ಕೋಲಾರನ್ಯೂಸ್

ಮಕ್ಕಳ ಸರ್ವತೋಮುಖ ಕಲಿಕೆಗಾಗಿ ಮೆಟ್ರಿಕ್ ಮೇಳಗಳು ಅವಶ್ಯಕ : ಡಾ.ಇಂಚರ ನಾರಾಯಣಸ್ವಾಮಿ

ಮಕ್ಕಳ ಸರ್ವತೋಮುಖ ಕಲಿಕೆಗಾಗಿ ಮೆಟ್ರಿಕ್ ಮೇಳಗಳು ಅವಶ್ಯಕ : ಡಾ.ಇಂಚರ ನಾರಾಯಣಸ್ವಾಮಿ

(KOLARA): ಕೋಲಾರ : ತಾಲೂಕಿನ  ಬೆಳಮಾರನಹಳ್ಳಿ ಪಂಚಾಯತ್ ವ್ಯಾಪ್ತಿಯ  ಚಾಕರಸನಹಳ್ಳಿ ಗ್ರಾಮದ  ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ  ಸ್ವಾಮಿ ವಿವೇಕಾನಂದ ಮೂಮೆಂಟ್ ಮತ್ತು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಸಂಯುಕ್ತ ಆಶ್ರಯದಲ್ಲಿ ಮೆಟ್ರಿಕ್ ಮೇಳವನ್ನು ಹಮ್ಮಿಕೊಳ್ಳಲಾಗಿತ್ತು, 

ಎಸ್ ಡಿ ಎಂ ಸಿ ಅಧ್ಯಕ್ಷರಾದ ಅಂಜನಪ್ಪ ಕಾರ್ಯಕ್ರಮವನ್ನು ಉದ್ಘಾಟಿಸಿ ಮಕ್ಕಳಿಗೆ ಶುಭ ಕೋರಿದರು ಗ್ರಾಮದ ಮುಖಂಡರಾದ ನವೀನ್ ರವರು ಮಾತನಾಡಿ ಕಲಿಕೆಗೆ ಪೂರಕವಾದಂತ ಚಟುವಟಿಕೆಗಳು ನಮ್ಮ ಗ್ರಾಮದ ಶಾಲೆಯಲ್ಲಿ ನಡೆಯುತ್ತಿರುವುದು ವಿಶೇಷವಾಗಿದ್ದು ನಮ್ಮ ಗ್ರಾಮದ ಮಕ್ಕಳು ಯಾವುದೇ ರೀತಿಯ ಕಷ್ಟಗಳನ್ನು ಎದುರಿಸಲು ಸಹಾಯವಾಗುತ್ತದೆ ಎಂದು ಭಾವಿಸಿದರು,

ಕಾರ್ಯಕ್ರಮದಲ್ಲಿ  ಬೆಳಮರನಹಳ್ಳಿ ಕ್ಲಸ್ಟರನ ಸಂಪನ್ಮೂಲ ವ್ಯಕ್ತಿಗಳಾದ ಯು ಗೋವಿಂದ್ ರವರು ಮಳಿಗೆಗಳನ್ನು ಉದ್ಘಾಟಿಸಿ ಗ್ರಾಮಾಂತರ ಪ್ರದೇಶಗಳಲ್ಲಿ ಮಕ್ಕಳ ಕೌಶಲ್ಯಗಳನ್ನು ಹೆಚ್ಚಿಸಲು ಮತ್ತು ಕಲಿಕೆಯಲ್ಲಿ ತೊಡಗಿಸಿಕೊಳ್ಳಲು ಪ್ರಾಯೋಗಿಕವಾದಂತ ಚಟುವಟಿಕೆಗಳು ಸದಾ ಹಮ್ಮಿಕೊಳ್ಳಬೇಕು ಮಕ್ಕಳ ಕೌಶಲ್ಯ ಅಭಿವೃದ್ಧಿಗೊಳ್ಳುತ್ತದೆ ಮತ್ತು ವ್ಯವಹಾರಿಕ ಜ್ಞಾನವನ್ನು ಹೆಚ್ಚಾಗಿ ಪಡೆದುಕೊಳ್ಳುವವರು ಎಂದು ತಿಳಿಸಿದರು,ಇದೆ ಸಂದರ್ಭದಲ್ಲಿ ಶಾಲಾ ಮಕ್ಕಳು ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುತ್ತಾ ನಮ್ಮ ಶಾಲೆಯಲ್ಲಿ ಪ್ರಪ್ರಥಮವಾಗಿ ಇಂತಹ ಚಟುವಟಿಕೆ ಮಾಡುತ್ತಿರುವುದು ನಮಗೆ ಬಹಳ ಖುಷಿ ತಂದಿದೆ ಮತ್ತು ನಮಗೆ ಕಲಿಕೆಯಲ್ಲಿ ಕಲಿಯಲು ಸಾಧ್ಯವಾಗುತ್ತದೆ ಲೆಕ್ಕಾಚಾರ ಮಾಡುವುದು ಅಳತೆಗಳಲ್ಲಿ ಮೋಸ ಹೋಗುವುದು ಇವೆಲ್ಲವನ್ನೂ ನಾವು ತಿಳಿದುಕೊಳ್ಳಲು ಸಹಾಯವಾಯಿತು ಎಂದು ಅಭಿಪ್ರಾಯಪಟ್ಟರು,

