ಸಾಹಿತ್ಯ ಎಂದೂ ಸಂಗೀತದಲ್ಲಿ ಮುಳುಗಿ ಹೋಗಬಾರದು. ಅದು ಸಂಗೀತದ ಮೇಲೆ ತೇಲುವಂತಿರಬೇಕು
(SHIVAMOGA): ಸಾಗರ ಪಟ್ಟಣದ ಶ್ರೀನಗರದ ನೃತ್ಯಭಾಸ್ಕರ ಸಭಾಭವನದಲ್ಲಿ ಭಾನುವಾರ ಶ್ರೀ ರಾಜರಾಜೇಶ್ವರಿ ಕೃಪಾಪೋಷಿತ ವಂಶವಾಹಿನಿ ಯಕ್ಷಮೇಳ ಗುಂಡೂಮನೆಯವರಿಂದ ಸಂಯೋಜಿಸಲ್ಪಟ್ಟ ಪಾಕ್ಷಿಕ ತಾಳಮದ್ದಲೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಯಕ್ಷಗಾನವಿರಲಿ ಅಥವಾ ಬೇರೆ ಯಾವುದೇ ತರಹದ ಸಂಗೀತವಿರಲಿ, ಸಾಹಿತ್ಯದ ಸ್ಪಷ್ಟತೆ ಅತ್ಯಂತ ಮುಖ್ಯ. ಸಂಗೀತದ ಮೂಲಕ ಸಾಹಿತ್ಯ, ಸಹೃದಯನಿಗೆ ತಲುಪಿದಾಗ ಮಾತ್ರ ಹಾಡುಗಾರ ಧನ್ಯತೆ ಪಡೆಯಲು ಸಾಧ್ಯ. ವಂಶವಾಹಿನಿಯಲ್ಲಿ ಸಾಹಿತ್ಯ ಪ್ರಜ್ಞೆಯೊಂದಿಗೆ ಗಾನ ನಡೆಯುತ್ತಿರುವುದು ಸಂತೋಷದ ಸಂಗತಿ. ಮಹಾ ಕಾವ್ಯವಿರಲಿ, ಪುರಾಣವಿರಲಿ ಅಲ್ಲಿ ಕೆಲವೇ ಕೆಲ ಪಾತ್ರಗಳು ಮಾತ್ರ ವಿಜೃಂಭಿಸುತ್ತದೆ. ಆದರೆ ಅದರೊಳಗಿನ ಅನೇಕ ಪಾತ್ರಗಳ ಮಹತ್ವವನ್ನು ತಿಳಿಸುವ ಇಲ್ಲಿಯ ಪ್ರಸಂಗಕರ್ತರ ನಡೆ ಕೂಡ ಒಳ್ಳೆಯ ಕೊಡುಗೆ ಎಂದರು.
ನಿವೃತ್ತ ಕೆಪಿಸಿಯ ಕೃಷ್ಣಮೂರ್ತಿ ಬಣ್ಣೂಮನೆ, ಗಂಗಾಧರ, ಮಹಿಳಾ ಕಲಾವಿದರಾದ ಸಾಧ್ವಿ, ಶಾರದ ಮತ್ತಿತರರು ಇದ್ದರು. ನಂತರ ರಮೇಶ್ ಹೆಗಡೆ ಗುಂಡೂಮನೆ ರಚಿಸಿ-ನಿರ್ದೇಶಿಸಿರುವ ವಿನಾಯಕ ಮಹಿಮೆ ತಾಳಮದ್ದಲೆ ನಡೆಯಿತು. ಹಿಮ್ಮೇಳದಲ್ಲಿ ಸೂರ್ಯನಾರಾಯಣ ಹೆಗಡೆ, ಸೃಜನ್ ಗಣೇಶ್ ಹೆಗಡೆಯವರ ಹಾಡುಗಾರಿಕೆಗೆ ಶರತ್ ಜಾನಕೈ ಮದ್ದಲೆ ಸಾಥ್ ನೀಡಿದರು. ಈಶ್ವರನಾಗಿ ಅರುಣ ಬೆಂಕಟವಳ್ಳಿ, ಮೈದುಲಾಸುರನಾಗಿ ರವಿಶಂಕರ್ ಭಟ್, ಗಿರಿಜೆಯಾಗಿ ಅಶೋಕಕುಮಾರ್ ಹೆಗಡೆ, ಗಣಪತಿ ಪಾತ್ರದಲ್ಲಿ ರಮೇಶ್ ಹೆಗಡೆ ಗುಂಡೂಮನೆ ಮತ್ತು ಷಣ್ಮುಖನಾಗಿ ಪ್ರತೀಕ ಬೆಂಕಟವಳ್ಳಿ ನಿರ್ವಹಿಸಿದರು. ವಿದ್ವಾನ್ ಜನಾರ್ದನ ಧ್ವನಿ-ಬೆಳಕು ಸಹಕಾರ ಕಲ್ಪಿಸಿದ್ದರು.
ವರದಿ: ರಾಘವೇಂದ್ರ ತಾಳಗುಪ್ಪ