ಆಟೋ ಚಾಲಕರು ಕಡ್ಡಾಯವಾಗಿ ನಿಯಮಗಳನ್ನು ಪಾಲನೆ ಮಾಡಬೇಕು ಪಟ್ಟಣದಲ್ಲಿ ಶಾಸಕ ಎಸ್ಎನ್ ನಾರಾಯಣ ಸ್ವಾಮಿ
(KOLARA): ಬಂಗಾರಪೇಟೆ : ಆಟೋ ಚಾಲಕರು ಪ್ರತಿದಿನ 20ಕ್ಕೂ ಹೆಚ್ಚು ಕುಟುಂಬಗಳನ್ನು ಆಟೋಗಳಲ್ಲಿ ಕರೆದುಕೊಂಡು ಹೋಗುತ್ತೀರಿ, ಅವರ ಸುರಕ್ಷತೆಗಾಗಿ ಹಾಗೂ ನಿಮ್ಮ ಸುರಕ್ಷತೆಗಾಗಿ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂದು ಶಾಸಕ ಎಸ್ ಎಂ ನಾರಾಯಣ ಸ್ವಾಮಿ ಕಿವಿಮಾತು ಹೇಳಿದರು.
ಪಟ್ಟಣದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಬಳಿ ಇರುವ ಆಟೋ ಸ್ಟ್ಯಾಂಡ್ ಬಳಿ ಕನ್ನಡ ರಾಜ್ಯೋತ್ಸವವನ್ನು ಆಚರಣೆ ಮಾಡಿ ಮಾತನಾಡುತ್ತಾ, ಆಟೋ ವೃತ್ತಿ ಪವಿತ್ರವಾದದ್ದು ಎಲ್ಲರೂ ಕಡ್ಡಾಯವಾಗಿ ಇನ್ಸೂರೆನ್ಸ್, ಡಿಎಲ್,ಆರ್ ಸಿ,ಎಫ್ ಸಿ, ಎಲ್ಲಾ ದಾಖಲೆಗಳನ್ನು ಸರಿಪಡಿಸಿಕೊಂಡಿರಬೇಕು, ಪಟ್ಟಣದಲ್ಲಿ ನೂತನವಾಗಿ ಟ್ರಾಫಿಕ್ ಇನ್ಸ್ಪೆಕ್ಟರ್ ಹಾಗೂ ಸಿಬ್ಬಂದಿ ವರ್ಗದವರು ಅನ್ನು ಆಯೋಜನೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಹಾಗೂ ಯಾವ ಚಾಲಕರ ಬಳಿ ಡಿಎಲ್ ಇಲ್ಲವೋ ಅಂಥವರ ಪಟ್ಟಿಮಾಡಿ ನಮ್ಮ ಕಚೇರಿ ಬಳಿ ಬಂದು ನೀಡಿ ಅಂತವರಿಗೆ ಉಚಿತವಾಗಿ ಡಿಎಲ್ಎನ್ನು ಮಾಡಿಕೊಡುತ್ತೇವೆ ಹಾಗಾಗಿ ನೀವೆಲ್ಲರೂ ಕಾನೂನು ಪಾಲನೆ ಮಾಡಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ರಶ್ಮಿ, ಇನ್ಸ್ಪೆಕ್ಟರ್ ನಂಜಪ್ಪ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣೆ ಅಧಿಕಾರಿ ರವಿಕುಮಾರ್ ಹಾಗೂ ಆಟೋ ಚಾಲಕರು ಇದ್ದರು.
ವರದಿ: ವಿಷ್ಣು ಕೋಲಾರ