ್ಧವಾಗಿದೆ ಎಂದು ಶಾಸಕ ನಾರಾಯಣಸ್ವಾಮಿ ಅಭಿಪ್ರಾಯಪಟ್ಟರು.
ಪಟ್ಟಣದ ಹೊರವಲಯದಲ್ಲಿರುವ ಎಸ್.ಎನ್.ರೆಸಾರ್ಟ್ನಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಯರಗೋಳ್ ಜಲಾಶಯ ಒಟ್ಟು ೨೩೯ ಕೋಟಿ ರೂಗಳ ಯೋಜನೆಯಾಗಿದ್ದು ಬಂಗಾರಪೇಟೆ ತಾಲೂಕು ಯರಗೋಳ ಗ್ರಾಮದ ಬಳಿ ಮಾರ್ಕಂಡಯ್ಯ ನದಿಗೆ ಅಡ್ಡಲಾಗಿ ೫೦೦ಎಂಸಿಎಫ್ಟಿ ಸಾಮರ್ಥ್ಯದ ಅಣೆಕಟ್ಟನ್ನು ನಿರ್ಮಿಸಿ ನೀರನ್ನು ಮೂಲ ನಿವಾಸಿ ಕೋಲಾರ, ಬಂಗಾರಪೇಟೆ ಮತ್ತು ಮಾಲೂರು ಪಟ್ಟಣಗಳಿಗೆ ಒಟ್ಟು ೪೫ ಹಳ್ಳಿಗಳಿಗೆ ಕುಡಿಯುವ ನೀರನ್ನು ಒದಗಿಸುವ ಮೂಲಕ ಜನರ ಸಂಕಷ್ಟಕ್ಕೆ ಸ್ಪಂಧಿಸಿದ ಮಹತ್ವಕಾಂಕ್ಷಿ ಯೋಜನೆ ಇದಾಗಿದೆ.
ಕಾಂಗ್ರೆಸ್ ಕನಸಿನ ಕೂಸು ಯರಗೋಳ್ ಯೋಜನೆ:
ಜೆಡಿಎಸ್ ಮತ್ತು ಬಿಜೆಪಿ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರು ಕೇವಲ ಗುದ್ದಲಿ ಪೂಜೆ ಮಾಡಿ ಯೋಜನೆಯನ್ನು ಸಂಪೂರ್ಣವಾಗಿ ಮರೆತು ಹೋಗಿದ್ದರು. ೨೦೦೭ ರಿಂದ ೨೦೧೩ರ ತನಕ ಯಾವುದೇ ಹಣವನ್ನು ಬಿಡುಗಡೆ ಮಾಡಲಿಲ್ಲ, ಹಾಗೂ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅವೈಜ್ಞಾನಿಕ ನೀರಾವರಿ ಯೋಜನೆ ಎಂದು ಕಾಮಗಾರಿಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲು ನಿರ್ಧರಿಸಲಾಗಿತ್ತು ಆದರೆ ಕಾಂಗ್ರೆಸ್ ತನ್ನ ಅಧಿಕಾರವಧಿಯಲ್ಲಿ ದಿನಾಂಕ ೨೨.೦೮.೨೦೧೭ರಂದು ೧೭೦ಕೋಟಿ ೭೦ಲಕ್ಷ ರೂಗಳಿಗೆ ಅನುಮೋದನೆ ನೀಡಲಾಗಿತ್ತು. ಕಾಂಗ್ರೆಸ್ ಮತ್ತು ಜೆಡಿಎಸ್ ಸಮಿಶ್ರ ಸರ್ಕಾರದ ಅವಧಿಯಲ್ಲಿ ೨೪-೦೮-೨೦೦೮ರಂದು ಸಾಂಕೇತಿಕ ಉದ್ಘಾಟನೆಯನ್ನು ಮಾಡಿದರೂ ಸಹ ಅಂದಾಜು ಪಟ್ಟಿ ಸಿದ್ದಪಡಿಸಿದರೂ ಸಹ ಕಾರ್ಯಗತವಾಗಿಸಲಾಗಲಿಲ್ಲ. ದಿನಾಂಕ ೨೬-೦೯-೨೦೦೮ರಂದು ೩೩೯ಕೋಟಿ ವೆಚ್ಚದಲ್ಲಿ ಕೆಯುಡಬ್ಲುಎಸ್ ವತಿಯಿಂದ ರಿವೇಂಜ್ ಅಂದಾಜು ಪಟ್ಟಿ ತಯಾರಿಸಿ, ೩೦-೧೦-೨೦೧೦ರಲ್ಲಿ ಕಾಮಗಾರಿಗೆ ಚಾಲನೆ ನೀಡಲಾಯಿತು. ಸರ್ಕಾರದ ಒಟ್ಟಾರೆ ೯೫ಎಕರೆ ೧೨ಗುಂಟೆ ಗೋಮಾಳ ಜಮೀನನ್ನು ರೈತರಿಂದ ೧೨೭.೧೦ ಎಕರೆ ಹಾಗೂ ೧೫೩.೬ಎಕರೆ ಅರಣ್ಯ ಜಮೀನನ್ನು ವಶಕ್ಕೆ ಪಡೆದು ಇಂದು ಕಾಮಗಾರಿ ಪೂರ್ಣಗೊಂಡು ಕೋಲಾರ ಜಿಲ್ಲೆಯ ಕುಡಿಯುವ ನೀರಿನ ಮಹತ್ವಕಾಂಕ್ಷಿ ಯೋಜನೆಯದ ಯರಗೋಳ ಜಲಾಶಯವನ್ನು ನವೆಂಬರ್ ೧೧ರಂದು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಉದ್ಘಾಟಿಸಲಿದ್ದಾರೆ ಎಂದರು.
