ಕೋಲಾರನ್ಯೂಸ್

ಕಾಮಸಮುದ್ರ ಗ್ರಾಮದಲ್ಲಿ ನೂತನ ಜಿ.ವಿ ಬಾರ್ ಅಂಡ್ ರೆಸ್ಟೋರೆಂಟ್ ಉದ್ಘಾಟಿಸಿದ ಶಾಸಕ ಎಸ್ಎನ್ ನಾರಾಯಣ ಸ್ವಾಮಿ

ಕಾಮಸಮುದ್ರ ಗ್ರಾಮದಲ್ಲಿ ನೂತನ ಜಿ.ವಿ ಬಾರ್ ಅಂಡ್ ರೆಸ್ಟೋರೆಂಟ್ ಉದ್ಘಾಟಿಸಿದ ಶಾಸಕ ಎಸ್ಎನ್ ನಾರಾಯಣ ಸ್ವಾಮಿ


(KOLARA): ಬಂಗಾರಪೇಟೆ : ಗಡಿ ಭಾಗದ ಕಾಮಸಮುದ್ರ ಗ್ರಾಮದಲ್ಲಿ ಉತ್ತಮ ರೀತಿಯ ಲಾಡ್ಜ್ ಹಾಗೂ ಬಾರ್ ಅಂಡ್ ರೆಸ್ಟೋರೆಂಟ್ ಅನ್ನು ಯಾರು ಸಹ ಪ್ರಾರಂಭ ಮಾಡಿರಲಿಲ್ಲ ಈಗ ಜಿ.ವಿ ವೆಂಕಟೇಶ್ ಗೌಡ ಅವರು ಪ್ರಾರಂಭ ಮಾಡಿದ್ದಾರೆ ಎಂದು ಶಾಸಕ ಎಸ್ಎನ್ ನಾರಾಯಣಸ್ವಾಮಿ ಶುಭ ಹಾರೈಸಿದರು.


ತಾಲೂಕಿನ ಕಾಮಸಮುದ್ರ ಗ್ರಾಮದಲ್ಲಿ ನೂತನ ಜಿ.ವಿ ಲಾಡ್ಜ್ ಹಾಗೂ ಬಾರ್ ಅಂಡ್ ರೆಸ್ಟೋರೆಂಟ್ ಉದ್ಘಾಟಿಸಿ ಮಾತನಾಡುತ್ತಾ, ಭವಿಷ್ಯ ಈ ಭಾಗದಲ್ಲಿ ಇದುವರೆಗೂ ಯಾರು ಸಹ ಈ ರೀತಿ ಉತ್ತಮ ಲಾಡ್ಜ್ ಅಂಡ್ ಬಾರ್ ಮಾಡಿರಲಿಲ್ಲ, ಈ ಗಡಿ ಭಾಗದಲ್ಲಿ ಬರುವಂತಹ ಕೃಷ್ಣಗಿರಿ ಮುಖ್ಯರಸ್ತೆ, ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ರಸ್ತೆ, ಹಾಗೂ ಆಂಧ್ರ ಭಾಗಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಭಾಗದಲ್ಲಿ ಉತ್ತಮ ವ್ಯವಸ್ಥೆತವಾಗಿ ವಸತಿಗೃಹವನ್ನು ಕೊಡಬೇಕು, ಎಂಬ ಆಸೆಯಿಂದ ನಿರ್ಮಿಸಿದ್ದಾರೆ.



ಈ ಭಾಗದಲ್ಲಿ ಅನೇಕ ಕಡೆಯಿಂದ ಪ್ರವಾಸಿಗರು ಬರುತ್ತಾರೆ. ಅವರಿಗೆ ಉತ್ತಮ ವಸತಿಗೃಹ ಹಾಗೂ ಮದ್ಯಪಾನ ಒದಗಿಸುವ ನಿಟ್ಟಿನಲ್ಲಿ ಜಿ.ವಿ ಬಾರ್ ಅಂಡ್ ರೆಸ್ಟೋರೆಂಟ್ ಅನ್ನು ಇಂದು ಪ್ರಾರಂಭ ಮಾಡಲಾಗಿದೆ. ಇದನ್ನು ಎಲ್ಲಾ ಗ್ರಾಹಕ ಬಂಧುಗಳು ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.


ಈ ಸಂದರ್ಭದಲ್ಲಿ ಕಾಮಸಮುದ್ರ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಆದಿ ನಾರಾಯಣ ಕುಟ್ಟಿ, ಡಿಸಿಸಿ ಬ್ಯಾಂಕ್ ನ ನಿರ್ದೇಶಕ ಗೋವಿಂದರಾಜು, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದು, ಪಿ ಎಲ್ ಡಿ ಬ್ಯಾಂಕ್ನ ಮಾಜಿ ಅಧ್ಯಕ್ಷರಾದ ಮಂಜುನಾಥ್ ಗೌಡ, ಬಾರ್ ಅಂಡ್ ರೆಸ್ಟೋರೆಂಟ್ ನ ಮಾಲೀಕರಾದ ಜಿ.ವಿ ವೆಂಕಟೇಶ್ ಗೌಡ, ಮುಖಂಡರಾದ ಅಜ್ಜು, ಶಂಕರೇಗೌಡ, ಪ್ರಭಾಕರ್ ರೆಡ್ಡಿ, ರಂಗಾಚಾರಿ, ಪ್ರದೀಪ್, ಜೀವನ್ ಪ್ರಕಾಶ್, ನಾರಾಯಣಸ್ವಾಮಿ, ನಟರಾಜ್, ಪುರಸಭೆ ಸದಸ್ಯ ಮಂಜುನಾಥ್ ಇನ್ನು ಮೊದಲಾದವರು ಇದ್ದರು.

ವರದಿ: ವಿಷ್ಣು ಕೋಲಾರ

Leave a Reply

Your email address will not be published. Required fields are marked *

Scan the code