ಜಿಲ್ಲೆನ್ಯೂಸ್

ಅಯೋಧ್ಯ ರಾಮ ಜನ್ಮಭೂಮಿಯಲ್ಲಿ ರಾಮನ ಪ್ರಾಣ ಪ್ರತಿಷ್ಠಾಪನ ಹಿನ್ನೆಲೆ ಶಾಸಕ ಎಸ್ ಎನ್ ನಾರಾಯಣಸ್ವಾಮಿ ವಿಶೇಷ ಪೂಜೆ ಸಲ್ಲಿಕೆ.

ಅಯೋಧ್ಯ ರಾಮ ಜನ್ಮಭೂಮಿಯಲ್ಲಿ ರಾಮನ ಪ್ರಾಣ ಪ್ರತಿಷ್ಠಾಪನ ಹಿನ್ನೆಲೆ ಶಾಸಕ ಎಸ್ ಎನ್ ನಾರಾಯಣಸ್ವಾಮಿ ವಿಶೇಷ ಪೂಜೆ ಸಲ್ಲಿಕೆ.

(KOLARA): ಬಂಗಾರಪೇಟೆ :ಅಯೋದ್ಯ ರಾಮಜನ್ಮ ಭೂಮಿಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನ ದಂದು ಮುಜರಾಯಿ ಇಲಾಖೆ ಎಲ್ಲಾ ದೇವಾಲಯದಲ್ಲಿ ವಿಶೇಷ ಪೂಜೆ ಮಾಡಬೇಕು ಎಂದು ಸಿದ್ದರಾಮಯ್ಯ ಸರ್ಕಾರ ಆದೇಶದನ್ವಯ ರಾಮನ ದೇವಾಲಯದಲ್ಲಿ ವಿಶೇಷ ಪೂಜೆಗೆ ನಾನು ಭಾಗವಹಿಸಿದೆ ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹೇಳಿದರು

ಅಯೋದ್ಯ ರಾಮ ಜನ್ಮ ಭೂಮಿಯಲ್ಲಿ ಶ್ರೀ ರಾಮನ ಪ್ರಾಣ ಪ್ರತಿಷ್ಠಾಪನ ಮಾಡುವ ವಿಶೇಷವಾದ ಇಂದು ಶಾಸಕರು ಕೋದಂಡ ರಾಮ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆಯಲ್ಲಿ ಭಾಗವಹಿಸಿ ಸಮಸ್ತ ತಾಲ್ಲೂಕಿನ ಜನತೆಗೆ ಶ್ರೀರಾಮ ಉತ್ತಮ ಮಳೆ ಬೆಳೆ ಹಾಗೂ ಆರೋಗ್ಯ ಸುಖ ಶಾಂತಿ ನೆಮ್ಮದಿ ಕರುಣಿಸಲಿಂದು ಪ್ರಾರ್ಥನೆ ಸಲ್ಲಿಸಿ, ರಾಮನ ಕೃಪೆಗೆ ಪಾತ್ರರಾದರು.



ನಂತರ ಕಾಂಗ್ರೆಸ್ ಕಛೇರಿಯಲ್ಲಿ ಮಾತನಾಡಿ ಇಂದು ಅಯೋಧ್ಯ ರಾಮನ ಜನ್ಮ ಭೂಮಿಯಲ್ಲಿ ರಾಮನ ಪ್ರಾಣ ಪ್ರತಿಷ್ಠಾಪನ ಕಾರ್ಯಕ್ರಮಹೊರತು, ಬಜೆಪಿ ಪಕ್ಷದ ಕಾರ್ಯಕ್ರವಲ್ಲ ಎಂದರು.

