ಕ್ರೈಂ ನ್ಯೂಸ್ಚಿಕ್ಕಮಗಳೂರುಜಿಲ್ಲೆ

ಕರ್ತವ್ಯದಲ್ಲಿದ್ದ ಮೆಸ್ಕಾಂ ಸಿಬ್ಬಂದಿ ವಿದ್ಯುತ್ ತಗುಲಿ ಸಾವು

ಕರ್ತವ್ಯದಲ್ಲಿದ್ದ ಮೆಸ್ಕಾಂ ಸಿಬ್ಬಂದಿ ವಿದ್ಯುತ್ ತಗುಲಿ ಸಾವು

(CHIKKAMAGALURU): ಚಿಕ್ಕಮಗಳೂರು ಜಿಲ್ಲೆ ನರಸಿಂಹರಾಜಪುರ ತಾಲೂಕು ಬಾಳೆಹೊನ್ನೂರು ಮೆಸ್ಕಾಂ ಲೈನ್ ಮ್ಯಾನ್ ಸಿಬ್ಬಂದಿ ವಿದ್ಯುತ್ ತಗುಲಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. 

ಸೀಗೋಡು ಕೆಫೆ ಸಮೀಪ ಎಸ್ಟೇಟ್ ಒಂದರಲ್ಲಿ ವಿದ್ಯುತ್ ಸಂಪರ್ಕ ಕಡಿತ ಗೊಂಡಿದ್ದು ವಿದ್ಯುತ್ ಸರಿಪಡಿಸಿಕೊಡಲೆಂದು ಹೋದ ಮಹದೇವ್ (29) ಮರಣ ಹೊಂದಿದ್ದಾರೆ. ಮೃತ ಮಹದೇವ್ ವಿವಾಹವಾಗಿ ಒಂದುವರೆ ವರ್ಷವಾಗಿತ್ತು.

ಸದಾ ಲವಲವಿಕೆಯಿಂದ ಇದ್ದ ಮಹದೇವ್ ಬಾಳೆಹೊನ್ನೂರಿನಲ್ಲಿ ಹೆಸರುವಾಸಿಯಾಗಿದ್ದರು. ಇಂದು ಅನಿರೀಕ್ಷಿತ ವಿದ್ಯುತ್ ತಗುಲಿ ಮರಣ ಹೊಂದಿದ್ದಾರೆ.

Leave a Reply

Your email address will not be published. Required fields are marked *

Scan the code