ಸ್ವಾಮಿ ವಿವೇಕಾನಂದ ಯೂಥ್ ಮುಮೆಂಟ್ನ ವತಿಯಿಂದ ಆಗಮಿಸಿದ ಮಾನಸ ರವರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡು ಎಲ್ಲಾ ಶಾಲೆಗಳಲ್ಲಿ ನಮಗೆ ಈ ರೀತಿಯಾದ ಪ್ರೋತ್ಸಾಹ ದೊರೆತರೆ ಹೆಚ್ಚು ಹೆಚ್ಚು ರೀತಿಯಾದಂತಹ ಚಟುವಟಿಕೆಗಳನ್ನು ಹಮ್ಮಿಕೊಂಡು ಮಕ್ಕಳ ಕಲಿಕೆಯಲ್ಲಿ ಸದೃಢವಾಗಿ ಬೆಳೆಸಲು ನಾವು ಅವಕಾಶ ಮಾಡಿಕೊಡುಬಹುದೆಂದು ಅಭಿಪ್ರಾಯ ಪಟ್ಟರು,

ಶಾಲಾ ಶಿಕ್ಷಕರಾದ ಶ್ರೀಮತಿ ಹೇಮಲತಾ ರವರು ಮಾತನಾಡಿ ಪ್ರತಿ ಹಂತದಲ್ಲೂ ಗಣಿತ ಮತ್ತು ವಿಜ್ಞಾನ ಇವತ್ತು ಮಕ್ಕಳಿಗೆ ಸವಾಲ್ ಆಗಿದ್ದು ಆ ಸವಾಲನ್ನು ಎದುರಿಸಲು ಇಂತಹ ಕಾರ್ಯಗಾರಗಳು ಪ್ರತಿ ಶಾಲೆಯಲ್ಲಿ ನಡೆಯಬೇಕೆಂದರು  ಮತ್ತೋರು ಶಿಕ್ಷಕರಾದ ರಮೇಶ್ ಅವರು ಮಾತನಾಡಿ ಗಣಿತ ಅರಿತುಕೊಂಡರೆ ಕಬ್ಬಿಣದ ಕಡಲೆ ಅಲ್ಲ ಬಾಳ ಸುಲಭವಾಗಿ ಲೆಕ್ಕಗಳನ್ನು ನಾವು ಕಲಿಯಬಹುದು ಮಕ್ಕಳು ಶಾಲೆಯಲ್ಲಿ ಕಲಿಸಿಕೊಟ್ಟ ಲೆಕ್ಕಗಳನ್ನು ದಿನನಿತ್ಯದ ವ್ಯವಹಾರಿಕ ಜ್ಞಾನದಲ್ಲಿ ಬಳಸಿಕೊಳ್ಳಬೇಕೆಂದರು,

ಜಿಪಿಟಿ ಶಿಕ್ಷಕರಾದ ಆಶಾ ನಾಯ್ಕ ರವರು ಮಾತನಾಡುತ್ತಾ ನಮ್ಮ ಬಾಲ್ಯದ ದಿನಗಳಲ್ಲಿ ಈ ತರಹದ ಚಟುವಟಿಕೆಗಳು ನಮಗೆ ದೊರೆತಿರಲಿಲ್ಲ ಆದರೆ ಮೊಟ್ಟ ಮೊದಲ ಬಾರಿಗೆ ನಮ್ಮ ಶಾಲೆಯಲ್ಲಿ ಇಂಥಹ ಚಟುವಟಿಕೆಗಳು ನಡೆಯುತ್ತಿರುವುದು ಹಂತ ಹಂತವಾಗಿ ಮಕ್ಕಳ ಬೆಳವಣಿಗೆಗೆ ಸಹಕಾರಿಯಾಗುವುದು ಎಂದು ತಿಳಿಸಿ ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಕರೆಕೊಟ್ಟರು

ಸ್ವಾಮಿ ವಿವೇಕಾನಂದ ಯೂತ್ ಮುಮೆಂಟ್ ನ ಮುಖ್ಯಸ್ಥರಾದ ನಾಗರಾಜ ರವರು ಮಾತನಾಡಿ ನಾವು ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ಶಾಲೆಗಳಲ್ಲೂ ಈ ರೀತಿಯಾದ ಪ್ರೋತ್ಸಾಹ ನಮಗೆ ಬೇಕಾಗುತ್ತದೆ ಹಾಗೂ ಕಳ ಕಲಿಕೆಯಲ್ಲಿ ವಿಭಿನ್ನವಾದ ಚಟುವಟಿಕೆಗಳಲ್ಲಿ ತೊಡಗಿಸಲು ಇಂತಹ ಮೇಳಗಳು ಬಹಳ ಯಾಗುತ್ತವೆ ಎಂದು ತಿಳಿಸಿದರು,

