ಭಗವಾನ್ ಆದಿನಾಥ ದಿಗಂಬರ ಜೈನ ಮಂದಿರದಲ್ಲಿ ಭಗವಾನ್ ಮಹಾವೀರ ಜಯಂತಿ.
(SHIVAMOGA): ಸಾಗರದ ನೆಹರೂ ಮೈದಾನದಲ್ಲಿರುವ ಭಗವಾನ್ ಆದಿನಾಥ ದಿಗಂಬರ ಜೈನ ಮಂದಿರದಲ್ಲಿ ಭಗವಾನ್ ಮಹಾವೀರ ಜಯಂತಿಯನ್ನು ಸಂಭ್ರಮದಿಂದ ಆಚರಿಸಲಾಯಿತು ಈ ಸಂದರ್ಭದಲ್ಲಿ ಸಾಹಿತಿ ವಿ.ಟಿ.ಸ್ವಾಮಿ ಮಾತನಾಡಿ ಇಂದು ಜಗತ್ತು ಶಾಂತಿಯುತವಾಗಬೇಕಾದರೆ ಮಹಾವೀರರ ಬದುಕು ಬದುಕಲು ಬಿಡು ಎನ್ನುವ ಸಂದೇಶವನ್ನು ಪ್ರತಿಯೊಬ್ಬರು ಪಾಲಿಸಬೇಕು, ಜೈನ ಧರ್ಮ ಸಕಲ ಜೀವಾತ್ಮರಿಗೆ ಒಳ್ಳೆಯದನ್ನು ಬಯಸಿದ ಜಗತ್ತಿನ ಶ್ರೇಷ್ಠ ಧರ್ಮವಾಗಿದೆ, ಇಂದು ಅಹಿಂಸೆಯ ಬದುಕನ್ನು ಅಳವಡಿಸಿಕಳ್ಳುವ ಮೂಲಕ ನೆಮ್ಮದಿಯ ಜೀವನವನ್ನು ಸಾಗಿಸಬೇಕಾಗಿದೆ, ಮಹಾವೀರರು ಸಾರಿದ ಸರಳ ಸಂದೇಶಗಳನ್ನು ಪ್ರತಿಯೊಬ್ಬರು ಪಾಲಿಸುವ ಮೂಲಕ ಪ್ರೀತಿಯಿಂದ ಬದುಕಬೇಕು ಎಂದರು.
ಸಾಗರದ ಪ್ರಮುಖ ಬೀದಿಗಳಲ್ಲಿ ಶ್ವೇತಂಬರ ಜೈನ ಮಂದಿರದವರೆಗೆ ಮಹಾವೀರರ ಭಾವಚಿತ್ರದೊಂದಿಗೆ ಮೆರವಣಿಗೆಯನ್ನು ನಡೆಸಲಾಯಿತು, ನಂತರ ಪೂಜೆ ಅಭಿಷೇಕ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು ಈ ಸಂದರ್ಭದಲ್ಲಿ ಪ್ರಮುಖರಾದ ಹೊಯ್ಸಳ ಜೈನ್, ರಾಜಕುಮಾರ್ ಜೈನ್, ಪದ್ಮರಾಜ ಜೈನ್, ಗಜೇಂದ್ರ ಜೈನ್, ಜಿನದತ್ತ,ಭರತ್ ರಾಜ್ , ನೇಮಯ್ಯ, ಅಭಿಜ್ಞ ಜೈನ್, ಮಹೇಂದ್ರ, ಚಗನ್ನಲಾಲ್, ಕಾಂತಿಲಾಲ್, ಸುರೇಶ್ ಕುಮಾರ್, ಅಮಿತ್ ಬನ್ಸಾಲಿ, ಪದ್ಮಶ್ರೀ ಮಹಿಳಾ ಸಮಾಜದ ಚಂದ್ರಕಲ ರಾಜಕುಮಾರ್, ರತಿ ಹೊಯ್ಸಳ, ಶೃತಿ ನೇಮಯ್ಯ ಮೊದಲಾದವರು ಉಪಸ್ಥಿತರಿದ್ದರು.
ಅಶೋಕ ಇಂಧ್ರ ಹಾಗೂ ಅಕ್ಷರ ಇಂದ್ರ ಪೂಜಾ ಕಾರ್ಯಗಳನ್ನು ನೆರವೇರಿಸಿದರು. ಮೆರವಣಿಗೆ ಸಂದರ್ಭದಲ್ಲಿ ಲಾಡು ಹಂಚಲಾಯಿತು.
ವರದಿ: ರಾಘವೇಂದ್ರ ತಾಳಗುಪ್ಪ