ಮಾಜಿ ಶಾಸಕರಿಗೆ ಅರಿವಿಲ್ಲ:
ಸ್ಥಳೀಯ ಮಾಜಿ ಶಾಸಕರು ಯರಗೋಳ್ ಜಲಾಶಯದ ಬಗ್ಗೆ ಕಿಂಚಿತ್ತು ಮಾಹಿತಿ ಅರಿವಿಲ್ಲದೆ ಬಿಜೆಪಿ ಸರ್ಕಾರದ ಸಾಧನೆ ಎಂದು ಪ್ರತಿಬಿಂಬಿಸಲು ಹೊರಟಿರುವುದು ಅಸಂಮಜಸ. ಎಂ.ಎಲ್ಸಿ ಇಂಚರ ಗೋವಿಂದರಾಜು ಅವರಿಗೆ ಪ್ರಬುಧ್ದ ರಾಜಕಾರಣಿ ಎಂಬ ಗೌರವವಿತ್ತು. ಆದರೆ ಸಮರ್ಪಕ ಮಾಹಿತಿ ಇಲ್ಲದೆ ಅನಗತ್ಯವಾಗಿ ಮಾಧ್ಯಮಗಳಲ್ಲಿ ತಮ್ಮ ಪಕ್ಷದ ಸಾಧನೆಯೆಂದು ಬೊಬ್ಬೆ ಹಾಕುತ್ತಿರುವುದು ಅಜ್ಞಾನದ ಪರಾಕಷ್ಠೆಗೆ ಸಾಕ್ಷಿಯಾಗಿದೆ ಎಂದು ಗುಡುಗಿದರು.
ರೂವಾರಿಗೆ ಸನ್ಮಾನ:
ತಮಿಳುನಾಡಿಗೆ ವ್ಯರ್ಥವಾಗಿ ಹೋಗುತ್ತಿದ್ದ ನೀರನ್ನು ಕಂಡು ಇಲ್ಲಿ ಜಲಾಶಯ ನಿರ್ಮಿಸಿದರೆ ಮೂರು ತಾಲ್ಲೂಕುಗಳಿಗೆ ನೀರನ್ನು ಒದಗಿಸಲು ಸಾಧ್ಯವಾಗುತ್ತದೆಂದು ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟ ಸ್ಥಳೀಯ ಸರ್ಕಾರಿ ಶಿಕ್ಷಕ ಚಂದ್ರಪ್ಪ ಹಾಗೂ ಆಗಿನ ಜಿಲ್ಲಾ ಉಸ್ತುವಾರಿ ಸಚಿವ ಶ್ರೀನಿವಾಸಗೌಡರನ್ನು ಸಕಲ ಗೌರವಗಳೊಂದಿಗೆ ಸನ್ಮಾನಿಸಲಾಗುವುದೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ನ ನಿರ್ದೇಶಕ ಪಿಚ್ಚಹಳ್ಳಿ ಗೋವಿಂದರಾಜು, ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಾರ್ಥಸಾರಥಿ, ಚಂದು, ಷಂಶುದ್ದೀನ್ಬಾಬು, ಸುಹೇಲ್, ಗೋಪಾಲರೆಡ್ಡಿ, ರಘುನಾಥ್, ಅ.ನಾ.ಹರೀಶ್, ನಂಜಪ್ಪ ಇತರರು ಉಪಸ್ಥಿತರಿದ್ದರು.
ವರದಿ ವಿಷ್ಣು ಕೋಲಾರ