ಕಾರ್ಯಕ್ರಮ ಅಧ್ಯಕ್ಷತೆಯನ್ನು ವಹಿಸಿದ್ದ ಶಿಕ್ಷಕರಾದ ಡಾ. ಇಂಚರ ನಾರಾಯಣಸ್ವಾಮಿ ಅವರು ಮಾತನಾಡಿ ಮಕ್ಕಳ ಸರ್ವತೋಮುಖ ಅಭಿವೃದ್ಧಿಗಾಗಿ ಮತ್ತು ಸರ್ವತೋಮುಖ ಕಲಿಕೆಗಾಗಿ ಚಿಂತನ ಶೀಲಾ ವಾಗಿ ತೊಡಗಿಸಿದಾಗ ಮಾತ್ರ ನಾವು ಪ್ರಗತಿಯನ್ನು ಕಾಣಬಹುದು ಹಾಗೆಯೇ ಶಿಕ್ಷಣ ಕೇವಲ ಉದ್ಯೋಗಕ್ಕಾಗಿ ಮಾತ್ರವಲ್ಲದೆ ತಮ್ಮ ಸ್ವಂತ ಬಿಜಿನೆಸ್ ಮೂಲಕ ಬೆಳವಣಿಗೆ ಆಗಲು ಇಂತಹ ಮೆಟ್ರಿಕ್ ಮೇಳಗಳು ಮಕ್ಕಳಿಗೆ ಸಹಾಯಮಾಡುತ್ತವೆ ಏಕೆಂದರೆ ಸಣ್ಣ ವಯಸ್ಸಿನಲ್ಲಿ ಇಂತಹ ಮೆಟ್ರಿಕ್ ಮೇಳಗಳಲ್ಲಿ ಪಾಲ್ಗೊಂಡು ವ್ಯವಹಾರ ಜ್ಞಾನವನ್ನು ಬೆಳೆಸಿಕೊಂಡರೆ ಮುಂಬರುವ ದಿನಗಳಲ್ಲಿ ತಾನೊಬ್ಬ  ಉದ್ಯಮಶೀಲರಾಗಿ ಬೆಳವಣಿಗೆಯಾಗಲು ತಮ್ಮ ಆಲೋಚನೆಗಳನ್ನು ಬದಲಾಯಿಸಿಕೊಳ್ಳಬಹುದು ಏಕೆಂದರೆ ಬೆಳೆಯುವ ಮೊಳಕೆ ಪೈರಿನಲ್ಲೇ ಎಂಬಂತೆ ಈಗ ನಾವು ಪ್ರಾಯೋಗಿಕವಾಗಿ ಹಂತಹ ಹಂತವಾಗಿ ಮಕ್ಕಳನ್ನು ವ್ಯವಹಾರ ಜ್ಞಾನಗಳಲ್ಲಿ  ತೊಡಗಿಸಿಕೊಳ್ಳುವಂತೆ ಮಾಡಿದರೆ ಮುಂದೆ ಅವರೇ ನಾಲ್ಕು ಜನಕ್ಕೆ ಉದ್ಯೋಗ ಕೊಡುವವರಂತಾಗುತ್ತಾರೆ ಆದ್ದರಿಂದ ಮೆಟ್ರಿಕ್ ಮೇಳಗಳು ಆಗಿಂದಾಗೆ ಪ್ರತಿ ಶಾಲೆಗಳಲ್ಲೂ ನಡೆದರೆ ಉತ್ತಮ ಎಂದು ತಿಳಿಸಿಕೊಟ್ಟರು ಮತ್ತು ಈ ಮೆಟ್ರಿಕ್ ಮೇಳದ ಸದುಪಯೋಗವನ್ನು ಪಡಿಸಿಕೊಂಡ ತಮಗೆಲ್ಲರಿಗೂ ಅಭಿನಂದನೆಗಳು ಎಂದು ತಿಳಿಸಿದರು,

ಕಾರ್ಯಕ್ರಮದಲ್ಲಿ ಗ್ರಾಮದ ಮುನಿಯಪ್ಪ, ಅಂಗನವಾಡಿ ವರಲಕ್ಷ್ಮಮ್ಮ, ಶಾಲಾ ಮುನಿರತ್ನಮ್ಮ, ಶೈಲಾ ಕೆ, ಹಾಗೂ ಅಂಗನವಾಡಿ ಸಹಾಯಕಿ ಅಮರಾವತಿ, ಆನಂದ, ಯೂತ್ ಮುಮೆಂಟ್ನ ಸಿಬ್ಬಂದಿ ವರ್ಗ ಹಾಗೂ ಪೋಷಕರು ಭಾಗವಹಿಸಿದ್ದರು.

ವರದಿ: ವಿಷ್ಣು ಕೋಲಾರ

Leave a Reply

Your email address will not be published. Required fields are marked *

Scan the code