ಈ ದೇಶದ ಪ್ರತಿಯೋಬ್ಬರಿಗೂ ಶ್ರೀ ರಾಮ ದೇವರಾಗಿದ್ದಾರೆ.ನಮಗೆ ರಾಮನನ್ನು ಆರಾಧಿಸುವುದು ಗೊತ್ತು,ರಾಮನವಮಿ,ರಾಮಕೋಟಿ ಮತ್ತು ರಾಮಭಜನೆ ಮಾಡೋದು ನಮಗೆ ಗೋತ್ತು, ನಾವು ಇದನ್ನು ಬಿಜೆಪಿ ಪಕ್ಷದವರಿಂದ ಕಲಿಯಬೇಕಾಗಿಲ್ಲ ರಾಮನನ್ನು ಒಂದು ಪಕ್ಷದ ಸ್ವತ್ತಾಗಿ ಬಿಂಬಿಸುತ್ತಿದ್ದಾರೆ. ಆದರ್ಶ ಪುರುಷ ಶ್ರೀ ರಾಮಚಂದ್ರ ಎಲ್ಲರ ದೇವರು ಎಂದು ಹೇಳಿದರು.

ಆದರೆ ರಾಜಕೀಯ ಪಕ್ಷ ಇದೊಂದು ಪಕ್ಷದ ಕಾರ್ಯಕ್ರಮ ರೀತಿ ಬಿಂಬಿಸುತ್ತಿದೆ. ಅನೇಕರು ಶ್ರೀ ರಾಮನ ಹೆಸರಿನಲ್ಲಿ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಅದರ ಬಗ್ಗೆ ಯಾರು ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ , ದೇಶದ ಪ್ರತಿಯೊಬ್ಬರಿಗೂ ಸಹ ಪ್ರೀತಿಯ ಪಾತ್ರರಾಗಿರುವ ದೇವರು ಎಂದರೆ ಅದು ರಾಮನು ಆ ದೇವರಿಗೆ ಪೂಜೆ ಮಾಡುವುದು ನಮಗೆಲ್ಲರಿಗೂ ಗೊತ್ತು ಎಂದು ಹೇಳಿದರು.



ಕೋದಂಡರಾಮಸ್ವಾಮಿಯ ಅಭಿವೃದ್ಧಿ ಕಾರ್ಯಗಳಿಗೆ ತಂದ ಹಣವನ್ನು ಇದೇ ಬಿಜೆಪಿ ಸರ್ಕಾರ ಯಡಿಯೂರಪ್ಪ ಅಧಿಕಾರದಲ್ಲಿದ್ದಾಗ ಹಣವನ್ನು ವಾಪಸ್ ತೆಗೆದುಕೊಂಡು ಅವರು ಈ ಬಿಜೆಪಿ ಪಕ್ಷದವರು. ಇಂದು ನಮ್ಮ ಕಾಂಗ್ರೆಸ್ ಸರ್ಕಾರ ಕೋದಂಡರಾಮಸ್ವಾಮಿಯ ದೇವಾಲಯದ ಅಭಿವೃದ್ಧಿಗಾಗಿ 15 ಕೋಟಿ ಹಣ ಬಿಡುಗಡೆ ಮಾಡಿದ್ದಾರೆ.ಬಿಜೆಪಿ ಸರ್ಕಾರ ಯಾವುದೇ ನಯಾ ಪೈಸಾ ಬಿಡುಗಡೆ ಮಾಡಿಲ್ಲ ಎಂದು ಆರೋಪ ಮಾಡಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಮೇಸ್ತ್ರಿ ಶ್ರೀನಿವಾಸ್, ಪಿಚ್ಚ ಹಳ್ಳಿ ಗೋವಿಂದರಾಜು, ಗೋಪಾಲರೆಡ್ಡಿ, ರಾಮಯ್ಯ, ಮಹದೇವಪ್ಪ, ಚಂದು, ಮಂಜುನಾಥ್, ಜೀವನ್ ಗೋವಿಂದ ಮೊದಲಾದವರು ಇದ್ದರು.

ವರದಿ: ವಿಷ್ಣು ಕೋಲಾರ

Leave a Reply

Your email address will not be published. Required fields are marked *

Scan the code